Headlines

ಬೆಂಗಳೂರಿನ ತರಕಾರಿಗಳಲ್ಲಿ ಸೀಸ ಪತ್ತೆ: ಈ ವಿಷಕಾರಿ ಅಂಶದ ಪರಿಣಾಮ ಕಡಿಮೆ ಮಾಡಲು ಹೇಗೆ ತೊಳೆಯಬೇಕು?

ಬೆಂಗಳೂರಿನ ತರಕಾರಿಗಳಲ್ಲಿ ಸೀಸ ಪತ್ತೆ: ಈ ವಿಷಕಾರಿ ಅಂಶದ ಪರಿಣಾಮ ಕಡಿಮೆ ಮಾಡಲು ಹೇಗೆ ತೊಳೆಯಬೇಕು?



ಬೆಂಗಳೂರಿನ ತರಕಾರಿಗಳಲ್ಲಿ ಸೀಸ ಪತ್ತೆ: ಈ ವಿಷಕಾರಿ ಅಂಶದ ಪರಿಣಾಮ ಕಡಿಮೆ ಮಾಡಲು ಹೇಗೆ ತೊಳೆಯಬೇಕು?
<p>How to remove pesticides from vegetables: ತರಕಾರಿಗಳ ಮೇಲಿರುವ ಕೀಟನಾಶಕಗಳ ಅಂಶವು ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಆದ್ದರಿಂದ, ತರಕಾರಿಗಳ ಪೌಷ್ಟಿಕಾಂಶ ಅಥವಾ ರುಚಿಗೆ ಯಾವುದೇ ಧಕ್ಕೆಯಾಗದಂತೆ, ಈ ರಾಸಾಯನಿಕಗಳನ್ನು ಹೋಗಲಾಡಿಸಲು ಸರಿಯಾದ ವಿಧಾನಗಳಲ್ಲಿ ತೊಳೆಯುವುದು ಅತ್ಯಗತ್ಯ.&nbsp;</p><p>&nbsp;</p><img><p>ಬೆಂಗಳೂರಿನ ಮಾರುಕಟ್ಟೆಗಳಲ್ಲಿ ಸಿಗುವ ತರಕಾರಿಗಳನ್ನು ಬಳಸುವವರು ಇನ್ನು ಮುಂದೆ ಹತ್ತಾರು ಬಾರಿ ಯೋಚಿಸಬೇಕಿದೆ. ಇತ್ತೀಚೆಗೆ ಮಾರುಕಟ್ಟೆಯ ತರಕಾರಿಗಳನ್ನು ಪರೀಕ್ಷಿಸಿದಾಗ ಅವುಗಳಲ್ಲಿ ಮನುಷ್ಯನ ಆರೋಗ್ಯಕ್ಕೆ ಹಾನಿಕಾರಕವಾದ ಭಾರೀ ಲೋಹದ ವಿಷಕಾರಿ ಅಂಶಗಳು ಪತ್ತೆಯಾಗಿವೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ (CPCB) ಸಮಿತಿಯು ಈ ಪರೀಕ್ಷೆ ನಡೆಸಿ ಸತ್ಯಾಂಶವನ್ನು ಹೊರಹಾಕಿದೆ. ಒಟ್ಟು ಪರೀಕ್ಷಿಸಿದ 72 ತರಕಾರಿ ಮಾದರಿಗಳ ಪೈಕಿ 19 ಮಾದರಿಗಳಲ್ಲಿ ಅಪಾಯಕಾರಿ ವಿಷಕಾರಿ ಅಂಶಗಳು ಪತ್ತೆಯಾಗಿವೆ. ಮುಖ್ಯವಾಗಿ ಬದನೆಕಾಯಿ, ಚಪ್ಪರದ ಅವರೆ, ತೊಂಡೆಕಾಯಿ ಮತ್ತು ವಿವಿಧ ಸೊಪ್ಪುಗಳಲ್ಲಿ ಮಿತಿಮೀರಿದ ‘ಸೀಸ’ದ ಅಂಶವಿರುವುದು ದೃಢಪಟ್ಟಿದೆ.