
<p>ಮೆಗಾಸ್ಟಾರ್ ಚಿರಂಜೀವಿ ಅವರ 40 ವರ್ಷಗಳ ಸಿನಿಮಾ ಜರ್ನಿಯಲ್ಲಿ ಸಾಕಷ್ಟು ಹಿಟ್ಗಳಿವೆ. ಆದರೆ, ‘ಆಚಾರ್ಯ’ ಸಿನಿಮಾ ಅವರ ವೃತ್ತಿಜೀವನಕ್ಕೆ ಒಂದು ದೊಡ್ಡ ಕಪ್ಪುಚುಕ್ಕೆಯಾಗಿ ಉಳಿದಿದೆ. ಕೊರಟಾಲ ಶಿವ ನಿರ್ದೇಶನದಲ್ಲಿ ರಾಮ್ ಚರಣ್ ಜೊತೆ ನಟಿಸಿದ ಈ ಸಿನಿಮಾ ಯಾಕೆ ಅಷ್ಟು ಹೀನಾಯವಾಗಿ ಸೋತಿತು?</p><img><p>ಮೆಗಾಸ್ಟಾರ್ ಚಿರಂಜೀವಿ ತಮ್ಮ ಡ್ಯಾನ್ಸ್, ಫೈಟ್ಸ್ ಮತ್ತು ನಟನೆಯಿಂದ ಕೋಟ್ಯಂತರ ಅಭಿಮಾನಿಗಳನ್ನು ಗಳಿಸಿದ್ದಾರೆ. ತಮ್ಮ ಸುದೀರ್ಘ ಸಿನಿಮಾ ಪಯಣದಲ್ಲಿ ಹಲವು ಇಂಡಸ್ಟ್ರಿ ದಾಖಲೆಗಳನ್ನು ಬರೆದಿದ್ದಾರೆ. ಆದರೆ, ಯಾವುದೇ ಕ್ಷೇತ್ರದಲ್ಲಿ ಯಶಸ್ಸಿನ ಜೊತೆಗೆ ಸೋಲು ಕೂಡ ಸಹಜ.</p><img><p>ಚಿರಂಜೀವಿ ಅವರ ಕೆರಿಯರ್ನಲ್ಲಿ ‘ಬಿಗ್ ಬಾಸ್’, ‘ಮೃಗರಾಜು’, ‘ಭೋಳಾಶಂಕರ್’ ನಂತಹ ಫ್ಲಾಪ್ ಸಿನಿಮಾಗಳಿವೆ. ಆದರೆ, ಇವೆಲ್ಲಕ್ಕಿಂತ ‘ಆಚಾರ್ಯ’ ಸಿನಿಮಾ ಮೆಗಾಸ್ಟಾರ್ಗೆ ತಂದ ಅವಮಾನ ಮತ್ತು ಕಳಂಕವನ್ನು ಬೇರೆ ಯಾವ ಚಿತ್ರವೂ ನೀಡಿಲ್ಲ ಎಂದು ವಿಶ್ಲೇಷಕರು ಹೇಳುತ್ತಾರೆ.</p><img><p>ಬ್ಲಾಕ್ಬಸ್ಟರ್ ನಿರ್ದೇಶಕ ಕೊರಟಾಲ ಶಿವ ನಿರ್ದೇಶನ, ಜೊತೆಗೆ ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಪ್ರಮುಖ ಪಾತ್ರ. ಹೀಗಾಗಿ ಸಿನಿಮಾ ಮೇಲೆ ನಿರೀಕ್ಷೆ ಮುಗಿಲುಮುಟ್ಟಿತ್ತು. ಆದರೆ, ಬಿಡುಗಡೆಯಾದ ಮೊದಲ ದಿನವೇ ನೆಗೆಟಿವ್ ಟಾಕ್ ಬಂತು. ವಿಮರ್ಶಕರು ಈ ಚಿತ್ರಕ್ಕೆ 1 ಅಥವಾ 1.5 