ಮೋರಿ, ಶೆಡ್​, ಸೆಲೆಬ್ರಿಟಿ, ರಾಜಕೀಯ ; ‘ಬಾಸ್’ ಸಿನಿಮಾದಲ್ಲಿ ದರ್ಶನ್ ಕಥೆ?

ಮೋರಿ, ಶೆಡ್​, ಸೆಲೆಬ್ರಿಟಿ, ರಾಜಕೀಯ ; ‘ಬಾಸ್’ ಸಿನಿಮಾದಲ್ಲಿ ದರ್ಶನ್ ಕಥೆ?


ಮೋರಿ, ಶೆಡ್, ಸೆಲೆಬ್ರಿಟಿ, ರಾಜಕೀಯ ; 'ಬಾಸ್' ಸಿನಿಮಾದಲ್ಲಿ ದರ್ಶನ್ ಕಥೆ?

ಯಾವುದಾದರೂ ಒಂದು ಸೆನ್ಸೇಷನ್ ಘಟನೆ ಎಂದರೆ ಅದನ್ನು ಸಿನಿಮಾ ಮಾಡಲು ಎಲ್ಲರೂ ಮುಂದಾಗುತ್ತಾರೆ. ಸಿನಿಮಾ ಘೋಷಣೆ ಕೂಡ ಮಾಡುತ್ತಾರೆ. ಆದರೆ, ನೈಜ ಘಟನೆ ಆಧಾರಿತ ಸಿನಿಮಾ ಆಗ ಅದಕ್ಕೆ ಎದುರಾಗುವ ಅಡೆತಡೆಗಳು ಹಲವು. ಈಗ ರೇಣುಕಾಸ್ವಾಮಿ ಕೊಲೆ ಪ್ರಕರಣದ ಹಿನ್ನೆಲೆಯಲ್ಲಿ ಸಿನಿಮಾ ಸಿದ್ಧವಾಯಿತೇ ಎಂಬ ಪ್ರಶ್ನೆ ಮೂಡಿದೆ. ಈ ರೀತಿ ಸಿದ್ಧವಾದ ಚಿತ್ರಕ್ಕೆ ‘ಬಾಸ್’ (ಬಾಸ್ ಚಲನಚಿತ್ರ) ಎಂಬ ಶೀರ್ಷಿಕೆ ಇಟ್ಟಿರುವುದು ಸಾಕಷ್ಟು ಚರ್ಚೆ ಹುಟ್ಟುಹಾಕಿದೆ.

‘ನೈಜ ಘಟನೆಯಿಂದ ಸ್ಫೂರ್ತಿ ಪಡೆದು ಸಿನಿಮಾ ಮಾಡಿದೆ’ ಎಂದ ಸಾಲುಗಳ ಮೂಲಕ ‘ಬಾಸ್’ ಟೀಸರ್ ಶುರುವಾಗುತ್ತದೆ. ‘ನನ್ನ ಹೆಂಡ್ತಿ ಪ್ರೆಗ್ನೆಂಟ್, ನನ್ನ ಬಿಟ್ಬಿಡಿ’ ಎಂದು ಪುರಷನೋರ್ವ ಬೇಡಿಕೊಳ್ಳುತ್ತಾನೆ. ಆದರೆ, ಅವನು ಸಾಯುವುದಿಲ್ಲ. ನಂತರ ಮೋರಿ ಪಕ್ಕ ಹೆಣ ಸಿಕ್ಕಿದೆ ಎಂದು ಪೊಲೀಸರು ವಾಕಿ ಟಾಕಿಯಲ್ಲಿ ಮಾತನಾಡೋದು ಕೇಳುತ್ತದೆ. ಈ ಪ್ರಕರಣದಲ್ಲಿ ಸೆಲೆಬ್ರಿಟಿ ಒಬ್ಬನ ಬಂಧನ ಕೂಡ ಆಗುತ್ತದೆ. ಅವನು ಮುಗ್ಧ ಎಂದು ಹೇಳುತ್ತಾನೆ. ಹೀರೋನ ರಾಜಕೀಯ ಎಂಟ್ರಿ ಬಗ್ಗೆಯೂ ಚರ್ಚೆ ನಡೆಯುತ್ತಿದೆ.

ಟೀಸರ್ ನೋಡಿದ ಪ್ರತಿಯೊಬ್ಬರಿಗೂ ರೇಣುಕಾ ಸ್ವಾಮಿ ಕೊಲೆ ಪ್ರಕರಣ ನೆನಪಿಗೆ ಬರುತ್ತದೆ. ಈ ಪ್ರಕರಣವನ್ನೇ ಆಧರಿಸಿ ಸಿನಿಮಾ ಮಾಡಲಾಯಿತೇ ಎಂಬ ಪ್ರಶ್ನೆ ಮೂಡಿದೆ. ‘ಸಮಾಜದಲ್ಲಿ ಅನೇಕ ಘಟನೆಗಳ ಪ್ರೇರಣೆ ಆಗಿ ನಡೆದ ಕಾಲ್ಪನಿಕವಾಗಿ ಈ ಸಿನಿಮಾ ಮಾಡಿದ್ದೇನೆ. 2024 ಹಾಗೂ 2025ರ ನಡುವೆ ನಡೆದ ಘಟನೆಗಳನ್ನು ಸಿನಿಮಾದಲ್ಲಿ ಸೇರಿಸಲಾಗಿದೆ. ಒಬ್ಬ ಸೆಲೆಬ್ರಿಟಿ ಕೊಲೆ ಮಾಡಿದ ಮೇಲೆ ರಾಜಕೀಯಕ್ಕೆ ಹೇಗೆ ಬಲಿ ಆಗ್ತಾರೆ ಅನ್ನೋದೇ ಕಥೆ’ ಎಂದು ನಿರ್ದೇಶಕ ಸಿನಿಮಾದ ನಿರ್ದೇಶಕ ಲವ ಹೇಳಿದ್ದಾರೆ. ತನುಷ್ ಶಿವಣ್ಣ ಅವರು ಚಿತ್ರದಲ್ಲಿ ಸೆಲೆಬ್ರಿಟಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ತನಿಖಾಧಿಕಾರಿಯಿಂದ ನಡೆದಿದೆ ದೊಡ್ಡ ಎಡವಟ್ಟು?

ಸದ್ಯ ರೇಣುಕಾಸ್ವಾಮಿ ಕೋರ್ಟ್ ಪ್ರಕರಣದಲ್ಲಿ. ಹೀಗಿರುವಾಗಲೇ ಅದೇ ಪ್ರಕರಣ ಹೋಲುವಂತೆ ಸಿನಿಮಾ ಮಾಡೋದು ಚರ್ಚೆಗೆ ಗ್ರಾಸವಾಗಿದೆ. ಈ ಚಿತ್ರಕ್ಕೆ ಅಡ್ಡಿಆತಂಕಗಳು ಕೂಡ ಎದುರಾಗುವ ಸಾಧ್ಯತೆ ದಟ್ಟವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *