ಸಚಿವ ಈಶ್ವರ್ ಖಂಡ್ರೆ ಚಿತ್ರ ಕ್ರೆಡಿಟ್ ಮೂಲ: tv9 ಕನ್ನಡ
ಚಿಕ್ಕಮಗಳೂರು, ಫೆಬ್ರವರಿ 28: ಕಾಫಿನಾಡಿನಲ್ಲಿ ಮಾನವ ಕಾಡು ಪ್ರಾಣಿಗಳ ಸಂಘರ್ಷ ಮಿತಿ ಮೀರಿದೆ. ಕಾಡಾನೆಗಳ ದಾಳಿಗೆ ರೈತರು, ಕಾರ್ಮಿಕರು ಬಲಿಯಾಗುತ್ತಿದ್ದಾರೆ, ಕಾಡು, ಕೋಣದ ದಾಳಿ ಆತಂಕ ಸೃಷ್ಟಿಯಾಗಿದೆ. 7 ದಿನಗಳಲ್ಲಿ ಕಾಡಾನೆ (ಕಾಡು ಆನೆ) ದಾಳಿಗೆ ಇಬ್ಬರು ಬಲಿ, ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿತ್ತು. ಪ್ರತಿಭಟನೆ ನಡೆಸಿದವರ ಮೇಲೆ ಪೊಲೀಸರ ಲಾಠಿಚಾರ್ಜ್ ಕಿಚ್ಚು ಹೆಚ್ಚಿಸಿದ್ದು, ಎಲ್ಲರ ಮಧ್ಯೆ ಇಂದು ಸಚಿವ ಈಶ್ವರ್ ಖಂಡ್ರೆ (ಈಶ್ವರ ಖಂಡ್ರೆ) ಸಭೆ ನಡೆಸಿದ್ದಾರೆ.
ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡಾನೆ, ಕಾಡುಕೋಣ ಆತಂಕ ಸೃಷ್ಟಿಯಾಗಿದೆ, ಬಯಲುಸೀಮೆ ಭಾಗದಲ್ಲಿ ಚಿರತೆ ಉಪಟಳ ಜನರ ಕಂಗಾಲು ಮಾಡಿದೆ. ಹಾಸನದಿಂದ ಬೇಲೂರು ಸಕಲೇಶಪುರ ಮಾರ್ಗವಾಗಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿಗೆ 30ಕ್ಕೂ ಹೆಚ್ಚು ಕಾಡಾನೆಗಳು ಎಂಟ್ರಿ ಕೊಟ್ಟಿವೆ. ಬೀಟಮ್ಮ ಗ್ಯಾಂಗ್, ಭುವನೇಶ್ವರಿ ಗ್ಯಾಂಗ್ ಉಪಟಳ ನೀಡುತ್ತಿದ್ದಾರೆ ಕಾಫಿತೋಟ, ನಮ್ಮಲ್ಲಿಯೇ ಕಾಡಾನೆಗಳು ಓಡಾಟ ನಡೆಸುತ್ತಿವೆ. ಜಿಲ್ಲೆಯಲ್ಲಿ ಸಂಚಾರ ಮಾಡುತ್ತಿರುವ ಕಾಡಾನೆಗಳ ಜೊತೆ ಹಾಸನದಿಂದ ಬಂದ ಕಾಡಾನೆಗಳು ಹೊಸ ತಲೆನೋವು ಉಂಟುಮಾಡಿವೆ.
