
ಮುಸ್ಲಿಂ ಮಹಿಳೆ ಎಂದು ಗೊತ್ತಾಗುತ್ತಿದ್ದಂತೆ ಕೊಟ್ಟ ಹೊದಿಕೆ ಮರಳಿ ಪಡೆ ಮಾಜಿ ಬಿಜೆಪಿ ಶಾಸಕ, ಮೋದಿಗೆ ಬಯ್ಯುವವರಿಗ ಹೋದಿಕೆ ಪಡೆಯುವ ಅರ್ಹತೆ ಇಲ್ಲಾ ಎಂದು ಮರಳಿ ಪಡೆದ ಘಟನೆ ನಡೆದಿದೆ. ಇದು ಕೋಲಾಹಲಕ್ಕೆ ಕಾರಣವಾಗಿದೆ.
ಜೈಪುರ (ಫೆ.23) ರಾಜಕಾರಣಿಗಳು ಚುನಾವಣೆ ವೇಳೆ, ಚುನಾವಣೆ ಬಳಿಕ ಮತದಾರರ ಸೆಳೆಯಲು ಕಸರತ್ತು ಮಾಡುವುದು ಹೋಸದೇನಲ್ಲ.ಯಾವುದೇ ಸಮಾಜಿಕ ಕಾರ್ಯ, ಯೋಜನೆ ಜಾರಿಗೊಳಿಸಿದರೂ ಅದರೊಳಗೆ ಒಂದು ರಾಜಕೀಯ ಅಡಗಿರುತ್ತೆ. ಇತ್ತ ಬಿಜೆಪಿಯ ಮಾಜಿ ಶಾಸಕ ಹೊದಿಕೆ ಹಂಚುವ ಕಾರ್ಯಕ್ರಮ ಆಯೋಜಿಸಿದ್ದಾರೆ. ನಿರ್ಗತಿಕರಿಗೆ, ಸಾರ್ವಜನಿಕ ಪ್ರದೇಶದಲ್ಲಿ ಕೊರೆವ ಚಳಿಯಲ್ಲಿ ಮಲಗುವ ಹಲವರಿಗೆ ಮಾಜಿ ಶಾಸಕ ಹೊದಿಕೆ ಹಂಚಿದ್ದಾರೆ. ಹೀಗೆ ಹಂಚುತ್ತಿದ್ದ ವೇಳೆ ತಾನು ಹಂಚಿದ ಹೊದಿಕೆ ಮುಸ್ಲಿಮ್ ಮಹಿಳೆಗೆ ಹೋಗಿದೆ ಎಂದು ಗೊತ್ತಾಗುತ್ತಿದ್ದಂತೆ ತಕ್ಷಣವೇ ವಾಪಸ್ ಪಡೆದ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಪ್ರತಿ ದಿನ ಪ್ರಧಾನಿ ಮೋದಿಗೆ ಬೈಯ್ಯುವವರು ಹೊದಿಕೆ ಪಡೆಯಲು ಅರ್ಹರಲ್ಲ ಎಂದಿದ್ದಾರೆ.
ರಾಜಸ್ಥಾನದ ಬಿಜೆಪಿ ಮಾಜಿ ಶಾಸಕ ಸುಕ್ಬೀರ್ ಸಿಂಗ್ ಜೌನಪುರಿಯಾ ಇದೀಗ ವಿವಾದದ ಸುಳಿಗೆ ಸಿಲುಕಿದ್ದಾರೆ. ಸುಕ್ಬೀರ್ ಸಿಂಗ್ ತನ್ನ ಕ್ಷೇತ್ರದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಮಂದಿಗೆ ನೆರವು ನೀಡಲು ಮುಂದಾಗಿದ್ದಾರೆ. ಪ್ರತಿ ತಿಂಗಳು ಒಂದೊಂದು ರೀತಿಯಲ್ಲಿ ಸುಕ್ಬೀರ್ ಸಿಂಗ್ ನೆರವು ನೀಡತ್ತಿದ್ದಾರೆ. ಆರ್ಥಿಕವಾಗಿ ಸೇರಿದಂತೆ ಇತರ ರೂಪಗಳಲ್ಲಿ ನರೆವು ನೀಡುತ್ತಿದ್ದಾರೆ. ಆದರೆ ಈ ಬಾರಿಯ ನೆರವು ವಿವಾದಕ್ಕೆ ಗುರಿಯಾಗಿದೆ.
