ಹಬ್ಬದ ದಿನವೇ ಮಸೀದಿಯಿಂದ ಪ್ರಧಾನಿಯನ್ನು ಉಗಿದು ಹೊರದಬ್ಬಿದರು: ಆಗಿದ್ದೇನು? Video Viral | Australian Pm Anthony Albanese Heckled During Eid Prayers Suc

ಹಬ್ಬದ ದಿನವೇ ಮಸೀದಿಯಿಂದ ಪ್ರಧಾನಿಯನ್ನು ಉಗಿದು ಹೊರದಬ್ಬಿದರು: ಆಗಿದ್ದೇನು? Video Viral | Australian Pm Anthony Albanese Heckled During Eid Prayers Suc



ಹಬ್ಬದ ದಿನವೇ ಮಸೀದಿಯಿಂದ ಪ್ರಧಾನಿಯನ್ನು ಉಗಿದು ಹೊರದಬ್ಬಿದರು: ಆಗಿದ್ದೇನು? Video Viral | Australian Pm Anthony Albanese Heckled During Eid Prayers Suc

ರಂಜಾನ್ ಹಬ್ಬದ ವೇಳೆ ಮಸೀದಿಗೆ ಭೇಟಿ ನೀಡಿದ  ಪ್ರಧಾನಿ ತೀವ್ರ ಪ್ರತಿಭಟನೆ ಎದುರಿಸಿದರು. ಗಾಜಾ ಯುದ್ಧದಲ್ಲಿ ಇಸ್ರೇಲ್ ಪರ ನಿಲುವು ತಳೆದಿದ್ದಕ್ಕೆ ಆಕ್ರೋಶಗೊಂಡ ಜನಸಮೂಹ, ಅವರನ್ನು ಮಸೀದಿಯಿಂದ ಹೊರಹೋಗುವಂತೆ ಒತ್ತಾಯಿಸಿ ಮುಖಭಂಗ ಮಾಡಿತು.

ವಿಶ್ವಾದ್ಯಂದ ರಂಜಾನ್​ ಆಚರಣೆಯ ಸಂದರ್ಭದಲ್ಲಿ ಮುಸ್ಲಿಂ ಸಮುದಾಯದವರಿಗೆ ವಿಷ್​ ಮಾಡುವುದು ಮಾಮೂಲು. ಅದರಲ್ಲಿಯೂ ಓಲೈಕೆಗೋ, ಇನ್ನಾವುದೋ ಎಜೆಂಡಾ ಇಟ್ಟುಕೊಂಡೋ ಅಥವಾ ಒಳ್ಳೆಯ ಹೃದಯದಿಂದಲೋ ಒಟ್ಟಿನಲ್ಲಿ ರಾಜಕಾರಣಿಗಳೂ ಅವರಿಗೆ ವಿಷ್​ ಮಾಡುತ್ತಾರೆ. ಮುಸ್ಲಿಮರಂತೆ ಟೋಪಿ ತೊಟ್ಟು ಅವರ ಜೊತೆ ಕೂಟದಲ್ಲಿ ರಾಜಕಾರಣಿಗಳು ಭಾಗಿಯಾಗುವುದು ಹೊಸತೇನಲ್ಲ. ಆದರೆ, ಆಶ್ರಯ ಕೊಟ್ಟಿರುವ ದೇಶದ ಪ್ರಧಾನಿಯನ್ನೇ ಉಗಿದು ಮಸೀದಿಯಿಂದ ಹೊರಗೆ ಕಳುಹಿಸಿರುವ ಘಟನೆಗೆ ಈ ಹಬ್ಬ ಸಾಕ್ಷಿಯಾಗಿದೆ. ಇದಕ್ಕೆ ಕಾರಣ, ಗಾಜಾದ ಪರವಾಗಿ ನಿಲ್ಲುವ ಬದಲು ಇಸ್ರೇಲ್​ ಪರವಾಗಿ ಪ್ರಧಾನಿ ನಿಂತಿರುವುದೇ ಆಗಿದೆ.