ಇದನ್ನೂ ಓದಿ: ಗೋಣಿಬೀಡು ಬಳಿ ಕಾಫಿತೋಟದಲ್ಲಿ ಬೀಡುಬಿಟ್ಟ ಕಾಡಾನೆ ಭೀಮ
ಇನ್ನು ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ 13 ಮಂದಿ ಕಾಡು ಪ್ರಾಣಿಗಳ ದಾಳಿಗೆ ಬಲಿಯಾಗಿದ್ದಾರೆ. ಇನ್ನೂ ಹೆಚ್ಚಿನವರು. ಕಳೆದ ಭಾನುವಾರ ಕಾರ್ಮಿಕ ಮಹಿಳೆಯನ್ನ ಕಾಡಾನೆ ಬಲಿ ಪಡೆದಿತ್ತು. ಚಿಕ್ಕಮಗಳೂರು ತಾಲೂಕಿನ ಪುರಗ್ರಾಮದಲ್ಲಿ ಒಂದೇ ಸ್ಥಳದಲ್ಲಿ ಇಬ್ಬರು ಕಾಡಾನೆಗೆ ಬಲಿಯಾಗಿದ್ದರು. ಮಹಿಳೆ ಬಲಿಯಾಗದೇ ಅಕ್ಷರಶಃ ಮಲೆನಾಡು ಕೊತಕೊತ ಅನ್ನೋ ಸ್ಥಿತಿಗೆ ತಲುಪಿತ್ತು. ಅರಣ್ಯ ಸಚಿವರೇ ಬರುವಂತೆ ಪಟ್ಟು ಹಿಡಿದಿದ್ದರು. ಶಾಶ್ವತ ಪರಿಹಾರಕ್ಕೆ ಇದ್ದರು. ಪ್ರತಿಭಟನೆ ಸ್ವರೂಪ ಬದಲಾಗಿ ಕಡಬಗೆರೆ ಪಟ್ಟಣದಲ್ಲಿ ಲಾಠಿಚಾರ್ಜ್ ನಡೆಸಿದ್ದರು. ಇದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ಮತ್ತೊಂದು ಕಾಡಾನೆ ಸೆರೆಗೆ ಅನುಮತಿ
ಇಂದು ಈಶ್ವರ್ ಖಂಡ್ರೆ ಅವರು ಇಡೀ ರಾಜ್ಯದ ಹಿರಿಯ ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಭೇಟಿ ನೀಡಿದ್ದಾರೆ. ಬಾಳೆಹೊನ್ನೂರಿನ ಕಡ್ಲೇಮಕ್ಕಿಯಲ್ಲಿ ರೈತರು, ಕಾಫಿ ಬೆಳೆಗಾರರ ಸಮ್ಮುಖದಲ್ಲಿ ಸಂವಾದ ನಡೆಸಿದರು. ಇದಲ್ಲದೆ ಬಾಳೆಹೊನ್ನೂರಿನಲ್ಲಿ ಉಪಟಳ ನೀಡುತ್ತಿರುವ ಮತ್ತೊಂದು ಕಾಡಾನೆ ಸೆರೆಗೂ ಅನುಮತಿ ನೀಡಲಾಗಿದೆ.
ಬಾಳೆಹೊನ್ನೂರಿನ ನಾರಾಯಣ ಗುರು ಭವನದಲ್ಲಿ ನಡೆದ ಸಂವಾದದಲ್ಲಿ ಸಾಲು ಸಾಲು ಮನವಿ ಮಾಡಲಾಯಿತು. ಕಾಡಾನೆ ಹಾವಳಿ ಹೆಚ್ಚಾಗಲು ಕೆಲವು ಯೋಜನೆಗಳು ಕಾರಣ ಅನ್ನೋವೂ ಕೇಳಿಬಂದಿದೆ. ಭದ್ರಾ ನದಿಯ ಹಿನ್ನೀರು ಕಡಿಮೆಯಾದಾಗ ಕಾಡಾನೆಗಳು ನದಿ ದಾಟಿ ಬರುತ್ತವೆ ಎಂದು ಸ್ಥಳೀಯರು ಸಚಿವರಿಗೆ ಮಾಹಿತಿ ನೀಡಿದ್ದು, ಶಾಶ್ವತಕ್ಕೆ ಪರಿಹಾರ ಕಂಡುಬಂದಿದೆ.
