
<p>Bhagyalakshmi Serial Episode: ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ತಾಂಡವ್ ಬದಲಾಗಿದ್ದಾನೆ ಎಂದು ಮಗಳು ತನ್ವಿ ನಂಬಿದ್ದಾಳೆ. ಆದರೆ ತಾಂಡವ್ ಬದಲಾಗಿಲ್ಲ, ಕಲರ್ಸ್ ಕನ್ನಡ ವಾಹಿನಿಯು ಹೊಸದಾಗಿ ಪ್ರೋಮೋ ರಿಲೀಸ್ ಮಾಡಿದ್ದು, ತಾಂಡವ್ ಬದಲಾಗಿಲ್ಲ ಎನ್ನೋದು ಸಾಬೀತಾಗಿದೆ.</p><p> </p><img><p>ಹೌದು, ತಾಂಡವ್ ಬದಲಾಗಿಲ್ಲ, ನನಗೆ ಭಾಗ್ಯ ಬೇಕು, ಶ್ರೇಷ್ಠ ಸರಿ ಇಲ್ಲ, ನಾನು ಮಾಡಿದ್ದು ತಪ್ಪಾಗಿದೆ ಎಂದು ಅವನು ಹೇಳಿದ್ದನು. ಆದರೆ ಅಸಲಿ ವಿಷಯ ಬೇರೆ ಇದೆ. ಅವನು ಬದಲಾಗಿಲ್ಲ. ಅನೇಕರು ತಾಂಡವ್ ಬದಲಾಗಿಲ್ಲ ಎಂದು ವಾದ ಮಾಡಿದ್ದರು.</p><img><p>ತಾಂಡವ್ಗೆ ಈಗಾಗಲೇ ಸಾವಿರ ಬಾರಿ ಕ್ಷಮೆ ಕೇಳಿದ್ದಾನೆ. ಆದರೆ ಅವಳು ಅದನ್ನು ಒಪ್ಪಿಕೊಂಡಿಲ್ಲ. ತಾಂಡವ್ ಬದಲಾಗಿಲ್ಲ, ಅವನು ಹಾಗೆ ಇದ್ದಾನೆ ಎಂದು ಭಾಗ್ಯಗೆ ಬಲವಾದ ನಂಬಿಕೆ ಇದೆ. ಮಗಳಿಗೋಸ್ಕರ ಅವಳು, ತಾಂಡವ್ನನ್ನು ಮನೆಯೊಳಗಡೆ ಕರೆದಿದ್ದಳು. ತಾಂಡವ್ ಈಗ ಭಾಗ್ಯಗೆ ಎಮ್ಮೆ ಎಂದು ಕರೆದಿದ್ದಾನೆ. ಸೂರ್ಯವಂಶಿ ಮನೆಗೆ ಅವಳನ್ನು ಕರೆಸಿಕೊಂಡು ನರಕ ತೋರಿಸುವ ಪ್ಲ್ಯಾನ್ ಮಾಡಿದ್ದಾನೆ.</p><img><ul> <li>ಆಕಾಶ ಭೂಮಿ ಒಂದಾದರೂ , ತಾಂಡವ್ ಬದಲಾಗುವುದಿಲ್ಲ</li> <li>ತಾಂಡವ್ ಬದಲಾಗೋದು ಒಂದೇ ನಾಯಿ ಬಾಲ ನೆಟ್ಟಗಾಗೋದು ಒಂದೇ</li> <li>ಇವನು ವಿಲ್ಲನ್, ಯಾವತ್ತೂ ಬದಲಾಗಲ್ಲ.. ಆದಿ ಭಾಗ್ಯವನ್ನು ಒಂದು ಮಾಡಿ</li> <li>ಪಾಪ.. ತನ್ವಿ, ಎಷ್ಟು ಸಪೋರ್ಟ್ ಮಾಡಿದ್ಲು ಅಪ್ಪನಿಗೆ…</li> <li>ತಾಂಡವ್ ಬದಲಾಗಿದ್ದಾನೆ, ಭಾಗ್ಯ ಅವನನ್ನು ಒಪ್ಕೋಬೇಕು ಅಂತ ಹೇಳ್ತಿದ್ದೋರು ಎಲ್ಲ ಎಲ್ಲಿ ಹೋದ್ರು…</li> <li>ಇವನು ಬದಲಾಗಲ್ಲ ಅಂತ ಗೊತ್ತಿತ್ತು</li> <li>ನೀನು ಏನು ಅಂತ ನಮಗೆ ಗೊತ್ತು, ಇದು ಹಿಂಗೇ ಆಗುತ್ತೆ ಅಂತ..ಮಗಳ ಮೇಲೆ ಆಣೆ ಮಾಡಿ… ತಂದೆ ಮಗಳ ಪ್ರೀತಿ ಅವಮಾನ… ಮಾಡ್ಬೇಟ್ರಿ…</li></ul><img><ul> <li>ಈಗ ತನ್ವಿಗೆ ಯಾವುದರಿಂದ ಹೊಡಿಬೇಕು ನೀವೇ ಹೇಳಿ, ಪ್ರೇಕ್ಷಕರೇ</li> <li>ಆದಿ-ಭಾಗ್ಯಳನ್ನು ಮದುವೆ ಮಾಡಿಸೋಕೆ ತಾಂಡವನ ಬಲಿಕ ಬಕ್ರ ಮಾಡ್ತವ್ರೆ ಡೈರೆಕ್ಟರ್</li> <li>ನಾನು ಅವತ್ತೇ ಹೇಳಿದೆ ಇವ್ನು ಮನೆಹಾಳ, ಬದಲಾಗಿಲ್ಲ ಅಂತ….ಇವನಿಗೆ ಸಪೋರ್ಟ್ ಮಾಡಿದ ಮಹಾನುಭವರು ಒಬ್ರು ಕಾಣ್ತಾ ಇಲ್ಲ, ದೊಡ್ಡದಾಗಿ ಗಂಡ ಹೆಂಡತಿ ಬಾಂಧವ್ಯದ ಬಗ್ಗೆ ಮಾತಾಡಿದವರು</li> <li>ಈ ಧಾರಾವಾಹಿ ಮುಗಿಯೋ ಮಾತೇ ಇಲ್ಲ.</li> <li>ಒಬ್ಬ ಮನುಷ್ಯನನ್ನು ನಂಬೋಕೆ ಆಗೋದಿಲ್ಲ, ಮತ್ತೆ ತಂದೆ ಮಗಳ ಪ್ರೀತಿಯನ್ನು ದುರುಪಯೋಗ ಮಾಡಿಕೊಂಡು ಆ ಪ್ರೀತಿಗೆ ಬೆಲೆ ಇಲ್ಲ ಅನ್ನೋ ತರ ಮಾಡ್ಬಿಟ್ರಿ.</li></ul><img><p>ನಿರ್ದೇಶಕರೇ ಹೊಸತನ ಇದ್ರೆ, ಒಳ್ಳೇದು ಅದೇ ರಾಗ ಅದೇ ಹಾಡು ಅನ್ನೋ ಹಾಗೆ ಆಗಬಾರದು. ಪ್ರತಿಯೊಬ್ಬ ವೀಕ್ಷಕನು ನಿಮ್ಮ ಕಥೆ ಮತ್ತು ಸಂಭಾಷಣೆಯನ್ನು ಮೊದಲೇ ಊಹೆ ಮಾಡಿದ್ದ ಎನ್ನುವದಕ್ಕೆ ಕಾಮೆಂಟ್ ನೋಡಿದ್ರೆ ನಿಮಗೆ ಅರ್ಥ ಆಗಬಹುದು ಹೊಸತನ ಹುಡ್ಕಿ ಏನಾದ್ರೂ..</p>
Source link
Bhagyalakshmi Serial ಮೆಗಾ ರಣ ರೋಚಕ ಟ್ವಿಸ್ಟ್; ಭಾಗ್ಯಗೆ ನರಕ ತೋರಿಸ್ತಾನೆ ತಾಂಡವ್! ಮುಂದೇನು ಕಥೆ?