ಡಾ. ಬಸವರಾಜ ಗುರೂಜಿ ಅವರ ಪ್ರಕಾರ, 2026ರಲ್ಲಿ ಸಂಭವಿಸಲಿರುವ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣವು ತುಲಾ ರಾಶಿಯವರ ಐದನೇ ಮನೆಯಲ್ಲಿ ಸಂಭವಿಸಲಿದೆ, ರಾಶ್ಯಾಧಿಪತಿ ಶುಕ್ರನೂ ಸಹ ಈ ಗ್ರಹಣದಲ್ಲಿ ಭಾಗವಹಿಸಲಿದ್ದಾನೆ. ಚಿತ್ತಾ, ಸ್ವಾತಿ, ವಿಶಾಖ ನಕ್ಷತ್ರದವರಿಗೆ ಇದರ ಪ್ರಭಾವ ಇರುತ್ತದೆ.
ಗ್ರಹಣದ ಪ್ರಭಾವದಿಂದ ತುಲಾ ರಾಶಿಯವರಿಗೆ ಆಲಸ್ಯ, ನಿರುತ್ಸಾಹ, ಮಕ್ಕಳ ಬಗ್ಗೆ ಅತಿಯಾದ ಯೋಚನೆಗಳು ಕಾಡಬಹುದು. ಆದಾಗ್ಯೂ, ಗುರುಬಲ ಅದೃಷ್ಟ ಚೆನ್ನಾಗಿರುತ್ತದೆ. ಪ್ರಯತ್ನ ಪಟ್ಟರೆ ಹೆಚ್ಚು ಲಾಭ, ಸಂತಾನದಿಂದ ಒಳಿತು, ವ್ಯಾಪಾರ, ಪಾಲುದಾರಿಕೆಯಲ್ಲಿ ಯಶಸ್ಸು, ಉತ್ತಮ ಆರೋಗ್ಯ, ಸಾರ್ವಜನಿಕ ಸಂಪರ್ಕದಲ್ಲಿ ಪ್ರಗತಿ ಕಾಣುವಿರಿ. ಏಜೆಂಟ್, ಮಧ್ಯವರ್ತಿ, ದಲ್ಲಾಳಿಗಳಿಗೆ ಹಣದ ಯೋಗವಿದೆ. ಆರ್ಥಿಕವಾಗಿ ಹೆಚ್ಚು ಅವಕಾಶವಿದೆ ಮತ್ತು ಉದ್ಯೋಗ ಬದಲಾವಣೆಗೂ ಅವಕಾಶವಿದೆ. ಕಟ್ಟಡ ನಿರ್ಮಾಣ ಕಾರ್ಯಗಳಲ್ಲಿ ಸ್ವಲ್ಪ ನಿಧಾನವಾಗುತ್ತಿದೆ. ಹಿರಿಯರ ಮಾರ್ಗದರ್ಶನದಿಂದ ಪ್ರತಿಭೆಗೆ ತಕ್ಕ ಫಲ ಸಿಗಲಿದೆ. ಹೊಸ ಸಂಸ್ಥೆ ಸ್ಥಾಪನೆ, ಉದ್ಯಮಿಗಳಿಗೆ ಒಳಿತು, ವಿದೇಶ ಪ್ರವಾಸ, ಧರ್ಮ ಕಾರ್ಯಗಳಲ್ಲಿ ಭಾಗವಹಿಸುವಿಕೆ ಹಾಗೂ ವಿವಾಹ ವಿಷಯಗಳಲ್ಲಿ ಶುಭ ಕಾರ್ಯಕ್ರಮಗಳು. ಕುಟುಂಬ ಸದಸ್ಯರಲ್ಲಿ ಅನಾರೋಗ್ಯ ಕಾಡುವ ಸಾಧ್ಯತೆ ಇದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ವರ್ಷದ ಮೊದಲ ಸೂರ್ಯಗ್ರಹಣ ಮೇಷ ರಾಶಿಯವರಿಗೆ ಹೇಗಿರಲಿದೆ?
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