ಹೆಸರು ಕೇಳಿದ ಶಾಸಕ
ಸುಕ್ಬೀರ್ ಸಿಂಗ್ ತನ್ನ ಸಿಬ್ಬಂದಿಗಳ ಜೊತೆ ನಿರ್ಗತಿಕರಿಗೆ ಹೊದಿಕೆ ಹಂಚಿದ್ದಾರೆ. ಉಚಿತವಾಗಿ ಹೊದಿಕೆ ಹಂಚುತ್ತಾ ಬಂದಿದ್ದಾರೆ. ಈ ವೇಳೆ ಅನುಮಾನಗೊಂಡ ಸುಕ್ಬೀರ್ ಸಿಂಗ್ ಹೊದಿಕೆ ಹಂಚಿದ ಮಹಿಳೆಯ ಹೆಸರು ಕೇಳುವಂತೆ ಸಿಬ್ಬಂದಿಗೆ ಸೂಚಿಸಿದ್ದಾರೆ. ಸುಕರನ್ ಖಾನ್ ಅನ್ನೋ ಮಹಿಳೆ ತನ್ನ ಹೆಸರು ಹೇಳಿದ್ದಾಳೆ. ಈ ಹೆಸರು ಕೇಳುತ್ತಿದ್ದಂತೆ ಸುಕ್ಬೀರ್ ಸಿಂಗ್ ಕೆರಳಿ ಕೆಂಡವಾಗಿದ್ದಾರೆ.
ಪ್ರಧಾನಿ ಮೋದಿ ಬಯ್ಯುವವರು ನಾನು ಕೊಡುವ ಹೊದಿಕೆ ಪಡೆಯಲು ಅರ್ಹರಲ್ಲ. ನಿಮಗೆ ಬೇಜಾರಾದರೂ ನನಗೆ ಏನೂ ಮಾಡಲು ಸಾಧ್ಯವಿಲ್ಲ. ಮೋದಿ ಯೋಜನೆ ವಿರೋಧಿಸುತ್ತೀರಿ, ಮೋದಿಗೆ ಬಯ್ಯುತ್ತೀರಿ. ಮೋದಿಗೆ ಬೈದು ಇದೀಗ ಹೊದಿಕೆ ಪಡೆಯಲು ಸಾಧ್ಯವಿಲ್ಲ ಎಂದು ಕ್ಯಾಮೆರಾ ಮುಂದೆ ಹೇಳಿದ್ದಾರೆ. ಇದು ಸರ್ಕಾರದ ಯೋಜನೆಯಲ್ಲ, ನಾನು ವೈಯುಕ್ತಿಕವಾಗಿ ನೀಡುತ್ತಿರುವ ಯೋಜನೆ. ನನ್ನ ಯೋಜನೆಯಲ್ಲಿ ಮೋದಿಗೆ ಬೈದು ಫಲಾನುಭವಿಗಳಾಗಲು ಸಾಧ್ಯವಿಲ್ಲ ಎಂದು ತಮ್ಮ ಹೇಳಿಕೆಗೆ ಸಮರ್ಥನೆಯನ್ನೂ ನೀಡಿದ್ದಾರೆ.
ಈ ವಿಡಿಯೋ ಕೋಲಾಹಲ ಸೃಷ್ಟಿಸಿದೆ. ಹಲವರು ಸುಕ್ಬೀರ್ ಸಿಂಗ್ ನಡೆಯನ್ನು ಟೀಕಿಸಿದ್ದಾರೆ. ಕಾಂಗ್ರೆಸ್ ನಾಯಕರು ಸುಕ್ಬೀರ್ ವಿರುದ್ದ ಮುಗಿ ಬಿದ್ದಿದ್ದಾರೆ.
ಉಚಿತವಾಗಿ ಹಂಚಿದ ಬಳಿಕ ಮರಳಿ ಪಡೆಯಬಾರದು. ಈ ಮಾಜಿ ಶಾಸಕರು ಮೊದಲೇ ಇದು ಹಿಂದೂಗಳಿಗೆ ಮಾತ್ರ ಎಂದು ಘೋಷಿಸಬೇಕಿತ್ತು. ಕೊಟ್ಟ ಬಳಿಕ ಮರಳಿ ಪಡೆಯುವುದು ಸರಿಯಾದ ನಿರ್ಧಾರವಲ್ಲ ಎಂದು ಹಲವರು ಸುಕ್ಬೀರ್ ಸಿಂಗ್ ನಡೆಯನ್ನು ಪ್ರಶ್ನಿಸಿದ್ದಾರೆ.
Scroll to load tweet…