
ಸರ್ಕಾರಿ ಉದ್ಯೋಗದ ಬಳಿಕ ಉನ್ನತ ಶಿಕ್ಷಣಕ್ಕೆ ಬೆಂಬಲ ನೀಡಿದ್ದ ಗಂಡನಿಂದ ಜ್ಯೋತಿ ಅಂತರ ಕಾಯ್ದುಕೊಳ್ಳಲು ಆರಂಭಿಸಿದ್ದರು ಎಂಬ ಆರೋಪ ಮಾಡಲಾಗಿದೆ. ಇನ್ಮುಂದೆ ನನಗೆ ನಿಮ್ಮ ಅಗತ್ಯವಿಲ್ಲ ಎಂದು ಜ್ಯೋತಿ ಹೇಳಿ ಗಂಡನಿಗೆ ಮಾನಸಿಕವಾಗಿ ಕಿರುಕುಳ ದೂರವಾಗಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಎಲ್ಲಾ ಘಟನೆ ಬಳಿಕ ಶ್ರೀನಿವಾಸ್ ಮತ್ತು ಜ್ಯೋತಿ ಪ್ರತ್ಯೇಕವಾಗಿ ವಾಸಿಸಲು ಆರಂಭಿಸಿದ್ದರು. ಮಗ ಹುಟ್ಟಿದ ಬಳಿಕ ಮತ್ತೆ ಗಂಡ-ಹೆಂಡ್ತಿ ಜೊತೆಯಾಗಿರಲು ಆರಂಭಿಸಿದ್ದರು. ಮುಂದೆ ಲಕ್ಷ್ಮಿ ನಗರದಲ್ಲಿ ಮನೆ ಖರೀದಿಸುವಂತೆ ಗಂಡನ ಮೇಲೆ ಜ್ಯೋತಿ ಒತ್ತಡ ಹಾಕಲಾರಂಭಿಸಿದ್ದರಂತೆ. ಹೊಸಮನೆ ಖರೀದಿಗಾಗಿ ಶ್ರೀನಿವಾಸ್ 50 ಲಕ್ಷ ರೂಪಾಯಿ ಖರ್ಚು ಮಾಡಿದ್ದರಂತೆ.