
<p>Amruthadhaare Serial Episode: ಸ್ಟಾಕ್ ಮಾರ್ಕೆಟ್ನಲ್ಲಿ ದೊಡ್ಡ ಯಶಸ್ಸು ಪಡೆದು, ಇಂದು 28000 ಸಾವಿರ ಕೋಟಿ ರೂಪಾಯಿ ಒಡೆಯ ಎನಿಸಿಕೊಂಡಿರೋ ನಿಖಿಲ್ ಕಾಮತ್, ನಿತಿನ್ ಕಾಮತ್ ಅವರು ಮೂಲತಃ ಶಿವಮೊಗ್ಗದವರು. ಈಗ ಅಮೃತಧಾರೆ ಧಾರಾವಾಹಿಯ ಗೌತಮ್ ದಿವಾನ್ ಕೂಡ ಇದೇ ದಾರಿ ಹಿಡಿದಿದ್ದಾನೆ.</p><p> </p><img><p>ಇರೋ ಆಸ್ತಿಯೆಲ್ಲವನ್ನು ಮಲ ಸಹೋದರ ಜಯದೇವ್ ದಿವಾನ್ಗೆ ಬರೆದುಕೊಟ್ಟ ಬಂದ, ಗೌತಮ್ ಈಗ ಮತ್ತೆ ಬ್ಯುಸಿನೆಸ್ ಮಾಡಲು ರೆಡಿ ಆಗಿದ್ದಾನೆ. ಹೌದು, ಅವನು ಬ್ಯುಸಿನೆಸ್ ಮಾಡಿ ಸಾಮ್ರಾಜ್ಯ ಕಟ್ಟಬೇಕು ಎನ್ನೋದು ಅವನ ತಾಯಿ ಭಾಗ್ಯಳ ಕನಸು.</p><img><p>ಅತ್ತ ಗೌತಮ್ ದಿವಾನ್ ಎಲ್ಲ ತಯಾರಿ ಮಾಡಿಕೊಂಡಿದ್ದಾನೆ, ಆಫೀಸ್ ಕೂಡ ರೆಡಿಯಿದೆ, ಪ್ಲ್ಯಾನ್ ಕೂಡ ಆಗಿದೆ. ಅಂದಹಾಗೆ ತಾಯಿ, ಅಜ್ಜಿ ಬಳಿ ಅವನು ಹೊಸ ಆಫೀಸ್ ಉದ್ಘಾಟನೆ ಕೂಡ ಮಾಡಿದ್ದಾನೆ.</p><img><p>ಗೌತಮ್ ದಿವಾನ್ ಹೊಸ ಆಫೀಸ್ ಮಾಡಿರೋದು, ಬ್ಯುಸಿನೆಸ್ ಮಾಡುತ್ತಿರೋದು ವಿರೋಧಿಗಳಿಗೆ ಭಯ ಹುಟ್ಟಿಸಿದೆ. ಬ್ಯುಸಿನೆಸ್ ಮಾಡ್ತಿರೋದು, ಸ್ಟಾರ್ಟ್ಅಪ್ ಮಾಡ್ತಿರೋದು ಗೌತಮ್ ದಿವಾನ್ ಎಂದು ಜಯದೇವ್ನನ್ನು ಎಚ್ಚರಿಸ್ತಿದ್ದಾರೆ. ಅಂಥ ಸಾಮ್ರಾಜ್ಯ ಕಟ್ಟಿದ ಗೌತಮ್ಗೆ ಸ್ಟಾರ್ಟ್ಅಪ್ ಮಾಡಿ, ಬೆಳೆಸೋದು ದೊಡ್ಡ ವಿಚಾರವಲ್ಲ ಎಂದು ಎಚ್ಚರಿಸಿದ್ದಾರೆ.</p><img><p>ಗೌತಮ್ ದಿವಾನ್ ಹೊಸ ಹೆಜ್ಜೆ ಇಟ್ಟಿರೋದು ಜಯದೇವ್ ಹಾಗೂ ಅವನ ತಾಯಿಗೆ ಭಯ ಹುಟ್ಟಿಸಿದೆ, ಮುಂದೆ ಈ ಉದ್ಯಮವನ್ನು ಹಾಳು ಮಾಡಲು ಏನು ಮಾಡ್ತಾರೆ ಎಂದು ಕಾದು ನೋಡಬೇಕಿದೆ. ಬಹುಶಃ ಜಯದೇವ್ ಮಾಡಿದ ಮೋಸವನ್ನು ಬಯಲಿಗೆಳೆದು, ಗೌತಮ್ ಮತ್ತೆ ಸಾಮ್ರಾಜ್ಯ ಕಟ್ಟಬಹುದು.</p>
Source link
Amruthadhaare Serial: ಬೆಂಗಳೂರಿನ 28000 ಕೋಟಿ ಉದ್ಯಮಿ ನಿಖಿಲ್ ಕಾಮತ್ ಹಾದಿ ಹಿಡಿದ ಗೌತಮ್