Headlines

Bhagyalakshmi Serial ಮುಗಿಯಲ್ಲ ಎಂದಿದ್ಯಾಕೆ ನಟಿ ಸುಷ್ಮಾ ರಾವ್​? ಕೊನೆಗೂ ರಿವೀಲ್​ ಆಯ್ತು ಸತ್ಯ!

Bhagyalakshmi Serial ಮುಗಿಯಲ್ಲ ಎಂದಿದ್ಯಾಕೆ ನಟಿ ಸುಷ್ಮಾ ರಾವ್​? ಕೊನೆಗೂ ರಿವೀಲ್​ ಆಯ್ತು ಸತ್ಯ!



Bhagyalakshmi Serial ಮುಗಿಯಲ್ಲ ಎಂದಿದ್ಯಾಕೆ ನಟಿ ಸುಷ್ಮಾ ರಾವ್​? ಕೊನೆಗೂ ರಿವೀಲ್​ ಆಯ್ತು ಸತ್ಯ!
<p>ಕಲರ್ಸ್ ಕನ್ನಡದ ಜನಪ್ರಿಯ ಧಾರಾವಾಹಿ ‘ಭಾಗ್ಯಲಕ್ಷ್ಮಿ’ ಮುಗಿಯಲಿದೆ ಎಂಬ ವದಂತಿಗೆ ನಟಿ ಸುಷ್ಮಾ ತೆರೆ ಎಳೆದಿದ್ದಾರೆ. ಭಾಗ್ಯ ಮತ್ತು ಆದಿ ಒಂದಾಗಿದ್ದರೂ,ಕಥೆಗೆ ಅನಿರೀಕ್ಷಿತ ತಿರುವು ಸಿಕ್ಕಿದೆ. ಹೀಗಾಗಿ ಸೀರಿಯಲ್ ಸದ್ಯಕ್ಕೆ ಮುಗಿಯುವುದಿಲ್ಲ ಎಂಬುದು ಖಚಿತವಾಗಿದೆ.</p><img><p>ಕಲರ್ಸ್​ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಭಾಗ್ಯಲಕ್ಷ್ಮಿ ಸೀರಿಯಲ್​ (Bhagyalakshmi Serial) ಆರಂಭವಾಗಿ ಮೂರು ವರ್ಷಗಳಾಗಿವೆ. ಭಾಗ್ಯಳಿಗೆ ತಾಂಡವ್​ನಿಂದ ಆಗ್ತಿದ್ದ ಟಾರ್ಚರ್​ ನೋಡಿ ನೋಡಿ ಬೇಸತ್ತವರಿಗೆ ಕೆಲ ದಿನಗಳಿಂದ ಖುಷಿಯ ಸುದ್ದಿಯೂ ಸಿಕ್ಕಿದೆ. ಭಾಗ್ಯ ಮತ್ತು ಆದಿ ಒಂದಾಗಿದ್ದಾರೆ. ತಾಂಡವ್​ ಬದಲಾಗಿದ್ದರೂ, ಭಾಗ್ಯ ಆತನನ್ನು ಒಪ್ಪಿಕೊಳ್ಳುತ್ತಿಲ್ಲ. ಭಾಗ್ಯ ನನ್ನನ್ನು ಕ್ಷಮಿಸಿದರೆ ಸಾಕು ಎನ್ನುತ್ತಿದ್ದಾನೆ ತಾಂಡವ್​. ಆದರೆ ಮಗಳು ಮತ್ತು ಅತ್ತೆ ಬಿಟ್ಟು ಯಾರೂ ಆತನನ್ನು ನಂಬುತ್ತಿಲ್ಲ.</p><img><p>ಶ್ರೇಷ್ಠಾ ಮತ್ತು ತಾಂಡವ್​ನನ್ನು ಒಂದು ಮಾಡಿ ಭಾಗ್ಯ-ಆದಿ ಮದ್ವೆಯಾದ್ರೆ ಅಲ್ಲಿಗೆ ಸೀರಿಯಲ್​ ಮುಗಿಯತ್ತೆ ಎಂದು ಸಕತ್​ ಸುದ್ದಿಯಾಗಿತ್ತು. ಸೀರಿಯಲ್​ ತಂಡಗಳು ಟೂರ್​ ಮಾಡಿದ್ದು ಕೂಡ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದ್ದರಿಂದು ಶೂಟಿಂಗ್​ ಮುಗಿದಿದೆ ಎನ್ನಲಾಗಿತ್ತು.