
ಭಾಗ್ಯಲಕ್ಷ್ಮಿ ಧಾರಾವಾಹಿಯು ರೋಚಕ ಹಂತ ತಲುಪಿದ್ದು, ತಾಂಡವ್ ಮತ್ತು ಆದಿಯ ನಡುವಿನ ಗೊಂದಲಕ್ಕೆ ಭಾಗ್ಯ ತೆರೆ ಎಳೆದಿದ್ದಾಳೆ. ಕುಟುಂಬದವರ ವಿಭಿನ್ನ ಅಭಿಪ್ರಾಯಗಳ ನಡುವೆ ಕೊನೆಗೂ ಆದಿಯನ್ನು ಆಯ್ಕೆ ಮಾಡಿಕೊಂಡಿದ್ದಾಳೆ. ಆದರೆ, ಆದಿಯ ತಂದೆಯ ಹೊಸ ಯೋಜನೆಯಿಂದ ಕಥೆಗೆ ಮತ್ತೊಂದು ತಿರುವು ಸಿಕ್ಕಿದೆ.<img><p>ಭಾಗ್ಯಲಕ್ಷ್ಮಿ (Bhagyalakshmi Serial) ಸೀರಿಯಲ್ ಇದೀಗ ರೋಚಕ ಹಂತವನ್ನು ತಲುಪಿದೆ. ವರ್ಷಗಳಿಂದ ವೀಕ್ಷಕರು ಕಾಯ್ತಿದ್ದ ಆ ಗಳಿಗೆ ಬಂದೇ ಬಿಟ್ಟಿದೆ.</p><img><p>ಅತ್ತ ಆದಿಯ ಪ್ರೀತಿ, ಇತ್ತ ಬದಲಾದ ತಾಂಡವ್ ಇವರಿಬ್ಬರ ನಡುವೆ ತೊಳಲಾಡ್ತಿದ್ದ ಭಾಗ್ಯಳನ್ನು ದೇವರೇ ಕಾಪಾಡ್ಬೇಕು ಎನ್ನುತ್ತಿದ್ದರು ವೀಕ್ಷಕರು.</p><img><p>ಗಂಡ ಹೇಗೇ ಇದ್ದರೂ ಅದನ್ನು ಹೆಂಡತಿಯಾದವಳು ಸಹಿಸಿಕೊಂಡು ಹೋಗಬೇಕು ಎನ್ನುವ ಭಾಗ್ಯಳ ಅಮ್ಮ, ಅಪ್ಪ ಬದಲಾಗಿದ್ದಾನೆ- ಅವನನ್ನು ಒಪ್ಪಿಕೋ ಎನ್ನುವ ಭಾಗ್ಯಳ ಮಗಳು, ಈ ನೀಚಬುದ್ಧಿಯವ ಯಾವತ್ತೂ ಬದಲಾಗಲ್ಲ, ನೀನು ಆದಿಯನ್ನೇ ಮದುವೆಯಾಗು ಎನ್ನುವ ಅತ್ತೆ, ಅಪ್ಪ ಸರಿಯಲ್ಲ- ಅವನು ಒಳ್ಳೆಯವನ್ನ ಎನ್ನುವ ಮಗ, ಎಲ್ಲದ್ದಕ್ಕೂ ತಟಸ್ಥನಾಗಿ ನಿಂತವ ಭಾಗ್ಯಳ ಮಾವ… ಇವೆಲ್ಲರ ನಡುವಿನ ತೊಳಲಾಟದಿಂದ ಭಾಗ್ಯಳಿಗೆ ಈಗ ಮುಕ್ತಿ ಸಿಕ್ಕಿದೆ.</p><img><p>ಕೊನೆಗೂ ಆದಿಯನ್ನು ಆಯ್ಕೆ ಮಾಡಿಕೊಂಡಿದ್ದಾಳೆ ಭಾಗ್ಯ. ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಭಾಗ್ಯಳ ನಿರ್ಧಾರ ಕೇಳಿ ಆದಿ ನಾಚಿ ನೀರಾಗಿದ್ದಾನೆ.</p><img><p>ಆದರೆ, ಅದೇ ಇನ್ನೊಂದೆಡೆ ಆದಿಯ ಅಪ್ಪ ಹೇಗಾದರೂ ಮಾಡಿ ಆದಿ ಮತ್ತು ಭಾಗ್ಯಳನ್ನು ದೂರ ಮಾಡಲು ನೋಡುತ್ತಿದ್ದಾನೆ. ಆದಿಗೆ ಬೇರೊಂದು ಮದುವೆ ಮಾಡಿಸುವುದು ಆತನ ಪ್ಲ್ಯಾನ್.</p><img><p>ಇವೆಲ್ಲವುಗಳ ನಡುವೆ ಇನ್ನೇನು ಆಗುತ್ತೋ ಎನ್ನುವುದನ್ನು ಕಾದು ನೋಡಬೇಕಿದೆ. ಸದ್ಯ ಸೀರಿಯಲ್ ಮುಗಿಯಲ್ಲ ಎಂದು ನಟಿಯೇ ಹೇಳಿರುವ ಕಾರಣ, ಬೇರೆ ಬೇರೆ ಆ್ಯಂಗಲ್ಗಳು ಸೀರಿಯಲ್ ಕಾಣಸಿಗಬಹುದು.</p>
Source link
Bhagyalakshmi: ಭಾಗ್ಯಳಿಗೆ ಮರಳಿ ಹುಟ್ಟಿತು ಪ್ರೀತಿ, ಆದ್ರೆ ಯಾರ ಮೇಲೆ? ಇಲ್ಲಿದೆ ಭಾರಿ ಟ್ವಿಸ್ಟು!