ನಾನು ಬಾಲ್ಡಿ ಆಗಿದ್ರೂ ಸೂಪರ್​ ಹೆಂಡ್ತಿನೇ ಬೇಕು ಎಂದ್ರೆ ಸಿನಿಮಾ ಸಕ್ಸಸ್​ ಆಗಲ್ಲ: ಶೆಟ್ರ ಪಂಚ್​ಗೆ ಉಪ್ಪಿ-ಶಿವಣ್ಣ ಫಿದಾ

ನಾನು ಬಾಲ್ಡಿ ಆಗಿದ್ರೂ ಸೂಪರ್​ ಹೆಂಡ್ತಿನೇ ಬೇಕು ಎಂದ್ರೆ ಸಿನಿಮಾ ಸಕ್ಸಸ್​ ಆಗಲ್ಲ: ಶೆಟ್ರ ಪಂಚ್​ಗೆ ಉಪ್ಪಿ-ಶಿವಣ್ಣ ಫಿದಾ



ನಾನು ಬಾಲ್ಡಿ ಆಗಿದ್ರೂ ಸೂಪರ್​ ಹೆಂಡ್ತಿನೇ ಬೇಕು ಎಂದ್ರೆ ಸಿನಿಮಾ ಸಕ್ಸಸ್​ ಆಗಲ್ಲ: ಶೆಟ್ರ ಪಂಚ್​ಗೆ ಉಪ್ಪಿ-ಶಿವಣ್ಣ ಫಿದಾ
<p>ಕಡಿಮೆ ಬಜೆಟ್‌ನಲ್ಲಿ ಸತತ ಹಿಟ್ ಚಿತ್ರಗಳನ್ನು ನೀಡುತ್ತಿರುವ ರಾಜ್ ಬಿ. ಶೆಟ್ಟಿ ಅವರ ಯಶಸ್ಸಿನ ರಹಸ್ಯವನ್ನು ಉಪೇಂದ್ರ ಮತ್ತು ಶಿವರಾಜ್‌ಕುಮಾರ್ ಅವರೇ ಕೇಳಿದ್ದಾರೆ. &nbsp;ರಾಜ್ ಶೆಟ್ಟಿ ತಮ್ಮ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ.</p><img><p>ಕಡಿಮೆ ಬಜೆಟ್​ನಲ್ಲಿ ಸಿನಿಮಾ ಒಂದು ಹೇಗೆ ಚಿಂದಿ ಉಡಾಯಿಸಬಹುದು ಎನ್ನುವುದಕ್ಕೆ ಸಾಕ್ಷಿಯಾಗಿ ನಿಂತದ್ದು ಸು ಫ್ರಂ ಸೋ. ರಾಜ್ ಬಿ ಶೆಟ್ಟಿ (Raj B Shetty) ಅವರ ಈ ಚಿತ್ರ ನಿರೀಕ್ಷೆಗೂ ಮೀರಿ ಗಳಿಕೆ ಮಾಡಿದೆ. ಇತರ ಭಾಷೆಗಳಲ್ಲಿಯೂ ಚಿತ್ರಕ್ಕೆ ಸಕರ್​ ರೆಸ್ಪಾನ್ಸ್ ಸಿಗುತ್ತಿದೆ. ಭಾರಿ ಸದ್ದು ಮಾಡುತ್ತಿದೆ. ಕನ್ನಡದಲ್ಲಿ ಇನ್ನೂ ಭರ್ಜರಿ ಪ್ರದರ್ಶನ ಕಾಣುತ್ತಿರುವ ಈ ಚಿತ್ರವನ್ನು ವಿವಿಧ ಭಾಷೆಗಳಲ್ಲಿಯೂ ಡಬ್​ ಮಾಡಲಾಗಿದೆ.</p><img><p>ಇದಕ್ಕೂ ಮುನ್ನ ಒಂದು ಮೊಟ್ಟೆಯ ಕಥೆ, ಗರುಡ ಗಮನ ಸೇರಿದಂತೆ ಕಡಿಮೆ ಬಜೆಟ್​ನಲ್ಲಿ ರಾಜ್​ ಶೆಟ್ಟಿ ಮಾಡಿದ್ದ ಚಿತ್ರಗಳು ಸಕ್ಸಸ್​ ಮೇಲೆ ಸಕ್ಸಸ್​ ಕಂಡು, ಸಿನಿಮಾ ಇಂಡಸ್ಟ್ರಿಯನ್ನೇ ಕುತೂಹಲಕ್ಕೆ ತಳ್ಳಿರುವುದು ಇದೆ. ಇದೀಗ ರಾಜ್​ ಅವರು ಮಾಲಿವುಡ್ (Mollywood)ನಲ್ಲೂ ಮಿಂಚಿದ್ದಾರೆ. ಬಾಲಿವುಡ್ ಮತ್ತು ಕಾಲಿವುಡ್ ಮಾತ್ರ ಇತ್ತು. ಆದರೆ ಇದೀಗ ಪಾಕೆಟ್ ನಾವೆಲ್ ಎನ್ನುವ ಕಾಲಿವುಡ್​ನಲ್ಲಿ ನಟಿಸಿದ್ದಾರೆ.</p><img><p>ಇಷ್ಟೆಲ್ಲಾ ಸಕ್ಸಸ್​ ಗಳಿಸ್ತಿರೋ ರಾಜ್​ ಶೆಟ್ಟಿ ಅವರ ಸೀಕ್ರೇಟ್​ ಏನು ಎನ್ನುವ ಬಗ್ಗೆ ಖುದ್ದು ಸ್ಟಾರ್​ ನಟರಾದ ಉಪೇಂದ್ರ ಮತ್ತು ಶಿವರಾಜ್​ಕುಮಾರ್​ ಅವರಿಗೂ ಕುತೂಹಲ ತಂದಿದೆ ಎನ್ನುವುದಕ್ಕೆ ಒಂದು ವಿಡಿಯೋ ಸಾಕ್ಷಿಯಾಗಿದೆ. suddimanekannada ಇನ್​ಸ್ಟಾಗ್ರಾಮ್​ನಲ್ಲಿ ಈ ಸಂದರ್ಶವನ್ನು ಶೇರ್​ ಮಾಡಲಾಗಿದೆ. ಇದರಲ್ಲಿ ಉಪೇಂದ್ರ ಅವರು, ಇಂಥ ಹಿಟ್​ ಚಿತ್ರಗಳನ್ನು ಕಡಿಮೆ ಬಜೆಟ್​ನಲ್ಲಿ ಕೊಡಲು ಹೇಗೆ ಸಾಧ್ಯವಾಯ್ತು ಎಂದು ರಾಜ್​ ಶೆಟ್ಟಿ ಅವರನ್ನು ಪ್ರಶ್ನಿಸಿದ್ದಾರೆ. ನೀವು ಸಿಂಪಲ್ ಕಥೆಯನ್ನು ಜನರಿಗೆ ತಲುಪಿಸುವ ರೀತಿ, ನಿಮ್ಮ ಸ್ಟ್ರಾಟಜಿ ಗುಟ್ಟು ಹೇಳಿ ಎಂದಿದ್ದಾರೆ.</p><img><p>ಅದಕ್ಕೆ ರಾಜ್​ ಬಿ.ಶೆಟ್ಟಿಯವರು ನಾವು ಯಾವುದನ್ನು ಗ್ರೇಟ್​ ಮಾಡಬೇಕು ಎನ್ನೋ ಹಟದಿಂದ ಮಾಡಿದರೆ ಅಲ್ಲಿ ಇಗೋ ಬರುತ್ತದೆ. ಕುವೆಂಪು, ಶಿವರಾಮ್​ ಕಾರಂತ್​ ಅವರು ಯಾವತ್ತಿಗೂ ತಾವು ಗ್ರೇಟ್​ ಆಗಬೇಕು ಎಂದು ಬರೆದಿಲ್ಲ. ಆದರೆ ಅವರು ಗ್ರೇಟ್​ ಆದರು. ಅದನ್ನೇ ನಾವು ಅಳವಡಿಸಿಕೊಳ್ಳಬೇಕು ಎಂದಿದ್ದಾರೆ. ಆದರೆ ನಾವು ಯಾವುದನ್ನೋ, ಯಾರನ್ನೋ ಮೆಚ್ಚಿಸಲು, ಅದನ್ನು ಗ್ರೇಟ್​ ಮಾಡಲು ಹೋಗಿ ಎಡವ್ತಾ ಇದ್ದೇವೆ ಎಂದಿದ್ದಾರೆ.