
ನಟ ಧ್ರುವ ಸರ್ಜಾ ಅವರು ‘ಕೇಡಿ’ ಸಿನಿಮಾದ (ಕೆಡಿ ಚಲನಚಿತ್ರ) ಪ್ರಚಾರ ಕಾರ್ಯದಲ್ಲಿ ಬ್ಯೂಸಿ ಆಗಿದ್ದಾರೆ. ಈ ಸಿನಿಮಾದ ಹಾಡಿನ ಬಿಡುಗಡೆ ಸಮಾರಂಭ ಅದ್ದೂರಿಯಾಗಿ ಹೊಸದಾಗಿ. ಅದರಲ್ಲಿ ಭಾಗಿಯಾದ ಧ್ರುವ ಸರ್ಜಾ (ಧ್ರುವ ಸರ್ಜಾ) ಅವರಿಗೆ ಹಲವು ಪ್ರಶ್ನೆಗಳು ಎದುರಾದವು. ಪ್ರತಿ ಭಾನುವಾರ ಅಭಿಮಾನಿಗಳನ್ನು ಭೇಟಿ ಮಾಡುವುದು ಏಕೆ ಎಂದು ಅವರು ವಿವರಿಸಿದರು. ‘ಈ ಗೆಜೆಟ್ಸ್ ಯುಗದಲ್ಲಿ ಪರಸ್ಪರ ಭೇಟಿ ಆಗುವುದೇ ಕಡಿಮೆಯಾಗಿದೆ. ನನ್ನನ್ನು ಇಷ್ಟಪಡುವ ಜನರನ್ನು ನಾನು ಪ್ರತಿ ಭಾನುವಾರ ಭೇಟಿ ಆಗಲು ಇಷ್ಟಪಡುತ್ತೇನೆ. ಅವರು ತಮ್ಮ ಕುಟುಂಬವನ್ನು ಬಿಟ್ಟು ನಮಗೆ ಟೈಮ್ ಕೊಡುತ್ತಿದ್ದಾರೆ ಎಂದರೆ ಬಹಳ ಖುಷಿಯಾಗುತ್ತದೆ. ಇನ್ನೊಂದು ರೀತಿ ಯೋಚನೆ ಮಾಡುತ್ತೇನೆ, ಒಂದು ಭಾನುವಾರ ಎಲ್ಲರೂ ಬರೋದು ನಿಲ್ಲಿಸಿಬಿಟ್ಟರೆ ಹೆಂಗೆ? ದಿನ ಯಾವತ್ತೂ ಬರಬಾರದು ಅಂತ ಪ್ರತಿ ದಿನ ಕಷ್ಟಪಡುತ್ತಿದ್ದೇನೆ’ ಎಂದು ಧ್ರುವ ಸರ್ಜಾ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.