ಟಿ20 ವಿಶ್ವಕಪ್ 2026: ಟಿ20 ಭಾರತದ ವಿರುದ್ಧ ಸೋಲಿನ ಸಂಖ್ಯೆಯನ್ನು ಪಾಕಿಸ್ತಾನ್ ತಂಡ ಎಂಟಕ್ಕೇರಿಸಿದೆ. ಈ ಹಿಂದೆ ಏಳು ಬಾರಿ ಸೋತಿದ್ದ ಪಾಕ್ ಪಡೆ ಇದೀಗ ಕೊಲಂಬೊದಲ್ಲೂ ಮುಗ್ಗರಿಸಿದೆ. ಆರ್ ಪ್ರೇಮದಾಸ ಮೈದಾನದಲ್ಲಿ ನಡೆದ ಈ ವಸ್ತು ಟಾಸ್ ಗೆದ್ದ ಪಾಕಿಸ್ತಾನ್ ತಂಡವು ಹಿಂದೆ ನೋಡದೇ ಬೌಲಿಂಗ್ ಆಯ್ದುಕೊಂಡಿದ್ದರು. ಆದರೆ ಟೀಮ್ ಇಂಡಿಯಾ ದಾಂಡಿಗರ ಆರ್ಭಟದ ಮುಂದೆ ಪಾಕ್ ತಂಡ ಲೆಕ್ಕಾಚಾರಗಳು ತಲೆ ಕೆಳಗಾಗಿದ್ದವು.
ಈ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 20 ಅವಶೇಷಗಳಲ್ಲಿ 7 ವಿಕೆಟ್ ಕಳೆದುಕೊಂಡು 175 ರನ್ ಕಲೆಹಾಕಿತು. ಈ ಕಠಿಣ ಗುರಿ ಬೆನ್ನತ್ತಿದ ಪಾಕಿಸ್ತಾನ ತಂಡವು 18 ವರ್ಷಗಳಲ್ಲಿ 114 ರನ್ ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಟೀಮ್ ಇಂಡಿಯಾ ವಿರುದ್ಧ ಪಾಕಿಸ್ತಾನ್ 61 ರನ್ ಗಳ ಸೋಲನುಭವಿಸಿದೆ.
ಈ ಸೋಲಿನ ಬಳಿಕ ಮಾತನಾಡಿದ ಪಾಕಿಸ್ತಾನ್ ತಂಡದ ನಾಯಕ ಸಲ್ಮಾನ್ ಅಲಿ ಅಘಾ, ನಾವು ಈ ತಂಡದ ಸ್ಪಿನ್ನರ್ಗಳ ಮೇಲೆ ಸಂಪೂರ್ಣ ನಂಬಿಕೆ ಇಟ್ಟಿದ್ದೆವು. ಆದರೆ ಅವರ ಪಾಲಿಗೆ ಇಂದು ಅತ್ಯಂತ ಕೆಟ್ಟ ದಿನವಾಗಿತ್ತು. ಜೊತೆಗೆ ಪಂದ್ಯದ ನಡುವೆ ನಮ್ಮ ಯೋಜನೆಗಳೇ ಕಾಣಲಿಲ್ಲ.
ಕಳೆದ ಆರು ತಿಂಗಳಿನಲ್ಲಿ ನಮ್ಮ ಸ್ಪಿನ್ನರ್ಗಳು ನಿಜವಾಗಿಯೂ ಕಾರ್ಯನಿರ್ವಹಿಸಿದ್ದರು. ಹೀಗಾಗಿ ನಾವು ಯಾವಾಗಲೂ ನಮ್ಮ ಸ್ಪಿನ್ನರ್ಗಳನ್ನು ನಂಬುತ್ತೇವೆ. ಅದರಂತೆ ಈ ಪಂದ್ಯದಲ್ಲೂ ನಂಬಿಕೆಯಿಟ್ಟಿದ್ದೆ. ಆದರೆ ಎಲ್ಲರೂ ಆಫ್ ಡೇನಲ್ಲಿದ್ದರು.
ಇದಾಗ್ಯೂ ನಾವು ಬ್ಯಾಟಿಂಗ್ನಲ್ಲಿ ಉತ್ತಮ ಪ್ರದರ್ಶನ ನೀಡಬಹುದಾಗಿತ್ತು ಎಂಬುದು ನನ್ನ ಭಾವನೆ. ಟಿ20 ಪಂದ್ಯಗಳಲ್ಲಿ ನಾವು ಪವರ್ಪ್ಲೇನಲ್ಲಿ 3 ಅಥವಾ 4 ವಿಕೆಟ್ಗಳನ್ನು ಕಳೆದುಕೊಂಡರೆ, ಚೇಸಿಂಗ್ ಮಾಡುವುದು ಕಷ್ಟ. ಇವೆಲ್ಲವೂ ನಮ್ಮ ಸೋಲಿಗೆ ಕಾರಣ ಎನ್ನಬಹುದು ಎಂದು ಪಾಕ್ ನಾಯಕ ಹೇಳಿದ್ದಾರೆ.
ಇನ್ನು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದರ ಬಗ್ಗೆ ಮಾತನಾಡಿದ ಸಲ್ಮಾನ್ ಅಲಿ ಅಘಾ. ಮೊದಲ ಇನ್ನಿಂಗ್ಸ್ ವೇಳೆ ಪಿಚ್ ಸ್ವಲ್ಪ ಜಿಗುಟಾಗಿತ್ತು ಎಂದು ನಾನು ಭಾವಿಸುತ್ತೇನೆ. ಚೆಂಡು ಕೂಡ ಹಿಡಿತದಲ್ಲಿತ್ತು. ಇದಾಗ್ಯೂ ನಮ್ಮ ಬೌಲರ್ಗಳಲ್ಲಿ ಯಾವುದೇ ಯೋಜನೆ ಕಾಣಿಸಲಿಲ್ಲ.
ನಮ್ಮ ಬೌಲರ್ಗಳ ಪರಿಸ್ಥಿತಿಗೆ ಅನುಗುಣವಾಗಿ ಬೌಲಿಂಗ್ ಮಾಡಲಿಲ್ಲ. ಇದರಿಂದ ಎದುರಾಳಿ ತಂಡ ಬೃಹತ್ ಮೊತ್ತ ಪೇರಿಸಲು ಸಾಧ್ಯವಾಯಿತು. ಈ ಸೋಲಿನ ನಾವು ಮುಂದಿನ ಪಂದ್ಯಗಳಲ್ಲಿ ಗೆಲ್ಲುವ ಮೂಲಕ ಗೆಲುವಿನ ಲಯಕ್ಕೆ ಮರಳಬೇಕಾಗಿದೆ. ಎರಡು ದಿನಗಳಲ್ಲೇ ನಮಗೆ ಮತ್ತೊಂದು ಮ್ಯಾಚ್ ಇದೆ. ಈ ಪಂದ್ಯವನ್ನು ಗೆದ್ದು ಸೂಪರ್ 8 ಗೆ ಅರ್ಹತೆ ಪಡೆಯಬೇಕು ಎಂಬುದೇ ನಮಗೆ ಸದ್ಯದ ಗುರಿ ಎಂದು ಸಲ್ಮಾನ್ ಅಲಿ ಅಘಾ ಹೇಳಿದ್ದಾರೆ.