ಮಸೀದಿಯಲ್ಲಿ ಪ್ರತಿಭಟನೆ

ಈ ಘಟನೆ ನಡೆದಿರುವುದು ಆಸ್ಟ್ರೇಲಿಯಾದಲ್ಲಿ. ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಶುಕ್ರವಾರ ಸಿಡ್ನಿಯ ಮಸೀದಿಯಲ್ಲಿ ಭಾರಿ ಪ್ರತಿಭಟನೆಗಳನ್ನು ಎದುರಿಸಿದರು. ಅವರು ಈದ್ ಪ್ರಾರ್ಥನೆ ಮತ್ತು ಆಚರಣೆಗಳಲ್ಲಿ ಭಾಗವಹಿಸಲು ಅಲ್ಲಿಗೆ ಆಗಮಿಸಿದ್ದರು, ಆದರೆ ವಾತಾವರಣ ಇದ್ದಕ್ಕಿದ್ದಂತೆ ಉದ್ವಿಗ್ನವಾಯಿತು. ಪ್ರಧಾನಿ ಅಲ್ಬನೀಸ್ ಮತ್ತು ಗೃಹ ವ್ಯವಹಾರಗಳ ಸಚಿವ ಟೋನಿ ಬರ್ಕ್ ಲಕೆಂಬಾ ಮಸೀದಿಯನ್ನು ಪ್ರವೇಶಿಸಿದ ತಕ್ಷಣ, ಜನಸಮೂಹವು ಅವರನ್ನು ಗದರಿಸಲಾರಂಭಿಸಿತು.

ಈದ್​ ದಿನ ಶಾಂತವಾಗಿರಿ ಎಂದ್ರೂ ಕೇಳಲಿಲ್ಲ

ಪ್ರತಿಭಟನಾಕಾರರು ಜೋರಾಗಿ “ಇಲ್ಲಿಂದ ಹೊರಡಿ!” ಎಂದು ಕೂಗಿದರು. ಲಕೆಂಬಾ ಆಸ್ಟ್ರೇಲಿಯಾದ ಅತಿದೊಡ್ಡ ಮಸೀದಿಗಳಲ್ಲಿ ಒಂದಾಗಿದೆ, ಅಲ್ಲಿ ಸಾವಿರಾರು ಜನರು ಈದ್‌ಗಾಗಿ ಸೇರಿದ್ದರು. ಅಲ್ಬನೀಸ್ ಬಂದ ಕೇವಲ 15 ನಿಮಿಷಗಳ ನಂತರ, ಗಾಜಾ ಯುದ್ಧದ ಬಗ್ಗೆ ಜನರ ಕೋಪ ಭುಗಿಲೆದ್ದಿತು. ಪ್ರತಿಭಟನಾಕಾರರು ಅವರನ್ನು ನರಮೇಧದ ಬೆಂಬಲಿಗ ಎಂದೂ ಕರೆದರು. ಸಂಘಟಕರು ಮೈಕ್ರೊಫೋನ್‌ನಲ್ಲಿ “ಇದು ಈದ್, ಸಂತೋಷದ ದಿನ, ದಯವಿಟ್ಟು ಶಾಂತವಾಗಿರಿ” ಎಂದು ಕೂಗಿದರು. ಆದರೆ ಜನಸಮೂಹದ ಕೋಪವು ಕಡಿಮೆಯಾಗಲಿಲ್ಲ ಮತ್ತು ಪ್ರತಿಭಟನೆಗಳು ಹೆಚ್ಚುತ್ತಲೇ ಇದ್ದವು.

ಕಾರಣವೇನು?

ಗಾಜಾದಲ್ಲಿ ಮಿತ್ರ ಇಸ್ರೇಲ್‌ನ ಆಕ್ರಮಣದ ಬಗ್ಗೆ ಅವರ ನಿಲುವಿನ ಬಗ್ಗೆ ಪ್ರತಿಭಟನಾಕಾರರು ಕೋಪ ವ್ಯಕ್ತಪಡಿಸಿದರು. ಗಾಜಾ ಯುದ್ಧ ಪ್ರಾರಂಭವಾದಾಗಿನಿಂದ ಆಸ್ಟ್ರೇಲಿಯಾದ ಮುಸ್ಲಿಂ ಮತ್ತು ಯಹೂದಿ ಸಮುದಾಯಗಳಲ್ಲಿ ಕೆಲವರು ಸರ್ಕಾರದ ನಿಲುವಿನಿಂದ ಅಸಮಾಧಾನಗೊಂಡಿದ್ದಾರೆ. ಸರ್ಕಾರವು ಪ್ಯಾಲೆಸ್ಟೀನಿಯನ್ನರ ಬಗ್ಗೆ ಕಳವಳ ವ್ಯಕ್ತಪಡಿಸಿದೆ, ಪದೇ ಪದೇ ಕದನ ವಿರಾಮಕ್ಕೆ ಕರೆ ನೀಡಿದೆ ಮತ್ತು ಇಸ್ರೇಲ್‌ನ ಆತ್ಮರಕ್ಷಣೆಯ ಹಕ್ಕನ್ನು ಬೆಂಬಲಿಸಿದೆ.

Scroll to load tweet…



Source link

Leave a Reply

Your email address will not be published. Required fields are marked *