Headlines

ಲವ್ ಮಾಡೋ ಮೊದಲು ವಿಜಯ್‌ಗೆ ಹಿಗ್ಗಾಮುಗ್ಗಾ 'ವಾರ್ನಿಂಗ್' ಮಾಡಿದ್ರು ರಶ್ಮಿಕಾ ಮಂದಣ್ಣ!

ಲವ್ ಮಾಡೋ ಮೊದಲು ವಿಜಯ್‌ಗೆ ಹಿಗ್ಗಾಮುಗ್ಗಾ 'ವಾರ್ನಿಂಗ್' ಮಾಡಿದ್ರು ರಶ್ಮಿಕಾ ಮಂದಣ್ಣ!



ಲವ್ ಮಾಡೋ ಮೊದಲು ವಿಜಯ್‌ಗೆ ಹಿಗ್ಗಾಮುಗ್ಗಾ 'ವಾರ್ನಿಂಗ್' ಮಾಡಿದ್ರು ರಶ್ಮಿಕಾ ಮಂದಣ್ಣ!
<p>ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಕೊನೆಗೂ ಇವರಿಬ್ಬರು ಮದುವೆಯಾಗಿದ್ದಾರೆ. ಇಬ್ಬರ ಪರಿಚಯದ ಆರಂಭದ ದಿನಗಳಲ್ಲಿ ರಶ್ಮಿಕಾ ಅವರು ವಿಜಯ್‌ಗೆ ಒಂದು ವಾರ್ನಿಂಗ್ ಕೊಟ್ಟಿದ್ದರು. ಅಷ್ಟಕ್ಕೂ ಏನಿದು ಘಟನೆ?</p><p>&nbsp;</p><img><p>ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಫೆಬ್ರವರಿ 26ರಂದು ಉದಯಪುರದಲ್ಲಿ ಕುಟುಂಬಸ್ಥರು ಮತ್ತು ಕೆಲವೇ ಕೆಲವು ಆಪ್ತರ ಸಮ್ಮುಖದಲ್ಲಿ ಇವರ ಮದುವೆ ಅದ್ದೂರಿಯಾಗಿ ನಡೆಯಿತು. ಕಳೆದ ಕೆಲವು ವರ್ಷಗಳಿಂದ ವಿಜಯ್ ಮತ್ತು ರಶ್ಮಿಕಾ ಪ್ರೀತಿಸುತ್ತಿದ್ದರು. ‘ಗೀತಾ ಗೋವಿಂದಂ’ ಚಿತ್ರದ ಮೂಲಕ ಇಬ್ಬರ ನಡುವೆ ಮೊದಲ ಬಾರಿಗೆ ಪರಿಚಯವಾಗಿತ್ತು.</p><img><p>ಪರಶುರಾಮ್ ನಿರ್ದೇಶನದಲ್ಲಿ, ಗೀತಾ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ಅಲ್ಲು ಅರವಿಂದ್ ಅರ್ಪಿಸಿದ್ದ ಈ ಚಿತ್ರ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಈ ಸಿನಿಮಾದಲ್ಲಿ ರಶ್ಮಿಕಾ ಮತ್ತು ವಿಜಯ್ ನಡುವಿನ ಕೆಮಿಸ್ಟ್ರಿಗೆ ಯುವಜನತೆ ಫಿದಾ ಆಗಿದ್ದರು. ಈ ಚಿತ್ರದ ಮೂಲಕವೇ ಇಬ್ಬರ ನಡುವೆ ಸ್ನೇಹ ಶುರುವಾಗಿ, ನಂತರ ಪ್ರೀತಿಗೆ ತಿರುಗಿತ್ತು. ಆದರೆ, ತಾವು ಪ್ರೀತಿಸುತ್ತಿರುವ ವಿಚಾರವನ್ನು ಇಬ್ಬರೂ ನೇರವಾಗಿ ಎಲ್ಲೂ ಹೇಳಿಕೊಂಡಿರಲಿಲ್ಲ. ಕೊನೆಗೂ ಮದುವೆಯಾಗಿ ಒಂದಾಗಿದ್ದಾರೆ.