Headlines

ರಾಜಮೌಳಿ ಮೇಲೆ ‘ಕ್ಯಾಪಿ ಕ್ಯಾಟ್’ ಆರೋಪ; ಆ ಖ್ಯಾತ ನಿರ್ದೇಶಕನ ಜೊತೆ ಹೋಲಿಸಿ ಮರ್ಯಾದೆ ಹರಾಜು ಹಾಕುವ ಹುನ್ನಾರ? | Ss Rajamouli And The Sv Krishna Reddy Connection A Look At Tollywood Visual Effects Pioneers

ರಾಜಮೌಳಿ ಮೇಲೆ ‘ಕ್ಯಾಪಿ ಕ್ಯಾಟ್’ ಆರೋಪ; ಆ ಖ್ಯಾತ ನಿರ್ದೇಶಕನ ಜೊತೆ ಹೋಲಿಸಿ ಮರ್ಯಾದೆ ಹರಾಜು ಹಾಕುವ ಹುನ್ನಾರ? | Ss Rajamouli And The Sv Krishna Reddy Connection A Look At Tollywood Visual Effects Pioneers



ರಾಜಮೌಳಿ ಮೇಲೆ ‘ಕ್ಯಾಪಿ ಕ್ಯಾಟ್’ ಆರೋಪ; ಆ ಖ್ಯಾತ ನಿರ್ದೇಶಕನ ಜೊತೆ ಹೋಲಿಸಿ ಮರ್ಯಾದೆ ಹರಾಜು ಹಾಕುವ ಹುನ್ನಾರ? | Ss Rajamouli And The Sv Krishna Reddy Connection A Look At Tollywood Visual Effects Pioneers

ಎಸ್‌ಎಸ್ ರಾಜಮೌಳಿಯವರನ್ನು ‘ಕಾಪಿ ಮಾಡೋ ಡೈರೆಕ್ಟರ್ ಅಂದ್ಬಿಟ್ರು. ಪ್ರೆಪಂಚವೇ ಭಾರತದ ಕಡೆ ನೋಡುವಂತೆ ಸಿನಿಮಾ ಮಾಡಿ, ಸತತ ಗೆಲುವು ಕಂಡಿರುವ ಇಂಥ ಗ್ರೇಟ್ ನಿರ್ದೇಶಕರ ಮೇಲೂ ಇಂಥ ಆಪಾದನೆ ಬಂದಿದೆ. ಆರೋಪ ಮಾಡಿದ್ಯಾರು? ಅದಕ್ಕೆ ಸಾಕ್ಷಿ ಏನು? ಈ ಸ್ಟೋರಿ ನೋಡಿ.

ವಿಜುಯಲ್ ವಂಡರ್‌ಗೆ ಕೇರಾಫ್..

ಸದ್ಯ ಭಾರತೀಯ ಚಿತ್ರರಂಗದಲ್ಲಿ ‘ವಿಶುವಲ್ ವಂಡರ್’ ಎಂಬ ಪದಕ್ಕೆ ರಾಜಮೌಳಿ ಕೇರ್ ಆಫ್ ಅಡ್ರೆಸ್ ಆಗಿದ್ದಾರೆ. ಅವರ ಸಿನಿಮಾಗಳಲ್ಲಿ ಬಳಸುವ ತಂತ್ರಜ್ಞಾನ ಮತ್ತು ಗ್ರಾಫಿಕ್ಸ್ ಪ್ರೇಕ್ಷಕರನ್ನು ಹೊಸ ಲೋಕಕ್ಕೆ ಕರೆದೊಯ್ಯುತ್ತವೆ. ಆದರೆ, ರಾಜಮೌಳಿ, ಶಂಕರ್ ಅವರಂತಹ ಟಾಪ್ ಡೈರೆಕ್ಟರ್‌ಗಳಿಗಿಂತ ಮೊದಲೇ ತೆಲುಗು ಪರದೆಯ ಮೇಲೆ ತಂತ್ರಜ್ಞಾನವನ್ನು ವಿಭಿನ್ನವಾಗಿ ಪರಿಚಯಿಸಿದ ಕೀರ್ತಿ ನಿರ್ದೇಶಕ ಎಸ್.ವಿ. ಕೃಷ್ಣಾ ರೆಡ್ಡಿ ಅವರಿಗೆ ಸಲ್ಲುತ್ತದೆ ಎಂದು ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ.