ರೇಟಿಂಗ್ ನೀಡಿದ್ದೇ ಪರಿಸ್ಥಿತಿ ಎಷ್ಟು ಕೆಟ್ಟಿತ್ತು ಎಂಬುದಕ್ಕೆ ಸಾಕ್ಷಿ. ವಾರ ಕಳೆಯುವ ಮೊದಲೇ ಥಿಯೇಟರ್ನಿಂದ ಸಿನಿಮಾ ಮಾಯವಾಗಿ, ತಂದೆ-ಮಗ ಇಬ್ಬರ ಕೆರಿಯರ್ನಲ್ಲೂ ದೊಡ್ಡ ಡಿಸಾಸ್ಟರ್ ಆಗಿ ಉಳಿಯಿತು.</p><img><p>ಟ್ರೇಡ್ ಮೂಲಗಳ ಪ್ರಕಾರ, ಈ ಚಿತ್ರದಿಂದ ವಿತರಕರು ಸುಮಾರು 100 ಕೋಟಿ ರೂಪಾಯಿವರೆಗೆ ನಷ್ಟ ಅನುಭವಿಸಿದ್ದಾರಂತೆ. ಚಿರಂಜೀವಿ ತಮ್ಮ ಕೆರಿಯರ್ನಲ್ಲೇ ಮೊದಲ ಬಾರಿಗೆ ತಮ್ಮ ಸಂಭಾವನೆಯ ಒಂದು ಭಾಗವನ್ನು ಹಿಂದಿರುಗಿಸಬೇಕಾಗಿ ಬಂತು. ಸಿನಿಮಾದ ತುಂಬಾ ಗಂಭೀರ ವಾತಾವರಣ, ಚಿರಂಜೀವಿ ಮಾರ್ಕ್ ಕಾಮಿಡಿ ಮತ್ತು ಗ್ರೇಸ್ ಇಲ್ಲದಿರುವುದು ಪ್ರೇಕ್ಷಕರಿಗೆ ನಿರಾಸೆ ಮೂಡಿಸಿತು.</p><img><p>ಕೊರಟಾಲ ಶಿವ ಅವರ ಶೈಲಿಯ ಸಾಮಾಜಿಕ ಸಂದೇಶವಿದ್ದರೂ, ಚಿತ್ರಕಥೆ ತುಂಬಾ ನಿಧಾನವಾಗಿತ್ತು. ಕಳಪೆ ವಿಎಫ್ಎಕ್ಸ್ ಮತ್ತು ಗ್ರಾಫಿಕ್ಸ್ ತೀವ್ರ ಟೀಕೆಗೆ ಗುರಿಯಾಯ್ತು. ಹಳೆಯ ಕಾಲದ ಸೀನ್ಗಳು ಇಂದಿನ ಪ್ರೇಕ್ಷಕರಿಗೆ ಕನೆಕ್ಟ್ ಆಗಲಿಲ್ಲ. ಕ್ಲೈಮ್ಯಾಕ್ಸ್ ಫೈಟ್ ಸೀನ್ ಕೂಡಾ ಅಸಹಜವಾಗಿತ್ತು. ಒಟ್ಟಿನಲ್ಲಿ, ಚಿರಂಜೀವಿ ಇಮೇಜ್ಗೆ ತಕ್ಕಂತೆ ದೃಶ್ಯಗಳಿಲ್ಲದೆ, ನಿರ್ದೇಶಕರ ವೈಫಲ್ಯದಿಂದ ‘ಆಚಾರ್ಯ’ ಸಿನಿಮಾ ಮೆಗಾಸ್ಟಾರ್ ಕೆರಿಯರ್ನಲ್ಲೊಂದು ಕಪ್ಪುಚುಕ್ಕೆಯಾಗಿ ಉಳಿದಿದೆ.</p>
Source link
ಚಿರಂಜೀವಿ ಅವರ 40 ವರ್ಷದ ಕೆರಿಯರ್ನ ಕಪ್ಪುಚುಕ್ಕೆ ಈ ಸಿನಿಮಾ: 100 ಕೋಟಿ ಹಾಕಿ ವಾರದಲ್ಲೇ ಎತ್ತಂಗಡಿ!