Headlines

ಎಸ್.ಪಿ.ಬಾಲಸುಬ್ರಹ್ಮಣ್ಯಂ ಧ್ವನಿಗೆ ಮಾಟ-ಮಂತ್ರ ಮಾಡಿಸಿದ್ರಾ? ಆ ಒಂದು ಹಾಡು ನರಕ ತೋರಿಸಿತ್ತಂತೆ!

ಎಸ್.ಪಿ.ಬಾಲಸುಬ್ರಹ್ಮಣ್ಯಂ ಧ್ವನಿಗೆ ಮಾಟ-ಮಂತ್ರ ಮಾಡಿಸಿದ್ರಾ? ಆ ಒಂದು ಹಾಡು ನರಕ ತೋರಿಸಿತ್ತಂತೆ!



ಎಸ್.ಪಿ.ಬಾಲಸುಬ್ರಹ್ಮಣ್ಯಂ ಧ್ವನಿಗೆ ಮಾಟ-ಮಂತ್ರ ಮಾಡಿಸಿದ್ರಾ? ಆ ಒಂದು ಹಾಡು ನರಕ ತೋರಿಸಿತ್ತಂತೆ!
<p>ದಿಗ್ಗಜ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಧ್ವನಿಗೆ ಯಾರಾದರೂ ಮಾಟ ಮಾಡಿಸಿದ್ದರೇ? ಅವರ ಧ್ವನಿಗೆ ಬಂದಿದ್ದ ಸಮಸ್ಯೆ ಏನು? ಮನೆಯವರು ಯಾಕೆ ಹಾಗೆ ಅನುಮಾನಪಟ್ಟರು? ಎಸ್.ಪಿ.ಬಾಲಸುಬ್ರಹ್ಮಣ್ಯಂಗೆ ನರಕ ತೋರಿಸಿದ ಆ ಹಾಡು ಯಾವುದು?</p><img><p>ಎಸ್.ಪಿ.ಬಾಲಸುಬ್ರಹ್ಮಣ್ಯಂ ಭಾರತೀಯ ಚಿತ್ರರಂಗದ ಧ್ರುವತಾರೆ. ಸುಮಾರು 10 ಭಾಷೆಗಳಲ್ಲಿ 45,000ಕ್ಕೂ ಹೆಚ್ಚು ಗೀತೆಗಳನ್ನು ಹಾಡಿ ಅವರು ದಾಖಲೆ ಬರೆದಿದ್ದಾರೆ. ಕನ್ನಡ, ತಮಿಳು, ತೆಲುಗು ಮಾತ್ರವಲ್ಲದೆ ಹಿಂದಿ, ಮಲಯಾಳಂನಲ್ಲೂ ಸಾವಿರಾರು ಹಾಡುಗಳಿಗೆ ಧ್ವನಿಯಾಗಿದ್ದಾರೆ.</p><img><p>ಎಸ್.ಪಿ.ಬಾಲಸುಬ್ರಹ್ಮಣ್ಯಂ ಕೇವಲ ಗಾಯಕರಲ್ಲ, ಅವರು ಸಂಗೀತ ನಿರ್ದೇಶಕ, ನಟ, ನಿರ್ಮಾಪಕ, ನಿರೂಪಕರೂ ಆಗಿದ್ದರು. 2020ರಲ್ಲಿ ಕೊರೊನಾ ಮಹಾಮಾರಿಗೆ ಬಲಿಯಾದರು. ಆದರೆ ಅವರ ಹಾಡುಗಳು ಇಂದಿಗೂ ಪ್ರತಿ ಮನೆಯಲ್ಲೂ ಜೀವಂತವಾಗಿವೆ.</p><img><p>’ಗೀತಾಂಜಲಿ’ ಚಿತ್ರದ ಸಮಯದಲ್ಲಿ ಎಸ್.ಪಿ.ಬಾಲಸುಬ್ರಹ್ಮಣ್ಯಂ ಧ್ವನಿಯಲ್ಲಿ ಸಮಸ್ಯೆ ಕಾಣಿಸಿಕೊಂಡಿತ್ತು. ತಮಿಳು ಮತ್ತು ಮಲಯಾಳಂ ಡಬ್ಬಿಂಗ್ ವೇಳೆ ‘ಓ ಪಾಪಾ ಲಾಲಿ’ ಹಾಡನ್ನು ಹಾಡುವಾಗ ಧ್ವನಿ ಒಡೆದುಹೋಗುತ್ತಿತ್ತು. ಈ ಒಂದು ಹಾಡು ತನಗೆ ನರಕ ತೋರಿಸಿತ್ತು ಎಂದು ಎಸ್.