</p><img><p>ಆದರೆ ಕೊನೆಗೆ ಭಾಗ್ಯ ಅರ್ಥಾತ್​ ನಟಿ ಸುಷ್ಮಾ ಕೆ. ರಾವ್​ ಅವರು ಸೀರಿಯಲ್​ ಮುಗಿಯಲ್ಲ, ಇವೆಲ್ಲಾ ಸುಳ್ಳು ಸುದ್ದಿ. ಸೀರಿಯಲ್​ ಇನ್ನೂ ಇದೆ ಎಂದು ಅವರ ಇನ್​ಸ್ಟಾದಲ್ಲಿ ಹೇಳಿದ್ದರು. ಇದರ ಅಸಲಿಯತ್ತು ಇದೀಗ ಬಯಲಾಗಿದೆ.</p><img><p>ಅಷ್ಟಕ್ಕೂ ಆಗಿರುವುದು ಏನೆಂದರೆ, ಇದೀಗ ಭಾಗ್ಯ ಕೂಡ ಆದಿಯನ್ನು ಮನಸಾರೆ ಒಪ್ಪಿಕೊಂಡಿದ್ದಾಳೆ. ತಾಂಡವ್​ ಬದಲಾಗಿದ್ದರಿಂದ, ಆತನ ಮೇಲೆ ಭಾಗ್ಯಳಿಗೆ ಏನಾದ್ರೂ ಮತ್ತೆ ಅನುಕಂಪ ಬರಬಹುದಾ ಎನ್ನುವ ಆದಿಯ ಸಂದೇಹವನ್ನೂ ದೂರ ಮಾಡಿರುವ ಭಾಗ್ಯ, ನಾನು ಎಂದೆಂದಿಗೂ ನಿಮ್ಮವಳೇ ಎಂದಿದ್ದಾಳೆ. ಅಲ್ಲಿಗೆ ಸದ್ಯದ ಮಟ್ಟಿಗೆ ಆದಿ ಮತ್ತು ಭಾಗ್ಯ ಒಂದಾಗುವ ನಿರೀಕ್ಷೆ ಇದೆ.</p><img><p>ಆದರೆ, ಇಲ್ಲೇ ಇರೋದು ಟ್ವಿಸ್ಟ್​. ಮಗಳು ತನ್ವಿ ಯಾವುದೇ ಕಾರಣಕ್ಕೂ ಇದನ್ನು ಒಪ್ಪಲ್ಲ. ಅವಳು ಏನಿದ್ದರೂ ಬದಲಾಗಿರುವ ಅಪ್ಪನ ಪರ. ಆದ್ದರಿಂದ ಮಗಳನ್ನು ಒಪ್ಪಿಸಿ ನಾನು ಮದುವೆಯಾಗುವುದಾಗಿ ಆದಿಗೆ ಭಾಗ್ಯ ಹೇಳಿದ್ದು, ಅದಕ್ಕೆ ಆದಿನೂ ಒಪ್ಪಿಕೊಂಡಿದ್ದಾನೆ. ಕೈಮೇಲೆ ಕೈಯಿಟ್ಟು ಭರವಸೆ ಕೊಟ್ಟಿದ್ದಾನೆ ಆದಿ.</p><img><p>ಅಲ್ಲಿಗೆ ತನ್ವಿ ಒಪ್ಪಲ್ಲ, ಭಾಗ್ಯ-ಆದಿ ಸದ್ಯ ಒಂದಾಗಲ್ಲ ಎನ್ನೋದಂತೂ ನಿಜ. ಇನ್ನೊಂದೆಡೆ, ಆದಿ ಮತ್ತು ಭಾಗ್ಯಳನ್ನು ದೂರ ಮಾಡಲು ಆದಿಯ ಅಪ್ಪನೂ ಯತ್ನಿಸುತ್ತಿದ್ದಾನೆ. ಮತ್ತೊಂದೆಡೆ ಹುಣ್ಣಿಮೆಯ ಒಳಗೆ ಭಾಗ್ಯಳ ಕುತ್ತಿಗೆಗೆ ತಾಳಿ ಬೀಳಬೇಕು ಎಂದು ಜ್ಯೋತಿಷಿ ಹೇಳಿದ್ದಾನೆ. ಒಟ್ಟಿನಲ್ಲಿ ಹುಣ್ಣಿಮೆ ಬರಲು ಸೀರಿಯಲ್​ನಲ್ಲಿ ಇನ್ನೆಷ್ಟು ವರ್ಷ ಕಾಯಬೇಕೋ ಎಂದು ವೀಕ್ಷಕರು ಕಾತರದಿಂದ ಕಾಯುತ್ತಿರಬೇಕು ಅಷ್ಟೇ. ಸೀರಿಯಲ್​ ಅಂತೂ ಸದ್ಯ ಮುಗಿಯಲ್ಲ ಎನ್ನುವುದು ಕನ್​ಫರ್ಮ್​.</p>



Source link

Leave a Reply

Your email address will not be published. Required fields are marked *