Headlines

Bhagyalakshmi: ಕೊನೆಗೂ ಹೀಗೆ ಆಗೋಯ್ತಾ? ಆದಿ ಬಿಟ್ಟು ತಾಂಡವ್​ ಜೊತೆಗೇ ಬಂದುಬಿಟ್ಟಳಾ ಭಾಗ್ಯ?

Bhagyalakshmi: ಕೊನೆಗೂ ಹೀಗೆ ಆಗೋಯ್ತಾ? ಆದಿ ಬಿಟ್ಟು ತಾಂಡವ್​ ಜೊತೆಗೇ ಬಂದುಬಿಟ್ಟಳಾ ಭಾಗ್ಯ?



Bhagyalakshmi: ಕೊನೆಗೂ ಹೀಗೆ ಆಗೋಯ್ತಾ? ಆದಿ ಬಿಟ್ಟು ತಾಂಡವ್​ ಜೊತೆಗೇ ಬಂದುಬಿಟ್ಟಳಾ ಭಾಗ್ಯ?
ಭಾಗ್ಯಲಕ್ಷ್ಮಿ ಧಾರಾವಾಹಿಯಲ್ಲಿ ತಾಂಡವ್ ಬದಲಾದವನಂತೆ ಮರಳಿ ಬಂದಿದ್ದು, ಭಾಗ್ಯಳನ್ನು ಕ್ಷಮಿಸುವಂತೆ ಕೇಳುತ್ತಿದ್ದಾನೆ. ಭಾಗ್ಯ ಆಕಸ್ಮಿಕವಾಗಿ ತಾಂಡವ್‌ಗೆ ಸಹಾಯ ಮಾಡಿದ್ದು ಆದಿಗೆ ಆಘಾತ ನೀಡಿದೆ. ಇವರಿಬ್ಬರು ಒಂದಾಗುತ್ತಾರೆ ಎಂಬ ಗುಂಡಣ್ಣನ ಪೋಸ್ಟ್ ಅಭಿಮಾನಿಗಳಲ್ಲಿ ಹೊಸ ಚರ್ಚೆ ಹುಟ್ಟುಹಾಕಿದೆ.<img><p>ಭಾಗ್ಯಲಕ್ಷ್ಮಿ ಸೀರಿಯಲ್​ನಲ್ಲಿ (Bhagyalakshmi Serial) ಸದ್ಯ ಆದಿ ಮತ್ತು ಭಾಗ್ಯ ಒಂದಾಗುವ ಹೊತ್ತಿನಲ್ಲಿಯೇ ತಾಂಡವ್​ ಎಂಟ್ರಿ ಕೊಟ್ಟಿದ್ದಾನೆ. ತಾನು ಬದಲಾಗಿದ್ದೇನೆ. ನನ್ನನ್ನು ಕ್ಷಮಿಸಿ ಎಂದು ಭಾಗ್ಯ ಸೇರಿದಂತೆ ಎಲ್ಲರ ಬಳಿ ಗೋಗರೆಯುತ್ತಿದ್ದಾನೆ.</p><img><p>ಗಂಡ ಏನು ಮಾಡಿದ್ರೂ ಸರಿ, ಅದನ್ನು ಸಹಿಸಿಕೊಂಡು ಹೋಗಬೇಕು, ಹೇಗೋ ಈಗ ಒಳ್ಳೆಯವನಾಗಿದ್ದಾನೆ ಎನ್ನುವುದು ಭಾಗ್ಯಳ ಅಮ್ಮ ಸುನಂದಾ ಮಾತು. ಜೊತೆಗೆ ಭಾಗ್ಯ ಮಗಳು ತನ್ವಿ ಕೂಡ ಅಪ್ಪನ ಪರ. ಆದರೆ ಕುಸುಮಾ, ಭಾಗ್ಯ ಸೇರಿದಂತೆ ಯಾರೂ ತಾಂಡವ್​ ಮಾತು ಕೇಳಲು ತಯಾರು ಇಲ್ಲ.</p><img><p>ಇದರ ನಡುವೆಯೇ, ತಾಂಡವ್​ ಏನೋ ತರಕಾರಿ ಕಟ್​ ಮಾಡಲು ಹೋಗಿ ಬೆರಳು ಕಟ್ ಮಾಡಿಕೊಂಡಾಗ, ಅಲ್ಲಿರುವ ಭಾಗ್ಯಳೇ ಹೋಗಿ ಅವನ ಕೈಗೆ ಬ್ಯಾಂಡೇಜ್​ ಕಟ್ಟಿದ್ದಾಳೆ. ಇದನ್ನು ನೋಡಿ ಆದಿಗೆ ಶಾಕ್​ ಆಗಿದೆ. ತಾಂಡವ್​ಗೆ ಭಾಗ್ಯಳ ಮೇಲೆ ಮತ್ತೆ ಲವ್​ ಶುರುವಾಗಿದೆ.</p><img><p>ಇದರ ನಡುವೆಯೇ ಭಾಗ್ಯ ಮಗ ಗುಂಡಣ್ಣ ಉರ್ಫ್​ ನಿಹಾರ್​ ಗೌಡ ಒಂದು ಪೋಸ್ಟ್​ ಶೇರ್​ ಮಾಡಿಕೊಂಡಿದ್ದು, ಅದರಲ್ಲಿ ಭಾಗ್ಯ, ತಾಂಡವ್​ ಜೊತೆ ಇಬ್ಬರು ಮಕ್ಕಳನ್ನು ನೋಡಬಹುದು.</p><img><p>ಇದನ್ನು ನೋಡಿದ ನೆಟ್ಟಿಗರು ಪ್ಲೀಸ್​ ಹೀಗೆ ಮಾಡಬೇಡ ಭಾಗ್ಯ. ತಾಂಡವ್​ನನ್ನು ನಂಬಬೇಡ. ನಿನಗಾಗಿ ಇರುವವನು ಆದಿ. ಆದಿಯ ಕೈ ಬಿಡಬೇಡ ಎನ್ನುತ್ತಿದ್ದಾರೆ.</p><img><p>ನಿಹಾರ್​ ಗೌಡ ಈ ಫೋಟೋ ಸುಮ್ಮನೇ ಶೇರ್​ ಮಾಡಿಕೊಂಡಿದ್ದರೂ, ಇದು ಸೀರಿಯಲ್​ನಲ್ಲಿ ಹೀಗೆ ಆಗತ್ತಾ ಎಂದು ಕೆಲವರು ಸಂಶಯ ವ್ಯಕ್ತಪಡಿಸಿದರೆ, ಮತ್ತೆ ಕೆಲವರು ಶ್ರೇಷ್ಠಾಗೆ ಬುದ್ಧಿ ಬಂದು ತಾಂಡವ್​ ಜೊತೆ ಬರುತ್ತಾಳೆ. ಭಾಗ್ಯ ಮತ್ತು ಆದಿ ಒಂದಾಗ್ತಾರೆ ಎನ್ನುತ್ತಿದ್ದಾರೆ.</p>



Source link

Leave a Reply

Your email address will not be published. Required fields are marked *