ನವದೆಹಲಿ, ಫೆಬ್ರುವರಿ 16: ಎಐ ಇಂಪ್ಯಾಕ್ಟ್ ಸಮಿಟ್ 2026 (AI ಇಂಪ್ಯಾಕ್ಟ್ ಶೃಂಗಸಭೆ) ಇಂದಿನಿಂದ ಐದು ದಿನಗಳ ಕಾಲ ದೆಹಲಿಯ ಭಾರತ್ ಮಂಟಪದಲ್ಲಿ ನಡೆಯುತ್ತಿದೆ. ಇದು ನಾಲ್ಕನೇ ಆವೃತ್ತಿ ವಹಿಸಿರುವುದು, ಭಾರತ ಆತಿಥ್ಯ ಇದು ಪ್ರಥಮ. ಬಹಳ ಗುರುತರವಾಗಿರುವ ಎಐ ಇಂಪ್ಯಾಕ್ಟ್ ಶೃಂಗಸಭೆ ಹಾಗೂ ಭಾರತದ ಎಐ ದೃಷ್ಟಿಕೋನ ಇತ್ಯಾದಿ ವಿಚಾರಗಳ ಬಗ್ಗೆ ಕೇಂದ್ರ ಐಟಿ ಮತ್ತು ಉಪಾಧ್ಯಕ್ಷ ಡಾ. ಅಶ್ವಿನಿ ವೈಷ್ಣವ್ ಫಿನಾನ್ಷಿಯಲ್ ಎಕ್ಸ್ ಪ್ರೆಸ್ ಪತ್ರಿಕೆ ಸಂದರ್ಶನದಲ್ಲಿ ವಿವರವಾಗಿ ಮಾತನಾಡಿದ್ದಾರೆ.
ಭಾರತದ ಎಐ ಇಂಪ್ಯಾಕ್ಟ್ ಸಮಿತಿಯಲ್ಲಿ ಏನು ವಿಶೇಷತೆ?
ಭಾರತದಲ್ಲಿ ನಡೆಯುವ ಈ ವರ್ಷದ ಎಐ ಶೃಂಗಸಭೆಯು ಎಐ ಅನ್ನು ಒಂದು ಅಭಿವೃದ್ಧಿ ಸಾಧನವಾಗಿ ತೋರ್ಪಡಿಸುತ್ತದೆ. ಹೆಲ್ತ್ಕೇರ್, ಕೃಷಿ, ಪಬ್ಲಿಕ್ ಸರ್ವಿಸ್, ಹಣಕಾಸು ಮತ್ತು ಉದ್ದಿಮೆಗಳ ಕ್ಷಮತೆ ಎಐ ಅನ್ನು ಹೇಗೆ ಉಪಯೋಗಿಸಬಹುದು ಎಂಬುದನ್ನು ಅವಲೋಕಿಸಬಹುದಾಗಿದೆ. ನಮ್ಮ ಜೀವನದ ಮೇಲೆ ಯಾವ ಪರಿಣಾಮ ಹೇಗಿರುತ್ತೆ ಎಂಬುದನ್ನೂ ಅವಲೋಕಿಸುತ್ತದೆ ಎಂದು ಡಾ. ಎ ವೈಷ್ಣವ್ ಹೇಳಿದ್ದಾರೆ.
ಇದನ್ನೂ ಓದಿ: ಭಾರತದ ಎಐ ಇಂಪ್ಯಾಕ್ಟ್ ಸಮಿತಿಗೆ ಇಡೀ ಜಗತ್ತು ಆಕರ್ಷಿತವಾಗಿರುವುದು ಯಾಕೆ? ಅಂಥದ್ದೇನು ವಿಶೇಷತೆ ಇದೆ?
ಭಾರತದ ಐ ತಂತ್ರಜ್ಞಾನ ಮತ್ತು ಗುರಿ ಏನು?
