ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಪ್ರಸಾರವಾದ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಫೆಬ್ರವರಿ 24, ಮಂಗಳವಾರದ ದ್ವಾದಶ ರಾಶಿಗಳ ಫಲಫಲಗಳನ್ನು ವಿವರಿಸಿದ್ದಾರೆ. ಈ ದಿನ ವಿಶ್ವಾವಸುನಾಮ ಸಂವತ್ಸರ,ಉತ್ತರಾಯಣ, ಉತ್ತರಾಯಣ, ಫಾಲ್ಗುಣ ಮಾಸ, ಶಿಶಿರ ಋತು, ಶುಕ್ಲಪಕ್ಷ, ಸಪ್ತಮಿ ತಿಥಿಯಾಗಿದೆ. ಈ ದಿನ ಕೃತಿಕಾ ನಕ್ಷತ್ರದಲ್ಲಿ ಚಂದ್ರ ಸಂಚರಿಸಲಿದೆ, ರವಿ ಕುಂಭ ರಾಶಿಯಲ್ಲಿದ್ದಾನೆ. ಇಂದು ಸರ್ವ ಸಿದ್ಧಿ ಕಾಲವು 11:04 ರಿಂದ 12:33 ರ ವರೆಗೆ ಇರುತ್ತದೆ. ಸುಬ್ರಮಣ್ಯ ಮತ್ತು ಹನುಮಂತನ ಅನುಗ್ರಹಕ್ಕೆ ವಿಶೇಷ ದಿನವಾಗಿದೆ.
ದ್ವಾದಶ ರಾಶಿಗಳಲ್ಲಿ ಮೇಷ ರಾಶಿಯವರಿಗೆ ಇಂದು ನಾಲ್ಕು ಗ್ರಹಗಳ ಶುಭಫಲವಿದ್ದು, ಜವಾಬ್ದಾರಿಗಳು ಹೆಚ್ಚಲಿವೆ. ಆದಾಯ ಮತ್ತು ಕುಟುಂಬದ ಬೆಂಬಲ ಚೆನ್ನಾಗಿರುತ್ತದೆ. ವೃಷಭ ರಾಶಿಯವರಿಗೆ ಐದು ಗ್ರಹಗಳ ಶುಭಫಲ ದೊರೆಯಲಿದೆ, ಆರ್ಥಿಕ ವೃದ್ಧಿ, ವೃತ್ತಿಯಲ್ಲಿ ಉತ್ತಮ ಸ್ಥಿತಿ ಮತ್ತು ಹಳೆಯ ಬಾಕಿ ವಸೂಲಿ ಯೋಗವಿದೆ ಎಂದು ಬಸವರಾಜ ಗುರೂಜಿ ಹೇಳಿದ್ದಾರೆ.