
ಬೆಂಗಳೂರು.ವಿಜಯನಗರ ಚಂದ್ರಲೇಔಟ್ ನಲ್ಲಿರುವ ಅಪ್ಪು ಮ್ಯೂಸಿಕ್ ಅಕಾಡೆಮಿಯಲ್ಲಿ ಮಧುರ ಗೆಳೆಯರ ಬಳಗದ ವತಿಯಿಂದ ಸಂಗೀತ ಸಂಭ್ರಮ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗಿತ್ತು.ಈ ಸಮಾರಂಭದಲ್ಲಿ ರಾಮನಗರ ಜಿಲ್ಲೆಯ ನಿವೃತ್ತ.ಭೂಗೋಳಶಾಸ್ತ್ರ ಉಪನ್ಯಾಸಕರಾದ ಶ್ರೀ ಪೂರ್ಣಚಂದ್ರ ಎಂ.ಎ. ಖ್ಯಾತ ಗಾಯಕರಾದ ಡಾ. ಹೆಚ್.ಕೆ.ರಘು.(ರಘು ಹೂವಿನ ಕಟ್ಟೆ.).ಗಾಯಕರು. ಸಮಾಜ ಸೇವಕರಾದ ಶ್ರೀ ಅಶೋಕ್ ಪೋತಿ. ಇವರು ಸಂಗೀತ ಕ್ಷೇತ್ರದಲ್ಲಿ ಮಾಡಿರುವ ಸಾಧನೆಯನ್ನು ಪರಿಗಣಿಸಿ ಹಿರಿಯ ರಂಗಭೂಮಿಯ ಕಲಾವಿದರಾದ ಡಾ.ಪಿ.ರುದ್ರಪ್ಪ ಅವರು ಮಧುರ ಆದರ್ಶ ಗಾಯಕರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಿದರು.ಈ ಸಂದರ್ಭದಲ್ಲಿ ಬಳಗದ ಗೌರವಾಧ್ಯಕ್ಷರಾದ ಡಾ.ಸಿ.ಜಯಲಕ್ಷ್ಮಿ.ದ್ವಿಕಂಠ ಗಾಯಕ ಶ್ರೀ ಶ್ರೀನಿವಾಸ್.ಗಾಯಕಿ ಅನೀತಾ ಜೀನಿತ್. ವಿಶ್ವಮಾನವ ಸಾಂಸ್ಕೃತಿಕ ಪ್ರತಿಷ್ಠಾನದ ಉಪಾಧ್ಯಕ್ಷರಾದ ಶ್ರೀಮತಿಟ ಮಧುಮಾಲತಿ. ಬಳಗದ ಅಧ್ಯಕ್ಷರಾದ ಡಾ.ಎಂ.ಪುಟ್ಟರಾಜು ಉಪಸ್ಥಿತರಿದ್ದರು.