
ಉದ್ಯೋಗ (ಉದ್ಯೋಗ) ಎಲ್ಲರಿಗೂ ಅತ್ಯವಶ್ಯಕ. ಆದರೆ ಈ ಕಾಲದಲ್ಲಿ ತುಂಬಾ ಓದಿಕೊಂಡರೂ ಕೈ ಸಂಬಳ ಸಿಗುವ ಒಂದೊಳ್ಳೆ ಉದ್ಯೋಗ ಗಿಟ್ಟಿಸಿಕೊಳ್ಳುವುದು ತುಂಬಾ ಕಷ್ಟ. ತಾವು ಓದಿರುವುದಕ್ಕೆ ತಕ್ಕ ಉದ್ಯೋಗವಿಲ್ಲದೇ ಕೆಲಸವನ್ನೇ ಅನಿವಾರ್ಯ ಕಾರಣಕ್ಕಾಗಿ ಮಾಡುವವರೇ ಹೆಚ್ಚು. ಆದರೆ ದೆಹಲಿಯ ಗುರುಗ್ರಾಮ ಮೂಲದ ಇಂಜಿನಿಯರ್ರೊಬ್ಬ ಬೆಂಗಳೂರಿಗೆ (ಬೆಂಗಳೂರು) ಶಿಫ್ಟ್ ಆಗೋಕೆ ಆಗಲ್ಲ ಎಂಬ ಒಂದೇ ಒಂದು ಕಾರಣಕ್ಕೆ 34 ಲಕ್ಷ ರೂ ವಾರ್ಷಿಕ ಸಂಬಳ ಸಿಗುವ ಕೆಲಸದ ಆಫರ್ ತಿರಸ್ಕರಿಸಿದ್ದಾನೆ. ಉದ್ಯೋಗದ ಕುರಿತು ಈ ಯುವಕ ಮಾಡಿದ ಪೋಸ್ಟ್ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಗೌರವ್ ಶರಣ್ ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡ ಪೋಸ್ಟ್ನಲ್ಲಿ, ಇತ್ತೀಚೆಗೆ ನನಗೆ ಬೆಂಗಳೂರಿನಲ್ಲಿ 35 ಲಕ್ಷ ರೂ ಕಾರ್ಯಕ್ರಮದ ಆಫರ್ ದೊರೆತಿದೆ. ಪ್ಯಾಕೇಜ್ ಮತ್ತು ಕಂಪನಿಯು ಚೆನ್ನಾಗಿತ್ತು. ಆದರೆ ಬೇರೆಡೆಗೆ ಸ್ಥಳಾಂತರವಾಗುವಂತೆ ಬೇಡಿಕೆ ಇರಿಸಲಾಗಿದೆ. ಆದರೆ ಈ ಆಫರ್ ಅನ್ನು ನಾನು ತಿರಸ್ಕರಿಸಿದ್ದೇನೆ. ಏಕೆಂದರೆ ನನಗೆ ಯಾವಾಗಲೂ ಬೆಂಗಳೂರಿಗೆ ಹೋಗಲು ಇಷ್ಟವಿಲ್ಲ ಎಂದು ಬರೆದುಕೊಂಡಿರುವುದನ್ನು ಕಾಣಬಹುದು.
ಪೋಸ್ಟ್ ವೈರಲ್ ಇಲ್ಲಿದೆ
ವೃತ್ತಿ ನವೀಕರಣ:
ನನಗೆ ಇತ್ತೀಚೆಗೆ ಉದ್ಯೋಗದ ಪ್ರಸ್ತಾಪವು ರೂ. ಬೆಂಗಳೂರಿನಲ್ಲಿ 35 ಎಲ್.ಪಿ.ಎ.ಪ್ಯಾಕೇಜ್ ಉತ್ತಮವಾಗಿತ್ತು ಮತ್ತು ಕಂಪನಿಯು ಉತ್ತಮವಾಗಿತ್ತು, ಆದರೆ ಸ್ಥಾನವು ನನ್ನನ್ನು ಸ್ಥಳಾಂತರಿಸಲು ಒತ್ತಾಯಿಸಿತು.
ನಾನು ಈ ಪ್ರಸ್ತಾಪವನ್ನು ನಯವಾಗಿ ತಿರಸ್ಕರಿಸಿದೆ, ನಾನು ಎಂದಿಗೂ ಬೆಂಗಳೂರಿಗೆ ಹೋಗುವುದಿಲ್ಲ ಎಂದು ವಿವರಿಸಿದೆ.
— ಗೌರವ್ ಶರಣ್ (@ಗೌರವ್ ಶರನ್09) ಮಾರ್ಚ್ 21, 2026
ಇದನ್ನೂ ಓದಿ: ಬಾಸ್ನಿಂದ ಕಾಲ್ ಬಂದದ್ದೇ ತಡ ಮೆಟ್ರೋದೊಳಗೆ ಲ್ಯಾಪ್ ಟಾಪ್ ತೆರೆದು ಕೆಲಸ ಮಾಡಲು ಕುಳಿತ ಯುವಕ
ಮಾರ್ಚ್ 21 ರಂದು ಹಂಚಿಕೊಂಡಿದ್ದಾರೆ ಈ ಪೋಸ್ಟ್ ಮೂರು ಲಕ್ಷಕ್ಕೂ ಅಧಿಕ ವೀಕ್ಷಣೆಗಳು ಇವೆ. ಒಬ್ಬ ಬಳಕೆದಾರ, ಬೆಂಗಳೂರಿಗೆ ಹೋಗದಿರಲು ನಿರ್ದಿಷ್ಟ ಕಾರಣವೇನು ಎಂದು ಹೇಳಿದ್ದಾರೆ. ಇತರರು, ಅದ್ಭುತ, ದಯವಿಟ್ಟು ನಿಮ್ಮ ಭರವಸೆಯನ್ನು ಜೀವಮಾನವಿಡೀ ಉಳಿಸಿಕೊಳ್ಳಿ ಮತ್ತು ಬೆಂಗಳೂರಿಗೆ ಯಾವಾಗಲೂ ಬರಬೇಡಿ ಎಂದು ಖಾರವಾಗಿ ಕಾಮೆಂಟ್ ಮಾಡಲಾಗಿದೆ. ಮತ್ತೊಬ್ಬರು, ಒಳ್ಳೆಯ ನಿರ್ಧಾರ. ಬೆಂಗಳೂರಿಗರು ಸದಾ ಆಭಾರಿಯಾಗಿರುತ್ತಾರೆ ಎಂದು ನಿಮಗೆ ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