Headlines

ಅಣ್ಣಾಮಲೈ 'ಕಿಂಗ್‌ ಮೇಕರ್' ಗೇಮ್‌ಪ್ಲ್ಯಾನ್; AIDMK ಪಾಳಯದಲ್ಲಿ ನಡುಕ! BJP ಹೇಳಿದ್ದೇನು?

ಅಣ್ಣಾಮಲೈ 'ಕಿಂಗ್‌ ಮೇಕರ್'  ಗೇಮ್‌ಪ್ಲ್ಯಾನ್; AIDMK ಪಾಳಯದಲ್ಲಿ ನಡುಕ! BJP ಹೇಳಿದ್ದೇನು?



ಅಣ್ಣಾಮಲೈ 'ಕಿಂಗ್‌ ಮೇಕರ್'  ಗೇಮ್‌ಪ್ಲ್ಯಾನ್; AIDMK ಪಾಳಯದಲ್ಲಿ ನಡುಕ! BJP ಹೇಳಿದ್ದೇನು?
<p>ತಮಿಳುನಾಡು ಬಿಜೆಪಿ ನಾಯಕ ಅಣ್ಣಾಮಲೈ ಅವರ ‘ಕಿಂಗ್ ಮೇಕರ್’ ಅವತಾರ ತಮಿಳುನಾಡು ರಾಜಕೀಯದಲ್ಲಿ ಯಾವ ರೀತಿಯ ಬದಲಾವಣೆಗಳನ್ನು ತರಲಿದೆ? ಎಐಎಡಿಎಂಕೆ ತನ್ನ ಭದ್ರಕೋಟೆಯನ್ನು ಉಳಿಸಿಕೊಳ್ಳುವುದೇ ಅಥವಾ ಬಿಜೆಪಿ ತನ್ನ ನೆಲೆಯನ್ನು ಇನ್ನಷ್ಟು ಗಟ್ಟಿಮಾಡಿಕೊಳ್ಳುವುದೇ ಎಂಬ ಕುತೂಹಲ ಹೆಚ್ಚಾಗಿದೆ.</p><img><p>2026ರ ತಮಿಳುನಾಡು ವಿಧಾನಸಭಾ ಚುನಾವಣಾ ಕಣ ಈಗಲೇ ಬಿಸಿಯಾಗಿದೆ. ಅದರಲ್ಲೂ, ತಮಿಳುನಾಡು ಬಿಜೆಪಿಯ ಮಾಜಿ ಅಧ್ಯಕ್ಷ ಅಣ್ಣಾಮಲೈ ಅವರ ರಾಜಕೀಯ ನಡೆಗಳು ಬಿರುಗಾಳಿ ಎಬ್ಬಿಸಿವೆ. ಮುಂಬರುವ ಚುನಾವಣೆಯಲ್ಲಿ ಶಾಸಕರಾಗಿ ವಿಧಾನಸಭೆ ಪ್ರವೇಶಿಸಬೇಕೆಂದು ಹೈಕಮಾಂಡ್ ಅಣ್ಣಾಮಲೈಗೆ ಸೂಚಿಸಿತ್ತು. ಇದಕ್ಕಾಗಿ ಮೊಡಕುರಿಚಿ ಅಥವಾ ಗೌಂಡಂಪಾಳಯಂ ಕ್ಷೇತ್ರಗಳನ್ನು ಗುರುತಿಸಲಾಗಿತ್ತು. ಆದರೆ ಅಣ್ಣಾಮಲೈ ಬೇರೆಯದ್ದೇ ಪ್ಲ್ಯಾನ್ ಮಾಡಿದ್ದಾರೆ.</p><img><p>ದೆಹಲಿ ನಾಯಕರ ಮುಂದೆ ಅಣ್ಣಾಮಲೈ ತಾರ್ಕಿಕ ವಾದವೊಂದನ್ನು ಮಂಡಿಸಿದ್ದಾರೆ. "ಈ ಬಾರಿ ನಾನು ಸ್ಪರ್ಧಿಸಿದರೆ ಗೆಲ್ಲುವುದು ಖಚಿತ. ಆದರೆ, ಎಐಎಡಿಎಂಕೆ ಮೈತ್ರಿಯಲ್ಲಿ ನಾನೊಬ್ಬ ಶಾಸಕನಾಗಿ ವಿಧಾನಸಭೆ ಪ್ರವೇಶಿಸಿದರೆ, ಸ್ವತಂತ್ರವಾಗಿ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಮೈತ್ರಿ ಧರ್ಮದ ಹೆಸರಲ್ಲಿ ಎಐಎಡಿಎಂಕೆ ಕಾರ್ಯಗಳಿಗೆ ಅಡ್ಡಿಪಡಿಸಲು ಅಥವಾ ಅವರನ್ನು ವಿಮರ್ಶಿಸಲು ಆಗುವುದಿಲ್ಲ. ಇದು ನನಗೆ ಧರ್ಮಸಂಕಟ ತರುತ್ತದೆ" ಎಂದು ಅವರು ನೇರವಾಗಿ ಹೇಳಿದ್ದಾರೆ ಎಂದು &nbsp;ವರದಿಯಾಗಿದೆ.</p><p>ಬದಲಿಗೆ, ಕೊಂಗು ವಲಯದ ಸುಮಾರು 60ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಎನ್‌ಡಿಎ ಮೈತ್ರಿಕೂಟದ ಗೆಲುವನ್ನು ಖಚಿತಪಡಿಸುವ ಪ್ರಚಾರದ ಜವಾಬ್ದಾರಿಯನ್ನು ತಮಗೆ ನೀಡುವಂತೆ ಅವರು ಮನವಿ ಮಾಡಿದ್ದಾರೆ.