</p><img><p>ಜನರು ತರಕಾರಿಗಳನ್ನು ಬಳಸುವ ಮೊದಲು ಸರಿಯಾದ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸುವುದು ಮತ್ತು ಅವುಗಳನ್ನು ಶುದ್ಧವಾಗಿ ತೊಳೆದು ಬಳಸುವುದು ಅತ್ಯಗತ್ಯವಾಗಿದೆ. ಪೌಷ್ಟಿಕಾಂಶ ಅಥವಾ ರುಚಿಗೆ ಧಕ್ಕೆಯಾಗದಂತೆ ನಿಮ್ಮ ಊಟವನ್ನು ಸುರಕ್ಷಿತ ಮತ್ತು ಆರೋಗ್ಯಕರವಾಗಿಸಲು, ತರಕಾರಿಗಳನ್ನು ಸರಿಯಾದ ವಿಧಾನಗಳಲ್ಲಿ ತೊಳೆಯುವುದು ಬಹಳ ಮುಖ್ಯ. ಈ ವಿಷಕಾರಿ ಅಂಶಗಳ ಪರಿಣಾಮವನ್ನು ಕಡಿಮೆ ಮಾಡಲು ತರಕಾರಿಗಳನ್ನು ಹೇಗೆ ತೊಳೆಯಬೇಕು ಎಂಬ ಸಲಹೆ ಇಲ್ಲಿದೆ.</p><img><p>ಒಂದು ದೊಡ್ಡ ಪಾತ್ರೆ ನೀರಿನಲ್ಲಿ 1-2 ಚಮಚ ಉಪ್ಪನ್ನು ಬೆರೆಸಿ. ತರಕಾರಿಗಳನ್ನು 10-15 ನಿಮಿಷಗಳ ಕಾಲ ನೆನೆಸಿಡಿ. ಉಪ್ಪು ನೀರು ತರಕಾರಿಯ ಮೇಲ್ಮೈಯಲ್ಲಿರುವ ಕೀಟನಾಶಕಗಳ ಅಂಶವನ್ನು ವಿಭಜಿಸಲು ಸಹಾಯ ಮಾಡುತ್ತದೆ.</p><img><p>ಒಂದು ಪಾತ್ರೆ ನೀರಿನಲ್ಲಿ ಒಂದು ಚಮಚ ಅಡುಗೆ ಸೋಡಾವನ್ನು ಕರಗಿಸಿ. ಅದರಲ್ಲಿ ತರಕಾರಿಗಳನ್ನು 10-15 ನಿಮಿಷ ನೆನೆಸಿಡಿ. ಅಡುಗೆ ಸೋಡಾವು ಸೌಮ್ಯವಾದ ಕ್ಷಾರೀಯ ದ್ರಾವಣದಂತೆ ಕೆಲಸ ಮಾಡಿ ಕೀಟನಾಶಕಗಳನ್ನು ಪರಿಣಾಮಕಾರಿಯಾಗಿ ತೆಗೆದುಹಾಕುತ್ತದೆ.</p><img><p>ಕ್ಯಾರೆಟ್ ಅಥವಾ ಸೌತೆಕಾಯಿಯಂತಹ ದಪ್ಪ ಸಿಪ್ಪೆಯ ತರಕಾರಿಗಳ ಸಿಪ್ಪೆಯನ್ನು ತೆಗೆಯಿರಿ ಅಥವಾ ಬ್ರಷ್‌ನಿಂದ ಮೃದುವಾಗಿ ಉಜ್ಜಿನ ತೊಳೆಯಿರಿ. ಇದು ಕೀಟನಾಶಕಗಳು ಸಂಗ್ರಹವಾಗುವ ಹೊರಪದರವನ್ನು ತೆಗೆದುಹಾಕುತ್ತದೆ.</p><img><p>ಕನಿಷ್ಠ 20-30 ಸೆಕೆಂಡುಗಳ ಕಾಲ ಹರಿಯುವ ನೀರಿನಲ್ಲಿ (Running water) ತರಕಾರಿಗಳನ್ನು ಚೆನ್ನಾಗಿ ತೊಳೆಯಿರಿ. ಇದು ಧೂಳು ಮತ್ತು ಮೇಲ್ಮೈಯಲ್ಲಿರುವ ಕೀಟನಾಶಕಗಳನ್ನು ತೆಗೆದುಹಾಕಲು ಸರಳವಾದ ಮಾರ್ಗವಾಗಿದೆ.</p><img><p>1 ಭಾಗ ಬಿಳಿ ವಿನೆಗರ್ ಅನ್ನು 3 ಭಾಗ ನೀರಿಗೆ ಸೇರಿಸಿ. ತರಕಾರಿಗಳನ್ನು 10-15 ನಿಮಿಷ ನೆನೆಸಿಡಿ. ವಿನೆಗರ್‌ನಲ್ಲಿರುವ ಆಮ್ಲೀಯ ಗುಣವು ಕೀಟನಾಶಕಗಳು ಮತ್ತು ಬ್ಯಾಕ್ಟೀರಿಯಾಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ನಂತರ ಶುದ್ಧ ನೀರಿನಲ್ಲಿ ಮತ್ತೊಮ್ಮೆ ತೊಳೆಯಿರಿ.