ಗದಗ, (ಫೆಬ್ರವರಿ 20): ಇತಿಹಾಸ ಪ್ರಸಿದ್ಧ ಲಕ್ಕುಂಡಿಯಲ್ಲಿ ಇತ್ತೀಚೆಗೆ ನಿಧಿಸಿಕ್ಕ ಬೆನ್ನಲ್ಲೇ, ದೇಶ ಹಾಗೂ ವಿದೇಶದ ಗಮನ ಸೆಳೆದಿದೆ. ಇದಕ್ಕೂ ಮೊದಲೇ ಮುಸ್ಲಿಂ ಮೌಲ್ವಿಯೋರ್ವ ನಿಧಿ (ಲಕ್ಕುಂಡಿ ಚಿನ್ನದ ಒಡವೆ ವಂಚನೆ)ಹುಡುಕಿಕೊಡುವುದಾಗಿ ಮೋಸ ಮಾಡಿರುವುದು ಈಗ ಬೆಳಕಿಗೆ ಬಂದಿದೆ. ಸಣ್ಣಬಸಪ್ಪ ಜಮೀನಿನಲ್ಲಿ ಬಿಂದಿಗೆ ನಕಲಿ ಚಿನ್ನ ಇಟ್ಟು ಮೌಲ್ವಿ ವಂಚಿಸಿದ್ದಾನೆ. ಆ ದೃಶ್ಯ ಇದೀಗ ಬಯಲಿಗೆ ಬಂದಿದೆ. ಈ ಸಂಬಂಧ ಉತ್ತರಾಖಂಡ ರಾಜ್ಯದ ಕಾಶಿಪುರದ ಹಜರತ್ ಮೌಲ್ವಿಯನ್ನು ಪೊಲೀಸರು ಬಂಧಿಸಿದ್ದಾರೆ. ನಿಧಿಗಾಗಿ ಸಣ್ಣಬಸಪ್ಪ, ದೊಡ್ಡಬಸಪ್ಪ ಅವರಿಂದ ಮೌಲ್ವಿ ಲಕ್ಷಾಂತರ ಹಣ ಬೇಡಿಕೆ ಇಟ್ಟಿದ್ದ. ಆದರೆ, ಹಣ ಕೊಡಲು ಒಪ್ಪದಿದ್ದಾಗ ಮೌಲ್ವಿ, ಕಾಲಿಂದ ಒದ್ದು ಎಲ್ಲವೂ ಮಣ್ಣಾಗಲಿ ಎಂದಿದ್ದ. ಸದ್ಯ ಮೌಲ್ವಿಯ ವಿಡಿಯೋ ಬಹಿರಂಗವಾಗಿದೆ.