
ಅಯ್ಯಪ್ಪ ದೀಕ್ಷೆಯು 41 ದಿನಗಳ ಕಾಲ ನಡೆಯುವ ಕಠಿಣ ವ್ರತವಾಗಿದ್ದು, ಈ ಸಮಯದಲ್ಲಿ ಭಕ್ತರು ಕಪ್ಪು ವಸ್ತ್ರ ಧರಿಸುವುದು, ಪಾದರಕ್ಷೆ ಬಿಡುವುದು, ಬ್ರಹ್ಮಚರ್ಯ ಪಾಲನೆ ಮತ್ತು ಮಾಂಸಾಹಾರ, ಈರುಳ್ಳಿ, ಬೆಳ್ಳುಳ್ಳಿ ಹಾಗೂ ಮದ್ಯಪಾನದಿಂದ ದೂರವಿರಬೇಕಾಗುತ್ತದೆ. ಇಂತಹ ಕಠಿಣ ನಿಯಮಗಳ ನಡುವೆಯೂ ಚರಣ್ ಪಾರ್ಟಿಗೆ ಬಂದಿದ್ದನ್ನು ಜನರು ಪ್ರಶ್ನಿಸಿದ್ದರು.