‘ಎಐ ಸೇವೆಗಳನ್ನು ಒದಗಿಸುವುದು ನಮ್ಮ ಗುರಿ. ಇಂಡಿಯಾ ಎಐ ಸ್ಟ್ಯಾಕ್ನ ಎಲ್ಲಾ ಐದು ಲೇಯರ್ಗಳಲ್ಲಿ ಸಂಯೋಜಿತವಾದ ಮತ್ತು ಪೂರಕವಾದ ನೀತಿ ಇದೆ. ಇಂಡಿಯಾ ಐ ಮಿಷನ್ ಮೂಲಕ ಒಂದು ಸಾಮಾನ್ಯ ಕಂಪ್ಯೂಟ್ ಇನ್ಫ್ರಾಸ್ಟ್ರಕ್ಚರ್ ರಚಿಸಲಾಗಿದೆ. ದೇಶೀಯವಾಗಿರುವ ಫೌಂಡೇಶನಲ್ ಎಐ ಮಾಡಲ್ಗಳನ್ನು ಅಭಿವೃದ್ಧಿಪಡಿಸಲಾಗಿದೆ. ಈ ಮಾದರಿಗಳು ಜಾಗತಿಕ ಗುಣಮಟ್ಟವನ್ನು ತಲುಪುತ್ತಿವೆ. ಸರ್ವಮ್ನಂತಹ ಮಾದರಿಗಳ ಬಗ್ಗೆ ಒಳ್ಳೆಯ ಅಭಿಪ್ರಾಯ ಮತ್ತು ವಿಮರ್ಶೆ ಸಿಗುತ್ತಿದೆ’ ಎಂದು ಕೇಂದ್ರ ಸಚಿವರು ಈ ಸಂದರ್ಶನದಲ್ಲಿ ಅಭಿಪ್ರಾಯಪಟ್ಟಿದ್ದಾರೆ.
ಇಂಡಿಯಾ ಸೆಮಿಕಂಡಕ್ಟರ್ ಮಿಷನ್ ಮೂಲಕ ದೂರಗಾಮಿ ಎ ಅಭಿವೃದ್ದಿಗಾಗಿ ಕಷ್ಟಪಟ್ಟು ಶಕ್ತಿಯನ್ನು ಹೆಚ್ಚಿಸುವ ಕಾರ್ಯ ನಡೆಯುತ್ತಿದೆ. ಅನುಮೋದಿತವಾಗಿರುವ ಹತ್ತು ಸೆಮಿಕಂಡಕ್ಟರ್ ಘಟಕಗಳು ನಾಲ್ಕರಲ್ಲಿ ಪ್ರಾಯೋಗಿಕ ಉತ್ಪಾದನೆ ಪ್ರಾರಂಭವಾಗಿದೆ. ಈ ವರ್ಷ ಕಮರ್ಷಿಯಲ್ ಆಗಿ ಉತ್ಪಾದನೆ ಆರಂಭವಾಗುತ್ತದೆ. ಭಾರತೀಯ ಕಂಪನಿಗಳು 2ಎನ್ಎಂ ಚಿಪ್ಗಳ ಡಿಸೈನ್ ಮಾಡುತ್ತಿವೆ. 2035ರೊಳಗೆ ನಾವು ವಿಶ್ವದ ಅಗ್ರ 3-4 ಸೆಮಿಕಂಡಕ್ಟರ್ ರಾಷ್ಟ್ರಗಳ ಸಾಲಿಗೆ ಸೇರುವ ಹಾದಿಯಲ್ಲಿದ್ದೇವೆ ಎಂದು ಅಶ್ವಿನಿ ವೈಷ್ಣವ್ ವಿವರಿಸಿದ್ದಾರೆ.
ಇದನ್ನೂ ಓದಿ: ಎಐ ಇಂಪ್ಯಾಕ್ಟ್ ಶೃಂಗಸಭೆ; ಭಾರತದ ಪ್ರಗತಿಗೆ ಇಗೋ ನೋಡಿ ಸಾಕ್ಷ್ಯ ಎಂದ ಪ್ರಧಾನಿ ಮೋದಿ
ಈ ಸಮಿಟ್ ಮೂಲಕ ಭಾರತದಿಂದ ವಿಶ್ವಕ್ಕೆ ಸಂದೇಶವೇನು?
ನೈಜ ಸಮಸ್ಯೆಗಳನ್ನು ಪರಿಹರಿಸಲು ಎಐ ಬಳಕೆಯಾಗಬೇಕು ಎಂಬುದು ಭಾರತದ ಭಾವನೆ. ಆರೋಗ್ಯಪಾಲನೆಯನ್ನು ಉತ್ತಮಗೊಳಿಸಲು ಹೊಸ ತಪ್ಪು ಮಾರ್ಗಗಳು ನಡೆಯುತ್ತವೆ, ಯಾವ ಪರಿಣಾಮಗಳಿಂದ ಜಗತ್ತನ್ನು ರಕ್ಷಿಸುವುದು, ಹವಾಮಾನ ಬದಲಾವಣೆಯಂತಹ ಜಾಗತಿಕ ಸಮಸ್ಯೆಗಳಿಗೆ ಉತ್ತಮ ಪರಿಹಾರೋಪಾಯ ಮಾಡುವುದು ಇಂತಹ ಕೆಲಸಗಳನ್ನು ಎಐನಿಂದ ಮಾಡಿಸುವುದು ಭಾರತದ ನಿಲುವು ಎಂದು ಅಶ್ವಿನಿ ವೈಷ್ಣವ್ ಅವರು.
ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