ಭವಿಷ್ಯ ಊಹಿಸಿದ್ರಾ ಎಸ್‌ವಿ ಕೃಷ್ಣಾ ರೆಡ್ಡಿ?

ಕುಟುಂಬ ಕಥಾ ಚಿತ್ರಗಳಿಗೆ ಹೆಸರಾದ ಎಸ್.ವಿ. ಕೃಷ್ಣಾ ರೆಡ್ಡಿ, ಆಗಿನ ಕಾಲದಲ್ಲೇ ತಮ್ಮ ಸಿನಿಮಾಗಳಲ್ಲಿ ಫ್ಯಾಂಟಸಿ ಮತ್ತು ಸೈನ್ಸ್ ಫಿಕ್ಷನ್ ಅಂಶಗಳನ್ನು ಅದ್ಭುತವಾಗಿ ಬಳಸುತ್ತಿದ್ದರು. ಅವರ ನಿರ್ದೇಶನದ ‘ಘಟೋತ್ಕಚುಡು’ ಸಿನಿಮಾ ಇದಕ್ಕೆ ಉತ್ತಮ ಉದಾಹರಣೆ. ಸೀಮಿತ ಸಂಪನ್ಮೂಲಗಳೊಂದಿಗೆ ರೋಬೋ ಪಾತ್ರವನ್ನು ಸೃಷ್ಟಿಸಿ, ಗ್ರಾಫಿಕ್ಸ್ ಮತ್ತು ವಿಎಫ್‌ಎಕ್ಸ್ ಮೂಲಕ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿದ್ದರು. ಇಂದು ಶಂಕರ್ ‘ರೋಬೋ’ ಸಿನಿಮಾದಲ್ಲಿ ತೋರಿಸಿದ ಕಾನ್ಸೆಪ್ಟ್ ಅನ್ನು ಕೃಷ್ಣಾ ರೆಡ್ಡಿ ದಶಕಗಳ ಹಿಂದೆಯೇ ಪ್ರಯತ್ನಿಸಿದ್ದರು ಎಂದು ನೆಟ್ಟಿಗರು ನೆನಪಿಸಿಕೊಳ್ಳುತ್ತಿದ್ದಾರೆ.

ಸಾಂಕೇತಿಕ ದೂರದೃಷ್ಟಿ!

ರಾಜಮೌಳಿ ತಮ್ಮ ಸಿನಿಮಾಗಳಲ್ಲಿ ಭಾವನೆಗಳ ಜೊತೆಗೆ ಹೈ-ಎಂಡ್ ತಂತ್ರಜ್ಞಾನವನ್ನು ಬಳಸುತ್ತಾರೆ. ಆದರೆ, ಎಸ್.ವಿ. ಕೃಷ್ಣಾ ರೆಡ್ಡಿ ಕಥೆ, ಸಂಭಾಷಣೆ, ಸಂಗೀತ, ನಿರ್ದೇಶನದಂತಹ ಎಲ್ಲಾ ವಿಭಾಗಗಳನ್ನು ತಾವೇ ನಿಭಾಯಿಸುತ್ತಾ ತಾಂತ್ರಿಕ ಪ್ರಯೋಗಗಳನ್ನು ಮಾಡುತ್ತಿದ್ದರು. ಹಾಸ್ಯ, ಕೌಟುಂಬಿಕ ಮೌಲ್ಯಗಳ ಜೊತೆಗೆ ತಂತ್ರಜ್ಞಾನವನ್ನು ಸಾಮಾನ್ಯ ಜನರಿಗೆ ಅರ್ಥವಾಗುವಂತೆ ತೋರಿಸುವುದು ಅವರ ವಿಶೇಷತೆಯಾಗಿತ್ತು.