</p><img><p>ಈ ಹಿನ್ನೆಲೆಯಲ್ಲಿ ಅಭಿಮಾನಿಗಳು ವಿಜಯ್ ಮತ್ತು ರಶ್ಮಿಕಾಗೆ ಸಂಬಂಧಿಸಿದ ಹಳೆಯ ಸ್ವಾರಸ್ಯಕರ ಘಟನೆಗಳನ್ನು ನೆನಪಿಸಿಕೊಳ್ಳುತ್ತಿದ್ದಾರೆ. ವಿಜಯ್ ದೇವರಕೊಂಡಗೆ ರಶ್ಮಿಕಾ ಕೊಟ್ಟಿದ್ದ ಮೊದಲ ವಾರ್ನಿಂಗ್ ಬಗ್ಗೆ ಈಗ ಚರ್ಚೆಯಾಗುತ್ತಿದೆ. ‘ಅರ್ಜುನ್ ರೆಡ್ಡಿ’ ಸಿನಿಮಾ ಸಮಯದಲ್ಲಿ ವಿಜಯ್ ದೇವರಕೊಂಡ ನೀಡಿದ್ದ ಹೇಳಿಕೆಗಳು ವಿವಾದಕ್ಕೆ ಕಾರಣವಾಗಿದ್ದವು. ಅದು ಬೋಲ್ಡ್ ಚಿತ್ರವಾಗಿದ್ದರಿಂದ, ವಿಜಯ್ ಪ್ರಚಾರದಲ್ಲೂ ಅದೇ ರೀತಿಯ ಬೋಲ್ಡ್ ಆಟಿಟ್ಯೂಡ್ ತೋರಿಸಿ ಸುದ್ದಿಯಾಗಿದ್ದರು.</p><img><p>ಆದರೆ ‘ಗೀತಾ ಗೋವಿಂದಂ’ ಯುವಕರು ಮತ್ತು ಕುಟುಂಬ ಪ್ರೇಕ್ಷಕರನ್ನು ಗುರಿಯಾಗಿಸಿಕೊಂಡು ಮಾಡಿದ ಸಿನಿಮಾ. ಹಾಗಾಗಿ, ಈ ಚಿತ್ರದ ವಿಚಾರದಲ್ಲಿ ವಿಜಯ್ ದೇವರಕೊಂಡ ಯಾವುದೇ ವಿವಾದಾತ್ಮಕ ಹೇಳಿಕೆ ನೀಡದಂತೆ ಚಿತ್ರತಂಡ ಎಚ್ಚರಿಕೆ ವಹಿಸಿತ್ತು. ಪ್ರೀ-ರಿಲೀಸ್ ಈವೆಂಟ್‌ನಲ್ಲಿ ಮಾತನಾಡಿದ್ದ ವಿಜಯ್, ‘ಇವತ್ತು ನಾನು ಯಾವುದೇ ರಂಪಾಟ ಮಾಡಬಾರದು ಅಂತ ತುಂಬಾ ಜನ ವಾರ್ನಿಂಗ್ ಕೊಟ್ಟಿದ್ದಾರೆ’ ಎಂದು ಹೇಳಿದ್ದರು.</p><img><p>ನನಗೆ ವಾರ್ನಿಂಗ್ ಕೊಟ್ಟವರಲ್ಲಿ ‘ರಶ್ಮಿಕಾ ಮೇಡಂ’ ಕೂಡ ಒಬ್ಬರು ಎಂದು ವಿಜಯ್ ತಮಾಷೆಯಾಗಿ ಹೇಳಿದ್ದರು. ಅಂದು ಕಾರ್ಯಕ್ರಮದಲ್ಲಿ ಲುಂಗಿ ಉಟ್ಟು ಮಿಂಚಿದ್ದ ವಿಜಯ್, ತಮ್ಮ ಮಾತುಗಳಲ್ಲಿ ಯಾವುದೇ ವಿವಾದಕ್ಕೆ ಅವಕಾಶ ಕೊಡಲಿಲ್ಲ. ‘ಬೆಳಗ್ಗಿನಿಂದ ಬನ್ನಿ ವಾಸು, ನಿರ್ದೇಶಕ ಪರಶುರಾಮ್ ವಾರ್ನಿಂಗ್ ಕೊಡುತ್ತಲೇ ಇದ್ದರು.&nbsp;</p><img><p>ಅಲ್ಲು ಅರವಿಂದ್ ಅವರಂತೂ ಫೋನ್ ಮಾಡಿ ಜಾಗರೂಕತೆಯಿಂದ ಮಾತನಾಡು’ ಎಂದು ಹೇಳಿದ್ದನ್ನು ನೆನಪಿಸಿಕೊಂಡರು. ಇದೇ ವೇದಿಕೆಯಲ್ಲಿ ರಶ್ಮಿಕಾ ಕೂಡ ‘ಗೋವಿಂದ್ (ವಿಜಯ್) ತುಂಬಾ ಬದಲಾಗಬೇಕು’ ಎಂದು ತಮಾಷೆಯಾಗಿ ವಾರ್ನಿಂಗ್ ನೀಡಿದ್ದರು.</p>



Source link

Leave a Reply

Your email address will not be published. Required fields are marked *