ಪಿ.ಬಾಲಸುಬ್ರಹ್ಮಣ್ಯಂ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.</p><img><p>ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಗಂಟಲಲ್ಲಿ ಒಂದು ಸಣ್ಣ ಗಡ್ಡೆ (nodule) ಬೆಳೆದಿತ್ತು. ಇದರಿಂದಾಗಿ ಹಾಡುವಾಗ ಧ್ವನಿ ಕೆಲವೊಮ್ಮೆ ಒಡೆಯುತ್ತಿತ್ತು. ಇನ್ನು ಹಾಡಲು ಸಾಧ್ಯವೇ ಇಲ್ಲವೇನೋ ಎಂಬ ಭಯ ಅವರನ್ನು ಕಾಡಿತ್ತು. ಕೊನೆಗೆ ಧೈರ್ಯ ಮಾಡಿ ಗಂಟಲಿನ ಆಪರೇಷನ್ ಮಾಡಿಸಿಕೊಳ್ಳಲು ನಿರ್ಧರಿಸಿದರು.</p><img><p>ಆಪರೇಷನ್ ಬಳಿಕ ಹಾಡಲು ಸಾಧ್ಯವಾಗುತ್ತದೋ ಇಲ್ಲವೋ ಎಂದು ವೈದ್ಯರು ಗ್ಯಾರಂಟಿ ನೀಡಿರಲಿಲ್ಲ. ಇದರಿಂದ ಆತಂಕಗೊಂಡ ಕುಟುಂಬದವರು, ಯಾರೋ ಮಾಟ-ಮಂತ್ರ ಮಾಡಿಸಿದ್ದಾರೆಂದು ಅನುಮಾನಪಟ್ಟರು. ಪೂಜೆ, ಹೋಮಗಳನ್ನು ಮಾಡಿಸಿದರು. ಆದರೆ ಎಸ್.ಪಿ.ಬಾಲಸುಬ್ರಹ್ಮಣ್ಯಂ ಇವನ್ನು ನಂಬದೆ ಆಪರೇಷನ್‌ಗೆ ಮುಂದಾದರು.</p><img><p>ಎಸ್.ಪಿ.ಬಾಲಸುಬ್ರಹ್ಮಣ್ಯಂ ಆಪರೇಷನ್‌ಗೆ ಸಿದ್ಧರಾದಾಗ, ಭಾರತರತ್ನ ಲತಾ ಮಂಗೇಶ್ಕರ್ ಫೋನ್ ಮಾಡಿ, ‘ಸರ್ಜರಿ ಮಾಡಿಸಬೇಡಿ, ಇರುವ ಧ್ವನಿಯನ್ನೂ ಕಳೆದುಕೊಳ್ಳಬೇಡಿ’ ಎಂದು ಸಲಹೆ ನೀಡಿದ್ದರು. ಆದರೂ ಎಸ್.ಪಿ.ಬಾಲಸುಬ್ರಹ್ಮಣ್ಯಂ ಧೈರ್ಯ ಮಾಡಿ ಆಪರೇಷನ್ ಮಾಡಿಸಿಕೊಂಡು ತಮ್ಮ ಧ್ವನಿಯನ್ನು ಮರಳಿ ಪಡೆದರು.</p>



Source link

Leave a Reply

Your email address will not be published. Required fields are marked *