</p><img><p>ಒಂದು ಪಾತ್ರೆ ನೀರಿಗೆ ಲಿಂಬೆ ಹಣ್ಣಿನ ತುಂಡುಗಳು ಅಥವಾ 2-3 ಚಮಚ ಲಿಂಬೆ ರಸವನ್ನು ಸೇರಿಸಿ, ತರಕಾರಿಗಳನ್ನು 5-10 ನಿಮಿಷ ನೆನೆಸಿಡಿ. ಲಿಂಬೆಯ ಆಮ್ಲೀಯತೆಯು ಕೀಟನಾಶಕಗಳನ್ನು ಕಡಿಮೆ ಮಾಡುವುದಲ್ಲದೆ ತರಕಾರಿಗಳು ತಾಜಾವಾಗಿರುವಂತೆ ಮಾಡುತ್ತದೆ.</p><img><p>ಪಾಲಕ್ ಅಥವಾ ಲೆಟಿಸ್‌ನಂತಹ ಸೊಪ್ಪುಗಳ ಹೊರಗಿನ ಎಲೆಗಳನ್ನು ತೆಗೆದುಹಾಕಿ ಮತ್ತು ಉಳಿದ ಎಲೆಗಳನ್ನು ನೀರಿನಲ್ಲಿ ನೆನೆಸಿಡಿ. ಕೀಟನಾಶಕಗಳು ಹೆಚ್ಚಾಗಿ ಹೊರಗಿನ ಎಲೆಗಳ ಮೇಲೆ ಸಂಗ್ರಹವಾಗುವುದರಿಂದ ಇದು ಸುರಕ್ಷಿತ.</p><img><p>ಮಾರುಕಟ್ಟೆಯಲ್ಲಿ ಸಿಗುವ ಹಣ್ಣು ಮತ್ತು ತರಕಾರಿ ತೊಳೆಯುವ ದ್ರಾವಣಗಳನ್ನು (Vegetable Wash) ಸೂಚನೆಗಳ ಪ್ರಕಾರ ಬಳಸಿ. ಇವುಗಳನ್ನು ಕೀಟನಾಶಕ, ಧೂಳು ಮತ್ತು ಮೇಣದಂತಹ ಅಂಶಗಳನ್ನು ತೆಗೆದುಹಾಕಲು ವಿಶೇಷವಾಗಿ ತಯಾರಿಸಲಾಗಿರುತ್ತದೆ.</p><img><p>ತರಕಾರಿಗಳನ್ನು ಹಗುರವಾಗಿ ಹಬೆಯಲ್ಲಿ ಬೇಯಿಸುವುದರಿಂದ ಮೇಲ್ಮೈ ಕೀಟನಾಶಕಗಳು ಸಡಿಲಗೊಳ್ಳುತ್ತವೆ ಮತ್ತು ಅವುಗಳನ್ನು ತೊಳೆದು ಹಾಕುವುದು ಸುಲಭವಾಗುತ್ತದೆ. ಇದು ಪೌಷ್ಟಿಕಾಂಶವನ್ನು ಕಾಪಾಡಲು ಸಹಕಾರಿ.</p><img><p>ತರಕಾರಿಗಳನ್ನು 2-5 ನಿಮಿಷಗಳ ಕಾಲ ಬಿಸಿ ನೀರಿನಲ್ಲಿ ಕುದಿಸಿ ಅಥವಾ ಬ್ಲಾಂಚ್ ಮಾಡಿ. ಶಾಖವು ಕೆಲವು ಕೀಟನಾಶಕಗಳನ್ನು ನಾಶಪಡಿಸುತ್ತದೆ. ಇದು ಸೊಪ್ಪುಗಳಿಗೆ ಮತ್ತು ತೆಳುವಾದ ಎಲೆಗಳ ತರಕಾರಿಗಳಿಗೆ ಹೆಚ್ಚು ಪರಿಣಾಮಕಾರಿ.</p>



Source link

Leave a Reply

Your email address will not be published. Required fields are marked *