Headlines

‘ಜೂನಿಯರ್‌’ ಸಿನಿಮಾ ಈವೆಂಟ್‌ನಲ್ಲಿ ಜೆನಿಲಿಯಾ ಬಗ್ಗೆ ರಾಜಮೌಳಿ ಏನಂದ್ರು..? | Rajamouli Praises Genelia And Sreeleela At Junior Movie Pre Release Event

‘ಜೂನಿಯರ್‌’ ಸಿನಿಮಾ ಈವೆಂಟ್‌ನಲ್ಲಿ ಜೆನಿಲಿಯಾ ಬಗ್ಗೆ ರಾಜಮೌಳಿ ಏನಂದ್ರು..? | Rajamouli Praises Genelia And Sreeleela At Junior Movie Pre Release Event



ಜೂನಿಯರ್ ಸಿನಿಮಾ ಪ್ರೀ ರಿಲೀಸ್ ಕಾರ್ಯಕ್ರಮಕ್ಕೆ ರಾಜಮೌಳಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಈ ಸಿನಿಮಾದ ಮೂಲಕ గాಲಿ ಜನಾರ್ದನ ರೆಡ್ಡಿ ಪುತ್ರ ಕಿರೀಟಿ ರೆಡ್ಡಿ ನಾಯಕನಾಗಿ ಪರಿಚಯವಾಗುತ್ತಿದ್ದಾರೆ. ಶ್ರೀಲೀಲಾ ಈ ಚಿತ್ರದ ನಾಯಕಿ.

ಜೂನಿಯರ್ ಸಿನಿಮಾ ಪ್ರೀ ರಿಲೀಸ್ ಕಾರ್ಯಕ್ರಮ

 

ಜೂನಿಯರ್ ಸಿನಿಮಾ ಪ್ರೀ ರಿಲೀಸ್ ಕಾರ್ಯಕ್ರಮಕ್ಕೆ ರಾಜಮೌಳಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಈ ಸಿನಿಮಾದ ಮೂಲಕ గాಲಿ ಜನಾರ್ದನ ರೆಡ್ಡಿ ಪುತ್ರ ಕಿರೀಟಿ ರೆಡ್ಡಿ ನಾಯಕನಾಗಿ ಪರಿಚಯವಾಗುತ್ತಿದ್ದಾರೆ. ಶ್ರೀಲೀಲಾ ಈ ಚಿತ್ರದ ನಾಯಕಿ. ಹಿರಿಯ ನಟಿ ಜೆನಿಲಿಯಾ ಈ ಚಿತ್ರದ ಮೂಲಕ ಟಾಲಿವುಡ್‌ಗೆ ಮರಳುತ್ತಿದ್ದಾರೆ. ರಾಧಾಕೃಷ್ಣ ರೆಡ್ಡಿ ಈ ಚಿತ್ರದ ನಿರ್ದೇಶಕರು. ದೇವಿಶ್ರೀ ಪ್ರಸಾದ್ ಸಂಗೀತ ನೀಡಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ‘ವೈರಲ್ ವಯ್ಯಾರಿ’ ಹಾಡು ಸಖತ್ ಸದ್ದು ಮಾಡ್ತಿದೆ. 

ಜೆನಿಲಿಯಾ ಅಂದದ ಬಗ್ಗೆ ರಾಜಮೌಳಿ ಮಾತು

ಕಾರ್ಯಕ್ರಮದಲ್ಲಿ ರಾಜಮೌಳಿ, ಜೂನಿಯರ್ ಚಿತ್ರತಂಡವನ್ನು ಹೊಗಳಿದರು. ಜೆನಿಲಿಯಾ ರಾಜಮೌಳಿ ನಿರ್ದೇಶನದ ‘ಸೈ’ ಚಿತ್ರದಲ್ಲಿ ನಟಿಸಿದ್ದು ಎಲ್ಲರಿಗೂ ಗೊತ್ತು. ಜೆನಿಲಿಯಾರನ್ನು ಪ್ರೀತಿಯಿಂದ ‘ಜೆನ್ನಿ’ ಎಂದು ಕರೆದ ರಾಜಮೌಳಿ, “ಸಮಯ ಕಳೆದರೂ ನೀವು ಹಾಗೇ ಇದ್ದದೀರಿ..  ನಿಮ್ಮ ಅಂದಚೆಂದದಲ್ಲಿ ಬದಲಾವಣೆ ಆಗಿಲ್ಲ, ಯಾವಾಗಲೂ ಹೀಗೆ ಇರುತ್ತದೆ” ಎಂದು ಹೇಳಿದರು.

ನಿರ್ಮಾಪಕ ಸಾಯಿ ಕೊರ್ರಪಾಟಿ ಈ ಚಿತ್ರದ ಬಗ್ಗೆ ಹೇಳಿದಾಗ, ಚಿಕ್ಕ ಸಿನಿಮಾ ಅಂದುಕೊಂಡಿದ್ದೆ. ಆದರೆ ಶ್ರೀಲೀಲಾ, ಜೆನಿಲಿಯಾ, ದೇವಿಶ್ರೀ ಪ್ರಸಾದ್, ಸೆಂಥಿಲ್ ಕುಮಾರ್ ಹೆಸರು ಕೇಳಿದಾಗ ಇದು ಚಿಕ್ಕ ಸಿನಿಮಾ ಅಲ್ಲ ಅನಿಸುತ್ತೆ. ಶ್ರೀಲೀಲಾ ಈಗಾಗಲೇ ಸ್ಟಾರ್ ನಟಿ.

ಕಿರೀಟಿ ಬಗ್ಗೆ ಸೆಂಥಿಲ್ ನನಗೆ ಹೇಳಿದ್ದಾರೆ. ಸೆಂಥಿಲ್‌ರಿಂದ ಪ್ರಶಂಸೆ ಪಡೆದಿರುವುದೇ ದೊಡ್ಡ ಸಾಧನೆ ಎಂದು ಕಿರೀಟಿಯನ್ನು ರಾಜಮೌಳಿ ಹೊಗಳಿದರು. ಈ ಚಿತ್ರ ಗೆಲ್ಲಲಿ ಎಂದು ರಾಜಮೌಳಿ ಹಾರೈಸಿದರು.



Source link

Leave a Reply

Your email address will not be published. Required fields are marked *