Niharika Konidela ಡಿವೋರ್ಸ್ ಬಗ್ಗೆ ಮೊದಲು ಹೇಳಿದ್ದು ಯಾರಿಗೆ? ಆ ಮಾತು ಕೇಳಿ ಅವರ ರಿಯಾಕ್ಷನ್ ಹೇಗಿತ್ತು? | Niharika Konidela Opens Up About Her Divorce And Family Support Gvd

Niharika Konidela ಡಿವೋರ್ಸ್ ಬಗ್ಗೆ ಮೊದಲು ಹೇಳಿದ್ದು ಯಾರಿಗೆ? ಆ ಮಾತು ಕೇಳಿ ಅವರ ರಿಯಾಕ್ಷನ್ ಹೇಗಿತ್ತು? | Niharika Konidela Opens Up About Her Divorce And Family Support Gvd


ನಟಿ ನಿಹಾರಿಕಾ ಕೊನಿಡೇಲಾ ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ತಮ್ಮ ವಿಚ್ಛೇದನದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ತಾವು ಡಿವೋರ್ಸ್ ತೆಗೆದುಕೊಳ್ಳುವ ನಿರ್ಧಾರ ಮಾಡಿದಾಗ ಮೊದಲು ಯಾರಿಗೆ ಈ ವಿಷಯ ತಿಳಿಸಿದ್ದರು ಎಂಬುದನ್ನು ಇಲ್ಲಿ ಓದಿ.

ಇತ್ತೀಚೆಗೆ ಮೆಗಾ ಕುಟುಂಬದ ಹೆಣ್ಣುಮಕ್ಕಳು ನಿರ್ಮಾಪಕರಾಗಿ ಮಿಂಚುತ್ತಿದ್ದಾರೆ. ಚಿರಂಜೀವಿ ಪುತ್ರಿ ಸುಶ್ಮಿತಾ ಕೊನಿಡೇಲಾ ಹಾಗೂ ನಾಗಬಾಬು ಪುತ್ರಿ ನಿಹಾರಿಕಾ ನಿರ್ಮಾಪಕಿಯಾಗಿ ಯಶಸ್ಸು ಕಾಣುತ್ತಿದ್ದಾರೆ. ನಿಹಾರಿಕಾ ‘ಪಿಂಕ್ ಎಲಿಫೆಂಟ್ ಪಿಕ್ಚರ್ಸ್’ ಬ್ಯಾನರ್ ಸ್ಥಾಪಿಸಿ, ಕಥಾಹಂದರವುಳ್ಳ ಸಣ್ಣ ಬಜೆಟ್ ಚಿತ್ರಗಳನ್ನು ನಿರ್ಮಿಸುತ್ತಿದ್ದಾರೆ. ಈಗಾಗಲೇ ‘ಕಮಿಟಿ ಕುರ್ರೋಳ್ಳು’ ಎಂಬ ಸಿನಿಮಾ ನಿರ್ಮಿಸಿದ್ದು, ಅದು ಸೂಪರ್ ಹಿಟ್ ಆಗುವುದರ ಜೊತೆಗೆ ಹಲವು ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ.

ನಿಹಾರಿಕಾ ನಿರ್ಮಿಸಿರುವ ಹೊಸ ಹಾರರ್-ಕಾಮಿಡಿ ಚಿತ್ರ ‘ರಾಕಾಸ’ ಏಪ್ರಿಲ್ 3 ರಂದು ಬಿಡುಗಡೆಯಾಗುತ್ತಿದೆ. ಈ ಚಿತ್ರದಲ್ಲಿ ಸಂಗೀತ ಶೋಭನ್ ನಾಯಕನಾಗಿ ನಟಿಸಿದ್ದಾರೆ. ಸಿನಿಮಾ ಬಿಡುಗಡೆ ಹತ್ತಿರವಾಗುತ್ತಿದ್ದಂತೆ, ನಿಹಾರಿಕಾ ಪ್ರಚಾರ ಕಾರ್ಯಗಳಲ್ಲಿ ಭಾಗವಹಿಸುತ್ತಿದ್ದಾರೆ. ಈ ಸಂದರ್ಶನಗಳಲ್ಲಿ ಅವರು ತಮ್ಮ ವೈಯಕ್ತಿಕ ಜೀವನದ ಬಗ್ಗೆಯೂ ಮಾತನಾಡುತ್ತಿದ್ದಾರೆ.

ನಿಹಾರಿಕಾ ತಮ್ಮ ವಿಚ್ಛೇದನದ ಬಗ್ಗೆಯೂ ಮಾತನಾಡಿದ್ದಾರೆ. 2020ರಲ್ಲಿ ಚೈತನ್ಯ ಜೊನ್ನಲಗಡ್ಡ ಅವರೊಂದಿಗೆ ನಿಹಾರಿಕಾ ವಿವಾಹವಾಗಿತ್ತು. ಆದರೆ, ಕೆಲವೇ ದಿನಗಳಲ್ಲಿ ಇಬ್ಬರ ನಡುವೆ ಭಿನ್ನಾಭಿಪ್ರಾಯಗಳು ಶುರುವಾದವು. ಕೊನೆಗೆ ಇಬ್ಬರೂ ಬೇರೆಯಾದರು. ವಿಚ್ಛೇದನ ಪಡೆಯುವ ನಿರ್ಧಾರವನ್ನು ನಿಹಾರಿಕಾ ಮೊದಲು ತಮ್ಮ ತಂದೆ ನಾಗಬಾಬು ಅವರೊಂದಿಗೆ ಹಂಚಿಕೊಂಡಿದ್ದರಂತೆ.

ಈ ಸಂಬಂಧದಿಂದ ಹೊರಬರಬೇಕು ಎಂದುಕೊಂಡಾಗ, ನಾನು ಮೊದಲು ಅಪ್ಪನ ಬಳಿ ಹೇಳಿಕೊಂಡೆ. ನಾನು ಖುಷಿಯಾಗಿಲ್ಲ ಎಂಬುದು ಅವರಿಗೂ ತಿಳಿದಿತ್ತು. ನನ್ನ ಮಾತುಗಳನ್ನೆಲ್ಲಾ ಕೇಳಿ ಅವರು ಮೌನವಾದರು. ‘ನೀನು ಸಂತೋಷವಾಗಿಲ್ಲದಿದ್ದರೆ, ಆ ಸಂಬಂಧದಲ್ಲಿ ಬಲವಂತವಾಗಿ ಮುಂದುವರಿಯುವ ಅಗತ್ಯವಿಲ್ಲ’ ಎಂದು ಅಪ್ಪ ಸಲಹೆ ನೀಡಿದರು. ನಮ್ಮ ನಡುವಿನ ಭಿನ್ನಾಭಿಪ್ರಾಯಗಳನ್ನು ಸರಿಪಡಿಸಲು ಸಾಧ್ಯವಿಲ್ಲ ಎಂದು ನಮಗೆ ಖಚಿತವಾಯಿತು.

ಇತ್ತೀಚೆಗೆ ಡಿವೋರ್ಸ್ ಸಾಮಾನ್ಯ

ಅದಕ್ಕಾಗಿಯೇ ನಾವು ಪರಸ್ಪರ ಒಪ್ಪಿಗೆಯಿಂದ ಬೇರೆಯಾದೆವು. ಯಾರೂ ವಿಚ್ಛೇದನ ಪಡೆಯಬೇಕೆಂದು ಮದುವೆಯಾಗುವುದಿಲ್ಲ. ಇತ್ತೀಚೆಗೆ ಡಿವೋರ್ಸ್ ಸಾಮಾನ್ಯವಾಗಿದೆ ಎನ್ನುತ್ತಾರೆ. ಹಿಂದೆಯೂ ಗಂಡ-ಹೆಂಡತಿ ನಡುವೆ ಜಗಳಗಳಾಗುತ್ತಿದ್ದವು. ಆದರೆ, ಆಗ ಮಹಿಳೆಯರು ತವರು ಮನೆಗೆ ಮರಳಿದರೆ, ಅಪ್ಪ ನಮ್ಮನ್ನು ಸಾಕಬಲ್ಲರೇ ಎಂಬ ಅನುಮಾನವಿರುತ್ತಿತ್ತು. ಆ ಭಯದಿಂದಲೇ ಸಂಬಂಧದಲ್ಲಿ ಮುಂದುವರಿಯುತ್ತಿದ್ದರು ಎಂದು ನಿಹಾರಿಕಾ ಹೇಳಿದರು.



Source link

Leave a Reply

Your email address will not be published. Required fields are marked *