
<p>ಕುಡಿದ ಮತ್ತಿನಲ್ಲಿ ಪೊಲೀಸಪ್ಪನ ಅವಾಂತರಕ್ಕೆ 24ರ ಯುವತಿ ದುರಂತ ಸಾವು ಕಂಡಿದ್ದಾಳೆ. ಪೊಲೀಸ್ ಎಂದು ಕಂಠಪೂರ್ತಿ ಕುಡಿದಿದ್ದಾನೆ. ಆದರೆ ಈತನ ಆಟಾಟೋಪಕ್ಕೆ ಯುವತಿ ಸ್ಥಳದಲ್ಲೆ ಮೃತಪಟ್ಟಿದ್ದಾಳೆ.</p><p> </p><img><p>ಕೆಲ ಮುಗಿಸಿ ಮನೆಗೆ ಮರಳುತ್ತಿದ್ದ 24ರ ಹರೆಯದ ಯುವತಿ ನಿಕಿತಾ ರಸ್ತೆಯಲ್ಲೇ ದುರಂತ ಸಾವು ಕಂಡಿದ್ದಾಳೆ. ಈ ಸಾವು ಅಚಾನಕ್ಕಾಗಿ, ಆಕಸ್ಮಿಕವಾಗಿ ಸಂಭವಿಸಿದ್ದಲ್ಲ, ಪೊಲೀಸಪ್ಪನ ಅವಾಂತರಕ್ಕೆ ಅಮಾಯಕ ಯುವತಿ ಬಲಿಯಾದ ಘಟನೆ ಹರ್ಯಾಣದಲ್ಲಿ ನಡೆದಿದೆ. ದೆಹಲಿಯಿಂದ ಹರ್ಯಾಣಕ್ಕೆ ಮರಳುತ್ತಿದ್ದ ಯುವತಿ ಪೊಲೀಸ್ ಉದ್ಧಟತನಕ್ಕೆ ಬಲಿಯಾಗಿದ್ದಾಳೆ.</p><img><p>ಗುರುಗಾಂವನಲ್ಲಿ ಕೆಲಸ ಮಾಡುತ್ತಿರುವ ನಿಕಿತ ಕೆಲಸ ಮುಗಿಸಿ ಅಂಬಾಲಾಗೆ ಮರಳಿದ್ದಾಳೆ. ಅಂಬಾಲದಿಂದ ಮನೆಗೆ ತೆರಳಲು ಇ ರಿಕ್ಷಾ ಮೂಲಕ ತೆರಳಿದ್ದಾಳೆ. ಇ ರಿಕ್ಷಾ ಮೂಲಕ ತೆರಳುತ್ತಿದ್ದ ವೇಳೆ ಕಂಠಪೂರ್ತಿ ಕುಡಿದ ಪೊಲೀಸ್ ಅಧಿಕಾರಿ ಅಡ್ಡಾದಿಡ್ಡಿ ಕಾರು ಚಲಾಯಿಸಿಕೊಂಡು ಬಂದು ಇ ರಿಕ್ಷಾಗೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿಯಾದ ರಭಸಕ್ಕೆ ಇ ರಿಕ್ಷಾದಲ್ಲಿದ್ದ ನಿಕಿತಾ ನೆಲಕ್ಕೆ ಬಿದ್ದಿದ್ದಾಳೆ. ಈಕೆಯ ಮೇಲಿಂದ ಪೊಲೀಸಪ್ಪನ ಕಾರು ಹರಿದಿದೆ. ಪರಿಣಾಮ ಸ್ಥಳದಲ್ಲೇ ನಿಕಿತಾ ಮೃತಪಟ್ಟಿದ್ದಾಳೆ.</p><img><p>ಅಂಬಾಲಾ ಸೇತುವೆ ಬಳಿ ಘಟನೆ ನಡೆದಿದೆ. ಸ್ಥಳದಿಂದ ಎಸ್ಕೇಪ್ ಆಗಲು ಪೊಲೀಸಪ್ಪ ಯತ್ನಿಸಿದ್ದಾನೆ. ಆದರೆ ಪೊಲೀಸರು ಪೊಲೀಸ್ ಹಿಡಿದಿದ್ದಾರೆ. ಇತ್ತ ನಿಖಿತಾಳನ್ನು ಸ್ಥಳೀಯರು ಸಿಟಿ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಇತ್ತ ಪೋಷಕರು ಆಸ್ಪತ್ರೆಗೆ ದೌಡಾಯಿಸಿದ್ದಾರೆ.</p><img><p>ಘಟನೆ ಸಂಬಂಧ ಇ ರಿಕ್ಷಾ ಚಾಲಕನ ಹೇಳಿಕೆ ದಾಖಲಿಸಲಾಗಿದೆ. ನಾಲ್ವರು ಪ್ರಯಾಣಿಕರು ಇ ರಿಕ್ಷಾದಲ್ಲಿದ್ದರು. ಈ ಪೈಕಿ ಮೃತಪಟ್ಟ ಯುವತಿ ಬದಿಯಲ್ಲಿ ಕುಳಿತಿದ್ದರು. ವೇಗವಾಗಿ ಬಂದ ಕಾರು ಇ ರಿಕ್ಷಾಗೆ ಡಿಕ್ಕಿಯಾಗಿದೆ. ಪರಿಣಾಮ ಯುವತಿ ಕೆಳಕ್ಕೆ ಬಿದ್ದಿದ್ದಾಳೆ. ತಕ್ಷಣವೇ ಕಾರು ನಿಲ್ಲಿಸಿದರೂ ಅಪಾಯದ ಪ್ರಮಾಣ ಕಡಿಮೆಯಾಗುತ್ತಿತ್ತು. ಆದರೆ ಪೊಲೀಸ್ ಡಿಕ್ಕಿಯಾದ ಬಳಿಕ ವೇಗ ಹೆಚ್ಚಿಸಿದ್ದಾರೆ. ಪರಿಣಾಮ ಕಾರು ಯುವತಿ ಮೇಲಿಂದ ಹರಿದಿದೆ ಎಂದು ಇ ರಿಕ್ಷಾ ಚಾಲಕ ಹೇಳಿದ್ದಾರೆ.</p><img><p>ಆಸ್ಪತ್ರೆಗೆ ದೌಡಾಯಿಸಿದ ಪೋಷಕರು ಮಗಳ ಕಳೆದುಕೊಂಡ ನೋವಿನಲ್ಲಿ ಕಣ್ಣೀರಿಟ್ಟಿದ್ದಾರೆ. ಇತ್ತ ಕುಟುಂಬಸ್ಥರು ಆಪ್ತರು ಆಗಮಿಸಿ ಭಾರಿ ಪ್ರತಿಭಟನೆ ನಡೆಸಿದ್ದಾರೆ. ಪೊಲೀಸ್ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ. ಆಸ್ಪತ್ರೆ ಮುಂಭಾಗ ಭಾರಿ ಹೈಡ್ರಾಮವೇ ನಡೆದಿದೆ. ಇತ್ತ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಭದ್ರತೆ ಒದಗಿಸಿದ್ದಾರೆ.</p>
Source link
ಕುಡಿದ ಮತ್ತಿನಲ್ಲಿ ಪೊಲೀಸಪ್ಪನ ಅವಾಂತರಕ್ಕೆ 24ರ ಯುವತಿ ದುರಂತ ಸಾವು