</p><img><p>ಅಣ್ಣಾಮಲೈ ಅವರ ಈ ಮನವಿಯನ್ನು ಬಿಜೆಪಿ ಹೈಕಮಾಂಡ್ ಒಪ್ಪಿಕೊಂಡಿದ್ದು, ಕೊಂಗು ವಲಯದ ಅಭ್ಯರ್ಥಿಗಳ ಆಯ್ಕೆಯಲ್ಲಿ ಅವರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದೆ. ಇದೇ ವಿಚಾರ ಈಗ ಎಐಎಡಿಎಂಕೆ ವಲಯದಲ್ಲಿ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಅಣ್ಣಾಮಲೈ ಟಾರ್ಗೆಟ್ ಮಾಡುತ್ತಿರುವ ಕ್ಷೇತ್ರಗಳೆಲ್ಲವೂ ಕಳೆದ ಚುನಾವಣೆಗಳಲ್ಲಿ ಎಐಎಡಿಎಂಕೆ ಭದ್ರಕೋಟೆಗಳಾಗಿದ್ದವು.&nbsp;</p><p>ಕೊಂಗು ವಲಯದಲ್ಲಿ ಪ್ರಭಾವಿ ಬಿಜೆಪಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಮೂಲಕ, ಭವಿಷ್ಯದಲ್ಲಿ ಆ ಭಾಗದಲ್ಲಿ ಬಿಜೆಪಿಯನ್ನು ಒಂದು ಪರ್ಯಾಯ ಶಕ್ತಿಯಾಗಿ ಬೆಳೆಸಲು ಅಣ್ಣಾಮಲೈ ಪ್ಲ್ಯಾನ್ ಮಾಡಿದ್ದಾರೆ. ಮೈತ್ರಿಯಲ್ಲಿದ್ದುಕೊಂಡೇ ಎಐಎಡಿಎಂಕೆ ಕೋಟೆಗೆ ಲಗ್ಗೆ ಹಾಕುವ ಅಣ್ಣಾಮಲೈ ಪ್ರಯತ್ನ, ಎಡಪ್ಪಾಡಿ ಪಳನಿಸ್ವಾಮಿ ಬಣಕ್ಕೆ ತೀವ್ರ ಆಘಾತ ನೀಡಿದೆ.</p><img><p>"ಗೆಲ್ಲುವ ಕುದುರೆಗಳನ್ನು ನಾನು ಗುರುತಿಸುತ್ತೇನೆ" ಎಂದು ಅಣ್ಣಾಮಲೈ ಅಖಾಡಕ್ಕಿಳಿದಿರುವುದು ಕೇವಲ ಚುನಾವಣಾ ತಂತ್ರವಲ್ಲ. ಇದು 2026ರ ನಂತರದ ತಮಿಳುನಾಡು ರಾಜಕೀಯದಲ್ಲಿ ಬಿಜೆಪಿಯನ್ನು ಪ್ರಮುಖ ವಿರೋಧ ಪಕ್ಷವಾಗಿ ಮಾಡುವ ಪ್ರಯತ್ನ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಾರೆ.&nbsp;</p><p><strong>ಇದನ್ನೂ ಓದಿ: </strong><strong>ಭಾರತದ ಪೋಸ್ಟ್‌ ಆಫೀಸ್‌ನ 38 ಕೋಟಿ ಖಾತೆಯಲ್ಲಿದೆ ಕರ್ನಾಟಕ ಬಜೆಟ್‌ನ ಐದು ಪಟ್ಟು ಹಣ!</strong></p><img><p>ಅಣ್ಣಾಮಲೈ ಅವರ ಈ ‘ಕಿಂಗ್ ಮೇಕರ್’ ನಡೆ ಕೊಂಗು ವಲಯದಲ್ಲಿ ಯಾವ ರೀತಿಯ ಬದಲಾವಣೆ ತರಲಿದೆ? ಎಐಎಡಿಎಂಕೆ ತನ್ನ ಕೋಟೆ ಉಳಿಸಿಕೊಳ್ಳುವುದೇ ಅಥವಾ ಬಿಜೆಪಿ ತನ್ನ ಹೆಜ್ಜೆಗುರುತನ್ನು ಇನ್ನಷ್ಟು ಬಲಪಡಿಸಿಕೊಳ್ಳುವುದೇ ಎಂಬುದನ್ನು ಕಾದು ನೋಡಬೇಕು.</p><p><strong>ಇದನ್ನೂ ಓದಿ: </strong><strong>ಮೊದಲು ಹಿಂದೇಟು, ನಂತ್ರ ಒಪ್ಪಿಗೆ: ಕಾಂಗ್ರೆಸ್‌ಗೆ ಗುಡ್‌ನ್ಯೂಸ್ ನೀಡಿದ ಮಮತಾ ಬ್ಯಾನರ್ಜಿ</strong></p>



Source link

Leave a Reply

Your email address will not be published. Required fields are marked *