ವಿಶ್ವಕಪ್‌ ಗೆಲ್ಲುವ ಭರವಸೆಯಲ್ಲಿದ್ದ ಭಾರತ; ಆ ಕಹಿ ಘಟನೆ ನೆನಪಿಸಿ ಎಚ್ಚರಿಕೆ ಕೊಟ್ಟ ಪಾಕಿಸ್ತಾನ ಮಾಜಿ ಆಟಗಾರ

ವಿಶ್ವಕಪ್‌ ಗೆಲ್ಲುವ ಭರವಸೆಯಲ್ಲಿದ್ದ ಭಾರತ; ಆ ಕಹಿ ಘಟನೆ ನೆನಪಿಸಿ ಎಚ್ಚರಿಕೆ ಕೊಟ್ಟ ಪಾಕಿಸ್ತಾನ ಮಾಜಿ ಆಟಗಾರ



ವಿಶ್ವಕಪ್‌ ಗೆಲ್ಲುವ ಭರವಸೆಯಲ್ಲಿದ್ದ ಭಾರತ; ಆ ಕಹಿ ಘಟನೆ ನೆನಪಿಸಿ ಎಚ್ಚರಿಕೆ ಕೊಟ್ಟ ಪಾಕಿಸ್ತಾನ ಮಾಜಿ ಆಟಗಾರ
<p>T20 world cup final: ಅಹಮದಾಬಾದ್‌ನಲ್ಲಿ ಭಾರತ-ನ್ಯೂಜಿಲೆಂಡ್ ಮುಖಾಮುಖಿಯಾಗಲಿವೆ. ಈ ಹೈವೋಲ್ಟೇಜ್ ಪಂದ್ಯಕ್ಕೂ ಮುನ್ನ, ಪಾಕಿಸ್ತಾನದ ಮಾಜಿ ಆಟಗಾರ ಶೋಯೆಬ್ ಅಖ್ತರ್ 2023ರ ವಿಶ್ವಕಪ್ ಸೋಲನ್ನು ನೆನಪಿಸಿ ಟೀಮ್ ಇಂಡಿಯಾ ಮೇಲೆ ಒತ್ತಡ ಹೇರುವ ಮಾತುಗಳನ್ನಾಡಿದ್ದಾರೆ.</p><p>&nbsp;</p><img><p>ಐಸಿಸಿ ಪುರುಷರ ಟಿ20 ವಿಶ್ವಕಪ್ 2026 ಕ್ಲೈಮ್ಯಾಕ್ಸ್ ಹಂತ ತಲುಪಿದೆ. ಭಾನುವಾರ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವೆ ಫೈನಲ್ ಪಂದ್ಯ ನಡೆಯಲಿದೆ. ಈ ಪಂದ್ಯಕ್ಕೂ ಮುನ್ನ ಪಾಕ್ ಮಾಜಿ ವೇಗಿ ಶೋಯೆಬ್ ಅಖ್ತರ್, 2023ರ ವಿಶ್ವಕಪ್ ಸೋಲನ್ನು ನೆನಪಿಸಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.</p><img><p>ಭಾರತ ಈ ಪಂದ್ಯದಲ್ಲಿ ಫೇವರಿಟ್ ಆಗಿ ಕಣಕ್ಕಿಳಿಯುತ್ತಿದೆ. ಆದರೆ ಅವರ ಮೇಲೆ 150 ಕೋಟಿ ಜನರ ನಿರೀಕ್ಷೆಯ ಒತ್ತಡವಿದೆ. 2023ರ ವಿಶ್ವಕಪ್ ಫೈನಲ್ ಸೋಲಿನ ನೆನಪುಗಳು ಆಟಗಾರರ ಮೇಲೆ ಮಾನಸಿಕ ಒತ್ತಡವನ್ನು ಹೆಚ್ಚಿಸುತ್ತವೆ ಎಂದು ಅಖ್ತರ್ ಹೇಳಿದ್ದಾರೆ.</p><img><p>ಅಹಮದಾಬಾದ್ ಪಿಚ್ ಸ್ಪಿನ್ನರ್‌ಗಳಿಗೆ ನೆರವಾದರೆ, 175-200 ರನ್ ಸವಾಲಿನ ಮೊತ್ತವಾಗಲಿದೆ. ಒಂದು ವೇಳೆ ನ್ಯೂಜಿಲೆಂಡ್ 225-250 ರನ್ ಗಳಿಸಿದರೆ, ಭಾರತ ತೀವ್ರ ಒತ್ತಡಕ್ಕೆ ಸಿಲುಕಲಿದೆ ಎಂದು ಅಖ್ತರ್ ಅಭಿಪ್ರಾಯಪಟ್ಟಿದ್ದಾರೆ.</p><img><p>ಪಾಕಿಸ್ತಾನದ ಮತ್ತೊಬ್ಬ ಮಾಜಿ ಬೌಲರ್ ಉಮರ್ ಗುಲ್ ಕೂಡ ಅಖ್ತರ್ ಮಾತಿಗೆ ಸಹಮತ ವ್ಯಕ್ತಪಡಿಸಿದ್ದಾರೆ. ಕಿವೀಸ್ ತಂಡಕ್ಕೆ ಭಾರತದಲ್ಲಿ ಆಡಿದ ಅನುಭವ ಹೆಚ್ಚಿದೆ. ಅವರ ಬೌಲಿಂಗ್ ವಿಭಾಗ ಬಲಿಷ್ಠವಾಗಿದೆ ಎಂದು ಗುಲ್ ಹೇಳಿದ್ದಾರೆ.</p><img><p>ಭಾರತದ ಬಳಿ ಅಪಾರ ಪ್ರತಿಭೆ ಇದೆ, ಅವರು ಒಂದೇ ಬಾರಿಗೆ ಎರಡು-ಮೂರು ಬಲಿಷ್ಠ ತಂಡಗಳನ್ನು ಕಟ್ಟಬಲ್ಲರು. ಆದರೆ ನಾವು ಒಗ್ಗಟ್ಟಿನಿಂದ ಹೋರಾಡಿ ಗೆಲ್ಲುತ್ತೇವೆ ಎಂದು ನ್ಯೂಜಿಲೆಂಡ್ ಆಲ್‌ರೌಂಡರ್ ಗ್ಲೆನ್ ಫಿಲಿಪ್ಸ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.</p><img><p>ಸೂರ್ಯಕುಮಾರ್ ಯಾದವ್ ನಾಯಕತ್ವದ ಭಾರತ ತಂಡ ಸತತ ಎರಡನೇ ಬಾರಿಗೆ ಟಿ20 ವಿಶ್ವಕಪ್ ಗೆಲ್ಲುವ ಗುರಿಯಲ್ಲಿದೆ. 150 ಕೋಟಿ ಜನರ ನಿರೀಕ್ಷೆಗಳನ್ನು ಹೊತ್ತು, ಹಳೆಯ ಸೋಲನ್ನು ಮರೆತು ಭಾರತ ವಿಶ್ವ ಚಾಂಪಿಯನ್ ಆಗುತ್ತದೆಯೇ ಎಂದು ಕಾದು ನೋಡಬೇಕಿದೆ.</p>



Source link

Leave a Reply

Your email address will not be published. Required fields are marked *