Naga Chaitanya Video Viral: ವೇದಿಕೆಯಲ್ಲೇ ಕುರ್ಚಿಯಿಂದ ಬಿದ್ದ ನಟ: ಆಯೋಜಕರ ಮೇಲೆ ಫ್ಯಾನ್ಸ್ ಫುಲ್ ಗರಂ | Naga Chaitanya Falls From Chair During Vrushakarma Event Video Goes Viral Gvd

Naga Chaitanya Video Viral: ವೇದಿಕೆಯಲ್ಲೇ ಕುರ್ಚಿಯಿಂದ ಬಿದ್ದ ನಟ: ಆಯೋಜಕರ ಮೇಲೆ ಫ್ಯಾನ್ಸ್ ಫುಲ್ ಗರಂ | Naga Chaitanya Falls From Chair During Vrushakarma Event Video Goes Viral Gvd



Naga Chaitanya Video Viral: ವೇದಿಕೆಯಲ್ಲೇ ಕುರ್ಚಿಯಿಂದ ಬಿದ್ದ ನಟ: ಆಯೋಜಕರ ಮೇಲೆ ಫ್ಯಾನ್ಸ್ ಫುಲ್ ಗರಂ | Naga Chaitanya Falls From Chair During Vrushakarma Event Video Goes Viral Gvd

ನಟ ನಾಗ ಚೈತನ್ಯ ಅವರ ಹೊಸ ಸಿನಿಮಾ ‘ವೃಷಕರ್ಮ’ ಫಸ್ಟ್ ಗ್ಲಿಂಪ್ಸ್ ರಿಲೀಸ್ ಕಾರ್ಯಕ್ರಮದಲ್ಲಿ ವೇದಿಕೆ ಮೇಲಿಂದ ಬಿದ್ದಿದ್ದಾರೆ. ಈ ಅಪಘಾತದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಕಾರ್ಯಕ್ರಮದ ಆಯೋಜಕರ ವಿರುದ್ಧ ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈಗೆಲ್ಲಾ ಸಿನಿಮಾ ರಿಲೀಸ್‌ಗೂ ಮುನ್ನ ನಡೆಯೋ ಪ್ರೀ-ರಿಲೀಸ್ ಇವೆಂಟ್‌ಗಳಿಗೆ ಸಖತ್ ಕ್ರೇಜ್ ಇದೆ. ತಮ್ಮ ನೆಚ್ಚಿನ ಸ್ಟಾರ್‌ಗಳನ್ನು ಹತ್ತಿರದಿಂದ ನೋಡೋಕೆ ಫ್ಯಾನ್ಸ್ ಮುಗಿಬೀಳ್ತಾರೆ. ಇಂಥ ಕಾರ್ಯಕ್ರಮಗಳ ವಿಡಿಯೋಗಳು ಬೇಗ ವೈರಲ್ ಕೂಡ ಆಗುತ್ತವೆ. ಈಗ, ತೆಲುಗಿನ ಯುವ ನಟ ಅಕ್ಕಿನೇನಿ ನಾಗ ಚೈತನ್ಯ ಅವರ ಹೊಸ ಸಿನಿಮಾದ ಫಸ್ಟ್ ಗ್ಲಿಂಪ್ಸ್ ರಿಲೀಸ್ ಕಾರ್ಯಕ್ರಮದ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡ್ತಿದೆ. ಆದರೆ ಇದು ಒಂದು ಸಣ್ಣ ಅಪಘಾತದ ವಿಡಿಯೋ.

2023ರಲ್ಲಿ ಬಂದಿದ್ದ ಸೂಪರ್‌ ನ್ಯಾಚುರಲ್ ಥ್ರಿಲ್ಲರ್ ‘ವಿರೂಪಾಕ್ಷ’ ಚಿತ್ರದ ನಿರ್ದೇಶಕರೇ ‘ವೃಷಕರ್ಮ’ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಇದು ನಾಗ ಚೈತನ್ಯ ಅವರ ಮುಂದಿನ ಸಿನಿಮಾ. ಹೈದರಾಬಾದ್‌ನಲ್ಲಿ ನಡೆದ ಈ ಚಿತ್ರದ ಫಸ್ಟ್ ಗ್ಲಿಂಪ್ಸ್ ವಿಡಿಯೋ ರಿಲೀಸ್ ಕಾರ್ಯಕ್ರಮದಲ್ಲಿ ನಾಗ ಚೈತನ್ಯ ಭಾಗವಹಿಸಿದ್ದರು. ವೇದಿಕೆ ಮೇಲೆ ತಮಗಾಗಿ ಹಾಕಿದ್ದ ಕುರ್ಚಿಯ ಮೇಲೆ ಕೂರಲು ಹೋದಾಗ ಅವರು ಹಿಂದಕ್ಕೆ ಬಿದ್ದಿದ್ದಾರೆ. ಸುತ್ತಮುತ್ತ ಇದ್ದವರು ಗಾಬರಿಯಾದರೆ, ನಾಗ ಚೈತನ್ಯ ಮಾತ್ರ ನಗುಮುಖದಲ್ಲೇ ಎದ್ದು ನಿಂತಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗಿದೆ.