</p><img><p>ನನ್ನೊಳಗಿನ ಹುಡುಕಾಟವೇ ನನ್ನ ಒಂದು ಮೊಟ್ಟೆಯ ಕಥೆಗೆ ಪ್ರೇರೇಪಣೆ ಆಯಿತು. ನಾವು ಸಾಮಾನ್ಯವಾಗಿ ನನ್ನ ತಲೆಯಲ್ಲಿ ಕೂದಲಿಲ್ಲ ಅಂದ್ರೂ ಸ್ಮಾರ್ಟ್​ ಆಗಿರೋ ಹುಡುಗಿ ಬೇಕು ಅಂತೇವೆ. ಏಕೆಂದ್ರೆ ನಮ್ಮ ಹೆಂಡ್ತಿಯನ್ನು ಸಮಾಜಕ್ಕೆ ಟ್ರೋಫಿ ರೂಪದಲ್ಲಿ ತೋರಿಸಲು ಬಯಸ್ತೇವೆ. ಇದ್ಯಾಕೆ ಈ ರೀತಿ ಮನಸ್ಥಿತಿ ಎನಿಸಿಯೇ ಆ ಸಿನಿಮಾ ಮಾಡಿದೆ ಎಂದಿದ್ದಾರೆ.</p><img><p>Garuda Gamana Vrishabha Vahana (ಗರುಡ ಗಮನ ವೃಷಭ ವಾಹನ) ಚಿತ್ರ ಮಾಡುವಾಗ ಒಂದು ಮೊಟ್ಟೆಯ ಕಥೆ ಹಿಟ್ ಆಗಿತ್ತು. ಯಶಸ್ಸಿಗೆ ಸಾವಿರ ತಂದೆ ಎನ್ನೋ ಹಾಗೆ ಹಲವರು ಅದರ ಯಶಸ್ಸನ್ನು ಪಡೆದರು. ಇದ್ಯಾಕೆ ಹೀಗೆ ಎಂದು ನನಗೆ ಅನ್ನಿಸಿತು. ಆ ಸಂದರ್ಭದಲ್ಲಿ ಇಬ್ಬರು ಗ್ಯಾಂಗ್​ಸ್ಟರ್​ ಬೆಳೆದು ಒಟ್ಟಿಗೇ ಇರ್ತಾರೆ, ಆಮೇಲೆ ಇದೇ ಅವರಿಂದ ದೂರ ಹೋಗ್ತಾರೆ. ಇದ್ಯಾಕೆ ಎನ್ನುವ ಉತ್ತರ ಸಿಗಲ್ಲ. ನಾವು ಏನು ಹುಡುತ್ತೇವೋ ನಮಗೆ ಗೊತ್ತಿರಲಿಲ್ಲ. ಅದರ ಪ್ರತಿಫಲ ಈ ಚಿತ್ರವಾಯ್ತು,ಅದು ಯಶಸ್ಸು ಪಡೆಯಿತು ಎಂದಿದ್ದಾರೆ.</p><img><p>ಹುಡುಕಾಟದಿಂದ ಕಥೆ ಬರಬೇಕು, ಯೋಚನೆಯಿಂದ ಅಲ್ಲ ಎಂದಾಗ ಉಪೇಂದ್ರ ಅವರು ಎರಡರ ವ್ಯತ್ಯಾಸ ಕೇಳಿದರು. ಯೋಚನೆ ಹೊರಗಡೆಯಿಂದ ಬರುತ್ತದೆ, ಹುಡುಕಾಟ ಒಳಗಿನಿಂದ ಬರುತ್ತದೆ ಎಂದಾಗ ಉಪ್ಪಿ ಮತ್ತು ಶಿವರಾಜ್​ ಕುಮಾರ್​ ಇಬ್ಬರೂ ಫಿದಾ ಆದರು. ರಾಜ್​ ಬಿ.ಶೆಟ್ಟಿ ಅವರ ಯಶಸ್ಸು ಅಲ್ಲಿಯೇ ಅನಾವರಣಗೊಂಡಿತು.</p>



Source link

Leave a Reply

Your email address will not be published. Required fields are marked *