
ಅಮೃತಧಾರೆ ಧಾರಾವಾಹಿಯಲ್ಲಿ ಮಲ್ಲಿಯ ಮದುವೆ ನಿಲ್ಲುವ ಹಂತ ತಲುಪಿದೆ. ಮದುವೆ ಮಂಟಪದಲ್ಲಿ ಸುನಿಲ್, ಜೈದೇವನ ಶಿಷ್ಯ ಎಂಬ ಸತ್ಯ ಭೂಮಿಕಾ ಮತ್ತು ಗೌತಮ್ಗೆ ತಿಳಿದಿದ್ದು, ಜೈದೇವನ ಕುತಂತ್ರವನ್ನು ಬಯಲು ಮಾಡಲು ಭೂಮಿಕಾ ಸಿದ್ಧಳಾಗಿದ್ದಾಳೆ. ಈ ಮದುವೆ ನಿಂತರೆ ಮಲ್ಲಿಯ ಮುಂದಿನ ಗತಿ ಏನು ಎಂಬ ಕುತೂಹಲ ಮೂಡಿದೆ.<img><p>ಅಮೃತಧಾರೆ ಸೀರಿಯಲ್ (Amruthadhaare Serial) ಇದೀಗ ಅಸಲಿ ಆಟ ಶುರುವಾಗಿದೆ. ಮಲ್ಲಿಗೆ ಇನ್ನೇನು ಸುನಿಲ್ ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿಯೇ ಆತನ ಅಸಲಿಯತ್ತು ಭೂಮಿಕಾ ಮತ್ತು ಗೌತಮ್ ಎದುರು ಬಯಲಾಗಿದೆ.</p><img><p>ಸುನಿಲ್ನನ್ನು ನೋಡಿದ ಪಾರ್ಥ, ಅವನು ಜೈದೇವನ ಶಿಷ್ಯ ಎಂದು ಹೇಳಿದರೆ, ಅತ್ತ ಆಕಾಶ್ ಸುನೀಲ್ನ ಅಸಲಿಯತ್ತನ್ನು ಪತ್ತೆ ಮಾಡಿ ಅಮ್ಮನಿಗೆ ತಿಳಿಸಿದ್ದಾನೆ. ಭೂಮಿಕಾ ಬೆಂಕಿಯಾಗಿದ್ದಾಳೆ.</p><img><p>ಜೈದೇವನ ಬಳಿ ಹೋಗಿ ಕೆಂಡಾಮಂಡಲವಾದ ಭೂಮಿಕಾ, ಇನ್ನೊಬ್ಬ ಗಂಡಸನ್ನು ಹೆಂಡತಿಯ ಹಿಂದೆ ಬಿಟ್ಟವ ನಿನ್ನಂಥವರನ್ನು ಗಂಡಸು ಅನ್ನುವುದಿಲ್ಲ ಎಂದು ಕೆಂಡ ಕಾರಿದ್ದಾಳೆ. ಜೈದೇವ ಎದುರಾಡಲು ಹೋದಾಗ, ಏ.. ನೀನೇನು ಅವಳ ಮದುವೆ ನಿಲ್ಲಿಸುತ್ತಿ, ನಾನೇ ನಿಲ್ಲಿಸುತ್ತೇನೆ ಎಂದು ಹೋಗಿದ್ದಾಳೆ.</p><img><p>ಜೈದೇವನ ಕೆಟ್ಟ ದಿನ ಅಂತೂ ಬಂದಾಯ್ತು. ಆದರೆ ಮಲ್ಲಿಯ ಗತಿ ಏನು? ಸುನಿಲ್ ಈಗಾದ್ರೂ ಬಾಯಿ ಬಿಟ್ಟು ನಾನು ಮಲ್ಲಿಯನ್ನು ನಿಜವಾಗಿಯೂ ಪ್ರೀತಿಸ್ತೇನೆ ಎಂದು ಹೇಳ್ತಾನಾ? ಒಂದು ವೇಳೆ ಈ ಮದುವೆ ನಿಂತರೆ ಮಲ್ಲಿಯ ಸ್ಥಿತಿ ಏನು ಎನ್ನುವುದು ಸದ್ಯಕ್ಕಿರುವ ಕುತೂಹಲ.</p><img><p>ಆದರೆ, ಇದರ ನಡುವೆಯೇ, ಅಷ್ಟು ಬುದ್ಧಿವಂತರಾಗಿರುವ ಭೂಮಿಕಾ ಮತ್ತು ಗೌತಮ್ಗೆ ಸುನೀಲ್ ಅಸಲಿಯತ್ತು ಇಷ್ಟು ದಿನ ಪತ್ತೆ ಮಾಡಲು ಸಾಧ್ಯವಾಗಲಿಲ್ಲ ಏಕೆ ಎನ್ನುವುದು ವೀಕ್ಷಕರ ಪ್ರಶ್ನೆ.</p><img><p>ಅಂತೂ ದಿನೇ ದಿನೇ ಸೀರಿಯಲ್ ಕುತೂಹಲ ಕೆರಳಿಸುತ್ತಾ ಇದೆ. ಜೈದೇವ ಸೋಲುವುದು ಗ್ಯಾರೆಂಟಿ. ಆದರೆ ಮಲ್ಲಿ ಬದುಕಿನಲ್ಲಿ ಮತ್ತೊಮ್ಮೆ ಮೋಸ ಆಗಬಾರದು, ಸುನಿಲ್ ಎಲ್ಲ ಸತ್ಯ ಹೇಳಬೇಕು. ಮಲ್ಲಿಯ ಮದುವೆ ಆಗಬೇಕು ಎನ್ನುವುದು ವೀಕ್ಷಕರ ಆಶಯ.</p>
Source link
Amruthadhaare: ನೀನು ಗಂಡಸೇ ಅಲ್ಲ- ಭೂಮಿಕಾ ಬೆಂಕಿ; ಮಲ್ಲಿ ಮದುವೆ ನಿಲ್ಲಿಸಲು ಹೋಗೇ ಬಿಟ್ಟಳು