ಇದಲ್ಲದೆ ಸೆಕ್ಷನ್ 4, ಒತ್ತುವರಿ ತೆರವು, ಕಾಡಿಗೆ ಬೆಂಕಿ ಬಿದ್ದರೆ ಕ್ರಮವಿಲ್ಲ. ವನ್ಯಮೃಗಗಳಿಂದ ಮಾನವರು ಮೃತಪಟ್ಟರೆ ಪರಿಹಾರ ಹೆಚ್ಚಿಸುವಂತೆ ತೋರಿಸಿದರು. ಇನ್ನೂ ಕಾಡಾನೆ ತಪ್ಪಿಸಲು ಇನ್ನಷ್ಟು ಇಟಿಎಫ್ ಸಿಬ್ಬಂದಿಗಳ ನೇಮಕಾತಿಗೆ ಸ್ಥಳೀಯರು ಉಪಿಸಿದರು.
ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿದ್ದಿಷ್ಟು
ಸಭೆಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅರಣ್ಯ ಸಚಿವ ಈಶ್ವರ್ ಖಂಡ್ರೆ, ಆನೇ ಕಾರ್ಯಪಡೆಗೆ ಬೇಡಿಕೆ ಇದೆ, ಸೂಚನೆಯನ್ನ ನೀಡಿದ್ದೇನೆ. ಮಾ.2ರಂದು 32 ಸಿಬ್ಬಂದಿಯ ಆನೆ ಕಾರ್ಯ ಪ್ರಾರಂಭ ನಡೆಯಲಿದೆ. ಆನೆ ಹಾವಳಿ ತಪ್ಪಿಸಲು ಸಿಎಂ ರಿಂದ ಬ್ಯಾರಿಕ್ಯಾಡ್ ಅನುಮೋದನೆ ಪಡೆಯಲು ಪ್ರಯತ್ನ ಮಾಡುತ್ತೇನೆ. ಸೆಕ್ಷನ್ 4 ಬಗ್ಗೆ ಶಾಶ್ವತ ಪರಿಹಾರಕ್ಕೆ ಸೂಚಿಸಲಾಗಿದೆ. ಮಾನವ ಮತ್ತು ಪ್ರಾಣಿ ಸಂಘರ್ಷ ಕಡಿಮೆಯಾಗಬೇಕು, ದುರ್ಘಟನೆಯಾಗದಂತೆ ತಡೆಯಲು ಸಾರ್ವಜನಿಕರು ಸಹಕರಿಸಬೇಕು.
ಇದನ್ನೂ ಓದಿ: ಕಿಲ್ಲರ್ ಕಾಡನೆ ಸೆರೆಯಾದರೂ ಮುಂದುವರಿದ ಆತಂಕ; ಚಿಕ್ಕಮಗಳೂರಿನ 12 ಗ್ರಾಮಗಳಿಗೆ ಗ್ರಾಮಗಳಲ್ಲಿ ನಿಷೇಧಾಜ್ಞೆ !
ಒಟ್ಟಾರೆ ಸಚಿವ ಈಶ್ವರ್ ಖಂಡ್ರೆ ಜಿಲ್ಲೆಗೆ ಭೇಟಿ ನೀಡಿ ಸ್ಥಳೀಯರ ಸಮಸ್ಯೆ ಆಲಿಸಿದ್ದಾರೆ. ಆದರೆ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಸಭೆಗೆ ಗೈರಾಗಿದ್ದರು. ಈ ಸಭೆ ಪರಿಹಾರದ ಸಭೆಯಾಗುತ್ತೋ, ಮುಂದೇ ರಾಜಕೀಯ ಏಟು ಎದುರೇಟಿನ ವೇದಿಕೆಯಾಗುತ್ತೋ ಎಂಬ ಅನುಮಾನವೂ ಶುರುವಾಗಿದೆ. ಒಟ್ಟಿನಲ್ಲಿ ಕಾಫಿನಾಡಿನಲ್ಲಿ ಸೃಷ್ಟಿಯಾಗಿರುವ ಕಾಡು ಪ್ರಾಣಿಗಳು ಮತ್ತು ಮಾನವ ನಡುವಿನ ಸಂಘರ್ಷ ಅಂತ್ಯವಾಗಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.