‘ಕಾಪಿ ಕ್ಯಾಟಿ’ ಎಂದ ಟ್ರೋಲಿಗರು

ಸೋಶಿಯಲ್ ಮೀಡಿಯಾದಲ್ಲಿ ಕೆಲವು ಟ್ರೋಲಿಗರು ರಾಜಮೌಳಿಯನ್ನು ‘ಕಾಪಿ ಕ್ಯಾಟ್’ ಎಂದು ಕರೆಯುತ್ತಾರೆ. ಇದಕ್ಕೆ ಪ್ರತಿಯಾಗಿ, ರಾಜಮೌಳಿ ಬಳಸುತ್ತಿರುವ ತಂತ್ರಜ್ಞಾನ ಮತ್ತು ಐಡಿಯಾಗಳಿಗೆ ಎಸ್.ವಿ. ಕೃಷ್ಣಾ ರೆಡ್ಡಿಯಂತಹ ನಿರ್ದೇಶಕರೇ ಅಡಿಪಾಯ ಹಾಕಿದ್ದಾರೆ ಎಂದು ಕೆಲವರು ವಾದಿಸುತ್ತಾರೆ. ಅಲ್ಲದೆ, ರಾಜಮೌಳಿ ಶ್ರೇಷ್ಠ ನಿರ್ದೇಶಕರಲ್ಲಿ ಒಬ್ಬರು ಎಂದು ಪ್ರಶಂಸಿಸುತ್ತಾರೆ.

ಮತ್ತೆ ನಿರ್ದೇಶನಕ್ಕೆ ಸಿದ್ಧರಾದ ನಿರ್ದೇಶಕರು

ಬಹಳ ಸಮಯದ ನಂತರ, ಎಸ್.ವಿ. ಕೃಷ್ಣಾ ರೆಡ್ಡಿ ಮತ್ತೆ ‘ವೇದವ್ಯಾಸ್’ ಎಂಬ ಚಿತ್ರದೊಂದಿಗೆ ಪ್ರೇಕ್ಷಕರ ಮುಂದೆ ಬರಲು ಸಿದ್ಧರಾಗಿದ್ದಾರೆ. ಅಂದಿನ ಕಾಲದಲ್ಲಿ ಅವರು ಮಾಡಿದ ಪ್ರಯೋಗಗಳು ಇಂದಿನ ಪೀಳಿಗೆಯ ನಿರ್ದೇಶಕರಿಗೆ ಒಂದು ಪಾಠದಂತಿವೆ. ತಾಂತ್ರಿಕ ಸೌಲಭ್ಯಗಳು ಹೆಚ್ಚಾಗಿ ಇಲ್ಲದ ಕಾಲದಲ್ಲಿ ದೃಶ್ಯ ವೈಭವ ಸೃಷ್ಟಿಸಿದ ಅವರ ಸೃಜನಶೀಲತೆ ನಿಜಕ್ಕೂ ಶ್ಲಾಘನೀಯ. ರಾಜಮೌಳಿ ತಮ್ಮ ಮಹೇಶ್ ಬಾಬು ಚಿತ್ರಕ್ಕಾಗಿ ವಾರಣಾಸಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ತಂತ್ರಜ್ಞಾನ ಬಳಸುತ್ತಿರುವ ಈ ಸಮಯದಲ್ಲಿ, ಈ ಹಳೆಯ ನೆನಪುಗಳು ಮತ್ತೆ ಚರ್ಚೆಗೆ ಬಂದಿವೆ.



Source link

Leave a Reply

Your email address will not be published. Required fields are marked *