ವಿಜಯಪುರ (ಫೆಬ್ರವರಿ 19): ಪ್ರತಿ ವರ್ಷ ಈ ಬಾರಿಯೂ ವಿಜಯಪುರದ (ವಿಜಯಪುರ) ಬಬಲಾದಿ ಸ್ವಾಮೀಜಿಯು ಭವಿಷ್ಯ (Babaladi Mutya Kalajnana Bhavishya) ನುಡಿದಿದ್ದಾರೆ. ಪ್ರತಿ ವರ್ಷ ಈ ಬಾರಿಯೂ ಶಿವರಾತ್ರಿ ಅಮವಾಸ್ಯೆ ಹಿಂದೆ ಮುಂದೆ ಬಬಲಾದಿ ಜಾತ್ರೆ ನಡೆಯುತ್ತಿದೆ. ಈ ವೇಳೆ ಹೊಳೆಬಲಾದಿ ಪೀಠಾಧಿಪತಿ ಸಿದ್ಧರಾಮಯ್ಯ ಹೊಳಿಮಠ ಸ್ವಾಮೀಜಿ ಭವಿಷ್ಯ ನುಡಿದಿದ್ದು, 2026ರ ಕಾಲಜ್ಞಾನ ಭವಿಷ್ಯ ಹೇಳಿದ್ದಾರೆ. 2026ನೇ ವರ್ಷವು ಏರಿಳಿತಗಳಿಂದ ಕೂಡಿದ ವರ್ಷ ವರ್ಷ ಎಂದು ಬಬಲಾದಿ ಸದಾಶಿವ ಮುತ್ತಜ್ಜ ಕಾಲಜ್ಞಾನ ಹೇಳಿದ್ದಾರೆ. ರಾಜಕಾರಣದಲ್ಲಿ ಹೊಸ ತಿರುವು. ರೋಗ, ಯುದ್ಧ ಮತ್ತು ಪ್ರಕೃತಿ ವಿಕೋಪಗಳ ಎಚ್ಚರಿಕೆಯ ಜೊತೆಗೆ, ರೈತರಿಗೆ ಹಾಗೂ ದೇಶದ ಆರ್ಥಿಕತೆಗೆ ಲಾಭವಾಗುವ ಮಾತುಗಳನ್ನು ಕೂಡ ಹೇಳಿದ್ದಾರೆ.
ರಾಜಕೀಯ ಮತ್ತು ರಕ್ಷಣಾ ವಲಯದ ಬಗ್ಗೆಯೂ ಸದಾಶಿವ ಮುತ್ತಜ್ಜ ಮಹತ್ವದ ಸೂಚನೆ ನೀಡಲಾಗಿದೆ. ರಾಜ್ಯ ರಾಜಕಾರಣದಲ್ಲಿ ತಿರುವುಗಳು ಉಂಟಾಗಲಿವೆ ಎಂದಿರುವುದು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ನಡುವೆ ಕುರ್ಚಿ ಫೈಟ್ ತಾರ್ಕಿಕ ಅಂತ್ಯ ಕಾಣಲಿದ್ಯಾ ಎಂಬ ಚರ್ಚೆ ಶುರುವಾಗಿದೆ.