ವೃದ್ಧೆ ಅನುಮಾಸ್ಪದ ಸಾವು: ಇನ್ನೇನು ಅಂತ್ಯಕ್ರಿಯೆ ಮಾಡ್ಬೇಕು ಎನ್ನುವಷ್ಟರಲ್ಲೇ ಸಾವಿನ ರಹಸ್ಯ ಬಯಲು

ವೃದ್ಧೆ ಅನುಮಾಸ್ಪದ ಸಾವು: ಇನ್ನೇನು ಅಂತ್ಯಕ್ರಿಯೆ ಮಾಡ್ಬೇಕು ಎನ್ನುವಷ್ಟರಲ್ಲೇ ಸಾವಿನ ರಹಸ್ಯ ಬಯಲು


ದಾವಣಗೆರೆ, (ಫೆಬ್ರವರಿ 23): ಜಿಲ್ಲೆಯ ನ್ಯಾಮತಿ ತಾಲೂಕಿನ ಆರುಂಡಿ ಗ್ರಾಮದಲ್ಲಿ ಇದೇ ತಿಂಗಳ 2ರಂದು ಗ್ರಾಮಸ್ಥರೆಲ್ಲ ಹಬ್ಬದ ಸಂಭ್ರಮದಲ್ಲಿದ್ದರು. ಆದರೆ ಮಾರನೇ ದಿನವೇ ಗ್ರಾಮದ 64 ವರ್ಷದ ಕಮಲಮ್ಮ ಹುಬ್ಬಳ್ಳಿದ್ಳು. ಒಂಟಿ ಮಹಿಳೆ ಹೃದಯಾಘಾತದಿಂದ ಪ್ರಕಟಿಸಿದ್ದಾರೆ ಅಂದುಕೊಂಡಿದ್ದರು. ಆದರೆ, ಅಂತ್ಯಕ್ರಿಯೆ ಹೊತ್ತಲ್ಲಿ ವೃದ್ಧೆಯ ಮೈಮೇಲಿದ್ದ ಒಡವೆ ಕಾಣೆಯಾಗಿರುವುದು ಸಂಬಂಧಿಯೊಬ್ಬರಿಗೆ ಸಂಶಯ ಬಂದಿದೆ. ಈ ವಿಷಯ ತಿಳಿದು ಅಖಾಡಕ್ಕಿಳಿದ ವೈದ್ಯರು ವೃದ್ಧೆಯ ಸಾವಿನ ರಹಸ್ಯ ಬಯಲಿಗೆ ಬಂದಿದ್ದು, ವೃದ್ಧೆ ಹೃದಯಾಘಾತದಿಂದ ಪ್ರಕಟವಾಗಿಲ್ಲ. ಬದಲಾಗಿ ಅಭಿಷೇಕ್ ಎಂಬಾತನೇ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ.

ಹಂತಕ ಶಿವಮೊಗ್ಗ ಮೂಲದ ಅಭಿಷೇಕ್ Msc ಓದಿದ್ದ. ಆನ್‌ಲೈನ್ ಗೇಮ್ ಚಟಕ್ಕೆ ಬಿದ್ದು 20ರಿಂದ 25 ಲಕ್ಷ ಸಾಲ ಮಾಡಿಕೊಂಡಿದ್ದ. ಸಾಲಕೊಟ್ಟವರ ಕಾಟ ಜಾಸ್ತಿ ಆಗ್ತಿದ್ದಂತೆ ಬಿಟ್ಟೋನು 2 ತಿಂಗಳ ಕಾಲ ಇಲ್ಲಿ ಸುತ್ತಾಡಿ ಫೆಬ್ರವರಿ 2ರಂದು ದಾವಣಗೆರೆಯ ಆರುಂಡಿ ಗ್ರಾಮಕ್ಕೆ ಎಂಟ್ರಿಕೊಟ್ಟಿದ್ದ. ಈ ವೇಳೆ ವೃದ್ಧೆ ಕಮಲಮ್ಮನ ನೋಡ್ತಿದ್ದಂತೆ ಪಾಪಿಯ ಕಣ್ಣು ಒಡವೆ ಮೇಲೆ ಬಿದ್ದಿತ್ತು.

ಇದನ್ನೂ ಓದಿ: ಸಾಕು ಮಗ-ತಂಗಿಯಿಂದಲೇ ಮಹಿಳೆಯ ಹತ್ಯೆ: ವ್ಯಕ್ತಿಯಿಂದ ಬಯಲಾಯ್ತು ಕೊಲೆ ರಹಸ್ಯ

ಎಲ್ಲರೂ ಹಬ್ಬದ ಖುಷಿಯಲ್ಲಿದ್ರೆ, ಇವನು ಸದ್ದಿಲ್ಲದೆ ವೃದ್ಧೆಯನ್ನು ಉಸಿರುಗಟ್ಟಿಸಿ 8 ಲಕ್ಷ 44 ಸಾವಿರ ರೂ. ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿತ್ತು. ಬಳಿಕ ಅದೇ ಒಡವೆ ಅಡವಿಟ್ಟು ಮತ್ತೆ ಆನ್‌ಲೈನ್ ಗೇಮ್ ಆಡಿದ್ದ. ಸದ್ಯಕ್ಕೆ ಅಭಿಷೇಕ್‌ಗೆ ಜೈಲು ದಾರಿ ತೋರಿಸಿದ್ದಾರೆ. ಚೆನ್ನಾಗಿ ಓದಿರುವ ವಿದ್ಯಾವಂತರೇ ಹೀಗೆ ದುಶ್ಚಟಗಳಿಗೆ ಬಿದ್ದು ಕೊಲೆ, ಸುಲಿಗೆ ಮಾಡ್ತಿರೋದು ಜನರನ್ನ ಬೆಚ್ಚಿ ಬೀಳಿಸಿದೆ.

ಕರ್ನಾಟಕದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *