ಪ್ರೇಮಿಗಳ ದಿನದ ಮುನ್ನವೇ ಗುಡ್​ನ್ಯೂಸ್​ ಕೊಟ್ಟ Brahmagantu ಜೋಡಿ! ಫ್ಯಾನ್ಸ್​ ಫುಲ್​ ಖುಷ್​

ಪ್ರೇಮಿಗಳ ದಿನದ ಮುನ್ನವೇ ಗುಡ್​ನ್ಯೂಸ್​ ಕೊಟ್ಟ Brahmagantu ಜೋಡಿ! ಫ್ಯಾನ್ಸ್​ ಫುಲ್​ ಖುಷ್​



ಪ್ರೇಮಿಗಳ ದಿನದ ಮುನ್ನವೇ ಗುಡ್​ನ್ಯೂಸ್​ ಕೊಟ್ಟ Brahmagantu ಜೋಡಿ! ಫ್ಯಾನ್ಸ್​ ಫುಲ್​ ಖುಷ್​
ಬ್ರಹ್ಮಗಂಟು ಸೀರಿಯಲ್‌ನಲ್ಲಿ ಅಭಿಮಾನಿಗಳು ಕಾಯುತ್ತಿದ್ದ ಕ್ಷಣ ಬಂದಿದ್ದು, ಚಿರು ದೀಪಾಗೆ ಉಂಗುರ ತೊಡಿಸಿ ಪ್ರೇಮ ನಿವೇದನೆ ಮಾಡಿಕೊಳ್ಳುವ ಮೂಲಕ ಇಬ್ಬರೂ ಒಂದಾಗಿದ್ದಾರೆ. ಆದರೆ, ಸೌಂದರ್ಯಳ ಕುತಂತ್ರ ಇನ್ನೂ ಬಯಲಾಗಬೇಕಿದ್ದು, ಹೊಸ ಸೀರಿಯಲ್‌ಗಳ ಪ್ರೊಮೋದಿಂದಾಗಿ ಬ್ರಹ್ಮಗಂಟು ಅಂತ್ಯವಾಗುವ ಸೂಚನೆ ಸಿಕ್ಕಿದೆ.<img><p>ಬ್ರಹ್ಮಗಂಟು ಸೀರಿಯಲ್​ (Brahmagantu) ಚಿರು ಮತ್ತು ದೀಪಾ ಅಭಿಮಾನಿಗಳನ್ನು ಫುಲ್​ ಖುಷ್​ ಮಾಡಿದ್ದಾರೆ. ಇನ್ನೇನು ಪ್ರೇಮಿಗಳ ದಿನಕ್ಕೆ ಎರಡೇ ದಿನ ಬಾಕಿ ಇರುವಾಗಲೇ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ಸಮಯ ಬಂದೇ ಬಿಟ್ಟಿದೆ.</p><img><p>ಇದೀಗ ನರಸಿಂಹನಿಗೆ ಸತ್ಯದ ಅರಿವಾಗಿದೆ. ಅದೇ ರೀತಿ, ಚಿರು, ದೀಪಾಗೆ ಬಾಗಿನ ತಂದು ಕಾಲಿಗೆ ಉಂಗುರ ತೊಡಿಸುವ ಮೂಲಕ, ಪ್ರೇಮ ನಿವೇದನೆ ಮಾಡಿಕೊಂಡಿದ್ದಾನೆ. ಈ ಮೂಲಕ ಚಿರು ಮತ್ತು ದೀಪಾ ಒಂದಾಗಿದ್ದಾರೆ.</p><img><p>ಚಿರು ಮೇಲಿದ್ದ ಕೋಪ ದೀಪಾಗೆ ಕಡಿಮೆಯಾಗಿದ್ದರೂ, ಚಿರು ನೇರವಾಗಿ ಇಷ್ಟಪಡುತ್ತೇನೆ ಎಂದು ಹೇಳುವವರೆಗೂ ಆತನ ಜೊತೆ ಹೋಗಲ್ಲ ಎಂದು ಹಟ ಹಿಡಿದಿದ್ದಳು. ಅದೇ ಇನ್ನೊಂದೆಡೆ ದೀಪಾಳ ಅಣ್ಣ ನರಸಿಂಹ ಕೂಡ ಚಿರು ಬಗ್ಗೆ ತಪ್ಪು ತಿಳಿದುಕೊಂಡಿದ್ದ.</p><img><p>ಇನ್ನೇನಿದ್ದರೂ ಚಿರುಗೆ ದೀಪಾನೇ ದಿಶಾ ಎನ್ನುವ ಸತ್ಯ ಗೊತ್ತಾಗಬೇಕಿದೆ. ಸತ್ಯ ಗೊತ್ತಾದರೆ ಏನಾಗುತ್ತದೋ ತಿಳಿದಿಲ್ಲ. ಅದೇ ಇನ್ನೊಂದೆಡೆ, ಸೌಂದರ್ಯಳ ಕುತಂತ್ರವೂ ಬಯಲಾಗಬೇಕಿದೆ.</p><img><p>ಅರ್ಚನಾ ಮತ್ತು ರಾಹುಲ್​ ಕೂಡ ಒಂದಾಗುವುದು ಬಾಕಿ ಇದೆ. ಇಷ್ಟಾದರೆ ಸೀರಿಯಲ್​ ಒಂದು ಅಂತ್ಯಕ್ಕೆ ಬರಲಿದೆ. ಆದರೆ ಸದ್ಯ ಅದು ಮುಗಿಯುವ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ.</p><img><p>ಇದಾಗಲೇ ಎರಡು ಹೊಸ ಸೀರಿಯಲ್​ಗಳ ಪ್ರೊಮೋ ಬಿಡುಗಡೆಯಾಗಿರುವ ಕಾರಣದಿಂದ ಪುಟ್ಟಕ್ಕನ ಮಕ್ಕಳ ಜೊತೆ ಇನ್ಯಾವ ಸೀರಿಯಲ್​ ಮುಗಿಯಲಿದೆ ಎನ್ನುವ ಕುತೂಹಲವಿದೆ. ಅದು ಬ್ರಹ್ಮಗಂಟೇ ಇರಬೇಕು ಎನ್ನುವುದು ಹಲವರ ಅಭಿಮತ.</p>



Source link

Leave a Reply

Your email address will not be published. Required fields are marked *