
<p>ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ನವನೀತ ಗೋ ಶಾಲೆಯಲ್ಲಿ, 8 ದಿನದ ಕರುವನ್ನು ತೊಟ್ಟಿಲಲ್ಲಿ ಮಲಗಿಸಿ, ಜೋಗುಳ ಹಾಡಿ ‘ಭೀಮಾ’ ಎಂದು ವಿಶಿಷ್ಟವಾಗಿ ನಾಮಕರಣ ಮಾಡಲಾಯಿತು. ಇದೇ ವೇಳೆ ಗೋಪಾಲಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.</p><img><p>ಮಕ್ಕಳ ನಾಮಕರಣ ಅದ್ದೂರಿಯಾಗಿ ಮಾಡೋದು ಕಾಮನ್. ಆದ್ರೆ ಇಲ್ಲಿ ಕರುವನ್ನು ತೊಟ್ಟಿಲಲ್ಲಿ ಮಲಗಿಸಿ, ಜೋಗುಳ ಹಾಡಿ ನಾಮಕರಣ ಮಾಡಲಾಗಿದೆ. ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನ ನವನೀತ ಗೋ ಶಾಲೆಯಲ್ಲಿ ಈ ಅಪರೂಪದ ಘಟನೆ ನಡೆದಿದೆ.</p><p><strong>ಇದನ್ನೂ ಓದಿ: </strong><strong>ಆಹಾರ ಅರಸಿ ಬಂದ ಕರಡಿ ವಿದ್ಯುತ್ ತಂತಿ ಸ್ಪರ್ಶಿಸಿ ದಾರುಣ ಸಾವು</strong></p><img><p>ತೊಟ್ಟಿಲಿಗೆ ಬಲೂನ್ ಕಟ್ಟಿ ಹೂಗಳಿಂದ ಅಲಂಕರಿಸಿ ನಂತರ ಅದರಲ್ಲಿ ಕರುವನ್ನು ಮಲಗಿಸಿ ಅದ್ದೂರಿಯಾಗಿ ನಾಮಕರಣ ಶಾಸ್ತ್ರ ಮಾಡಲಾಯ್ತು. ಮಹಿಳೆಯರು 8 ದಿನದ ಕರುವಿಗೆ ಆರತಿ ಬೆಳಗಿ ಭೀಮಾ ಎಂದು ನಾಮಕರಣ ಮಾಡಿದ್ದಾರೆ.</p><p><strong>ಇದನ್ನೂ ಓದಿ: </strong><strong>ವಿವಿ ಪ್ಯಾಟ್ ಬಗ್ಗೆ ದೂರುವ ಕಾಂಗ್ರೆಸ್ನಿಂದಲೇ ಸಹಕಾರಿ ಸಂಘದ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಅಕ್ರಮ</strong></p><img><p>8 ದಿನದ ಹಿಂದೆ ಸೇಡಂ ತಾಲೂಕಿನ ನವನೀತ ಗೋ ಶಾಲೆಯಲ್ಲಿ ಹಸುವೊಂದು ಮುದ್ದಾದ ಗಂಡು ಕರುವಿಗೆ ಜನ್ಮ ನೀಡಿತ್ತು. ಈ ಕರುವಿಗೆ ಇಂದು ನಾಮಕರಣ ಮಾಡಲಾಯ್ತು. ಇಲ್ಲಿ ಇದೇನು ಹೊಸ ಆಚರಣೆ ಅಲ್ಲ, ಪ್ರತಿ ಬಾರಿ ಇಲ್ಲಿ ಹಸುವೊಂದು ಕರು ಹಾಕಿದಾಗಲೆಲ್ಲಾ ಇಲ್ಲಿ ಕರುಗಳಿಗೆ ನಾಮಕರಣ ಮಾಡಲಾಗುತ್ತದೆ.</p><p><strong>ಇದನ್ನೂ ಓದಿ: </strong><strong>ದುಬೈ ವಿಮಾನ ನಿಲ್ದಾಣದ ಸಮೀಪ ಇರಾನ್ ಮತ್ತೆ ಡ್ರೋನ್ ದಾಳಿ, ಭಾರಿ ಬೆಂಕಿ: ವಿಮಾನಗಳ ಹಾರಾಟ ಸ್ಥಗಿತ</strong></p><img><p>ಇದೇ ಸಮಯದಲ್ಲಿ ಗೋ ಸೇವೆ ಮಾಡುವ ಕಲಬುರಗಿ ಜಿಲ್ಲೆಯ 12 ಜನ ಗೋವುಗಳ ಸೇವಕರನ್ನು ಗುರುತಿಸಿ ಅವರಿಗೆ ಗೋಪಾಲರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸೇಡಂನ ನವನೀತ ಗೋಶಾಲಾ ಆಡಳಿತ ಮಂಡಳಿಯವರ ಈ ಕಾರ್ಯಕ್ಕೆ ಈಗ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.</p><p><strong>ಇದನ್ನೂ ಓದಿ:</strong><strong> ಮಗನ ಮಾನಗೇಡಿ ಕೆಲಸಕ್ಕೆ ಇಡೀ ಕುಟುಂಬಕ್ಕೆ ಬಹಿಷ್ಕಾರ: ಮನನೊಂದು ನದಿಗೆ ಹಾರಿದ ತಾಯಿ</strong></p>
Source link
ಕಲಬುರಗಿ: 8 ದಿನದ ಕರುವನ್ನು ತೊಟ್ಟಿಲಲ್ಲಿ ಮಲಗಿಸಿ ಅದ್ದೂರಿ ನಾಮಕರಣ: ಗೋ ಸೇವಕರಿಗೆ ಸನ್ಮಾನ