
ಈ ಪರಿಸ್ಥಿತಿಯ ಬಗ್ಗೆ ಪ್ರತಿಕ್ರಿಯಿಸಿರುವ ಆರ್ಥಿಕ ತಜ್ಞರು, ಜನರು ಹೀಗೆ ಬೇಕಾಬಿಟ್ಟಿ ಪೆಟ್ರೋಲ್ ಸಂಗ್ರಹಿಸುವುದು ಅಪಾಯಕಾರಿ ಎಂದು ಎಚ್ಚರಿಸಿದ್ದಾರೆ. ‘ಜನರು ಆತಂಕದಿಂದ ಹೆಚ್ಚುವರಿ ಇಂಧನವನ್ನು ಖರೀದಿಸಿ ಮನೆಯಲ್ಲಿ ಇಟ್ಟುಕೊಂಡರೆ, ಮಾರುಕಟ್ಟೆಯಲ್ಲಿ ಕೃತಕ ಕೊರತೆ (Artificial Shortage) ಸೃಷ್ಟಿಯಾಗುತ್ತದೆ. ಇದರಿಂದ ನಿಜವಾದ ಅವಶ್ಯಕತೆ ಇರುವವರಿಗೆ ಪೆಟ್ರೋಲ್ ಸಿಗದಂತಾಗುತ್ತದೆ. ಸರ್ಕಾರದ ಬಳಿ ಸದ್ಯಕ್ಕೆ ಸಾಕಷ್ಟು ತೈಲ ದಾಸ್ತಾನು ಇದೆ, ಜನರು ಗಾಬರಿಗೊಳ್ಳುವ ಅಗತ್ಯವಿಲ್ಲ’ ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.
ಆದರೂ, ಯುದ್ಧದ ಭೀತಿಯು ಜನರ ನೆಮ್ಮದಿ ಕೆಡಿಸಿದ್ದು, ಭಟ್ಕಳದ ರಸ್ತೆಗಳಲ್ಲಿ ಈಗ ಪೆಟ್ರೋಲ್ ಸಾಲುಗಳೇ ಪ್ರಮುಖ ಚರ್ಚೆಯ ವಿಷಯವಾಗಿದೆ.