Scroll to load tweet…

ಮೀನಾಕ್ಷಿ ಚೌಧರಿ ‘ವೃಷಕರ್ಮ’ ಚಿತ್ರದ ನಾಯಕಿ

ವಿಡಿಯೋ ವೈರಲ್ ಆಗ್ತಿದ್ದಂತೆ, ಕಾರ್ಯಕ್ರಮದ ಆಯೋಜಕರ ಮೇಲೆ ಫ್ಯಾನ್ಸ್ ಗರಂ ಆಗಿದ್ದಾರೆ. ‘ಇಷ್ಟೊಂದು ದೊಡ್ಡ ಸ್ಟಾರ್ ಬರೋ ಕಾರ್ಯಕ್ರಮದಲ್ಲಿ ಕನಿಷ್ಠ ಸುರಕ್ಷತಾ ವ್ಯವಸ್ಥೆನೂ ಚೆಕ್ ಮಾಡಲ್ವಾ? ಹೀಗಾ ಒಂದು ಕಾರ್ಯಕ್ರಮ ಮಾಡೋದು?’ ಅಂತ ಪ್ರಶ್ನೆ ಮಾಡ್ತಿದ್ದಾರೆ. ಆಯೋಜಕರು ಇದಕ್ಕೆ ಉತ್ತರ ಕೊಡಬೇಕು ಅಂತಾನೂ ಕಾಮೆಂಟ್ ಮಾಡ್ತಿದ್ದಾರೆ. ಮೀನಾಕ್ಷಿ ಚೌಧರಿ ‘ವೃಷಕರ್ಮ’ ಚಿತ್ರದ ನಾಯಕಿ. ಜಯರಾಂ, ಸ್ಪರ್ಶ್ ಶ್ರೀವಾಸ್ತವ, ಸತ್ಯ ಮುಂತಾದವರು ಪ್ರಮುಖ ಪಾತ್ರಗಳಲ್ಲಿದ್ದಾರೆ.

ಶ್ರೀ ವೆಂಕಟೇಶ್ವರ ಸಿನಿ ಚಿತ್ರ ಬ್ಯಾನರ್ ಅಡಿಯಲ್ಲಿ ಬಿವಿಎಸ್‌ಎನ್ ಪ್ರಸಾದ್ ಅವರು ಸುಕುಮಾರ್ ರೈಟಿಂಗ್ಸ್ ಜೊತೆ ಸೇರಿ ಸಿನಿಮಾ ನಿರ್ಮಿಸುತ್ತಿದ್ದಾರೆ. ರಾಗುಲ್ ಡಿ ಹೆರಿಯನ್ ಛಾಯಾಗ್ರಹಣ, ಬಿ. ಅಜನೀಶ್ ಲೋಕನಾಥ್ ಸಂಗೀತ, ಮತ್ತು ನವೀನ್ ನೂಲಿ ಸಂಕಲನದ ಜವಾಬ್ದಾರಿ ಹೊತ್ತಿದ್ದಾರೆ. ಶ್ರೀ ನಾಗೇಂದ್ರ ತಂಗಾಲ ಪ್ರೊಡಕ್ಷನ್ ಡಿಸೈನ್ ಮಾಡಿದ್ದು, ಇಶಾನ್ ಸಕ್ಸೇನಾ (ಇವಿ ಎಂಟರ್‌ಟೈನ್‌ಮೆಂಟ್ಸ್) ಸಹ-ನಿರ್ಮಾಪಕರಾಗಿದ್ದಾರೆ. ನರಸಿಂಹಾಚಾರಿ ಚೆನ್ನೊಜು ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ. ಅರ್ಚನಾ ರಾವ್ ವಸ್ತ್ರ ವಿನ್ಯಾಸ ಮಾಡಿದ್ದು, ವಿಜಯ್, ಟುಡೋರ್ ಲಜಾರೋವ್, ಮತ್ತು ಕರುಣಾಕರ್ ಸಾಹಸ ನಿರ್ದೇಶನ ಮಾಡಿದ್ದಾರೆ. ಏಸ್ತೆಟಿಕ್ ಪಬ್ಲಿಸಿಟಿ ಡಿಸೈನ್ಸ್ ಮಾಡಿದ್ದಾರೆ.



Source link

Leave a Reply

Your email address will not be published. Required fields are marked *