
ನಟಿ ಮೇಘನಾ ರಾಜ್ ಅವರ ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಏಳು-ಬೀಳು ಕಂಡಿದ್ದಾರೆ. ಚಿರಂಜೀವಿ ಸರ್ಜಾ (ಚಿರಂಜೀವಿ ಸರ್ಜಾ) ನಿಧನದ ಬಳಿಕ ಅವರು ಸಖತ್ ನೋವು ಅನುಭವಿಸಿದರು. ಪುತ್ರ ರಾಯನ್ (ರಾಯನ್) ಜನಿಸಿದ ಬಳಿಕ ಅವರ ಬದುಕಿನಲ್ಲಿ ಹೊಸ ಅಧ್ಯಾಯ ಆರಂಭವಾಯಿತು. ಸಿಂಗಲ್ ಪೇರೆಂಟ್ ಆಗಿ ಮಕ್ಕಳನ್ನು ಬೆಳೆಸುವುದು ಸುಲಭವಲ್ಲ. ಆ ಬಗ್ಗೆ ಮೇಘನಾ ರಾಜ್ (ಮೇಘನಾ ರಾಜ್) ಅವರು ಮಾತನಾಡಿದ್ದಾರೆ. ‘ರೇಯಾನ್ ಮಿಥುನ್’ ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಅವರು ಖಾಸಗಿ ಜೀವನದ ವಿಷಯಗಳನ್ನು ಹಂಚಿಕೊಂಡಿದ್ದಾರೆ.
‘ಸಿಂಗಲ್ ಪೇರೆಂಟ್ ಆಗಿದ್ದಾಗ ಕಷ್ಟಗಳು ಡಬಲ್ ಆಗಿವೆ. ಅದರಲ್ಲೂ ತಾಯಿಯಾಗಿ ಮತ್ತು ಸೆಲೆಬ್ರಿಟಿಯಾಗಿದ್ದಾಗ 10 ಪಟ್ಟು ಜಾಸ್ತಿ ಕಷ್ಟವಾಗುತ್ತದೆ. ಆ ಮಗುವಿಗೆ ಮೇಲೂ ಸಾಕಷ್ಟು ನಿರೀಕ್ಷೆ ಇರುತ್ತದೆ. ರಾಯನ್ ಹುಡುಗ ಆದ ಕಾರಣ ಆತನ ಜೀವನದಲ್ಲಿ ತಂದೆಯ ರೀತಿ ಮೇಲ್ ಫಿಗರ್ ಇರಬೇಕಾದದ್ದು ತುಂಬಾ ಮುಖ್ಯ. ಈಗ ಅವನಿಗೆ 5 ವರ್ಷ ಆಗುತ್ತಿದೆ. ಅವನ ಚಟುವಟಿಕೆಗಳು ಬದಲಾಗುತ್ತಿವೆ. ಇತ್ತೀಚಿನ ವರ್ಷಗಳಲ್ಲಿ ನಾನು ಸಿಂಗಲ್ ಪೇರೆಂಟ್ ಎಂಬುದು ನನಗೆ ಹೆಚ್ಚು ಫೀಲ್ ಆಗುತ್ತಿದೆ’ ಎಂದು ಮೇಘನಾ ರಾಜ್.
‘ಈ ಮೊದಲು ನಾನು ಇದನ್ನು ನಿಭಾಯಿಸಬಲ್ಲೆ ಎನಿಸಿತ್ತು. ಆದರೆ ಪ್ರತಿದಿನವೂ ನಿಭಾಯಿಸುವುದು ಕಷ್ಟ. ಸಾಕಪ್ಪ ಎನಿಸಿದ ದಿನಗಳು ಕೂಡ ಇವೆ. ಕೆಲವು ದಿನ ಅವನ ಎನರ್ಜಿ ನನ್ನ ಎನರ್ಜಿಗೆ ಹೊಂದಿಕೆ ಆಗಲ್ಲ. ನನ್ನ ಒಬ್ಬಳು ಕಸಿನ್ ಕೂಡ ಸಿಂಗಲ್ ಪೇರೆಂಟ್ ಪಾಲನೆಯಲ್ಲಿ ಬೆಳೆದವಳು. ಆಕೆಯ ಬಳಿ ಹೋಗಿ ನಾನು ಅನುಭವ ಕೇಳಿದೆ. ಸಾಕಷ್ಟು ವಿಷಯ ಚರ್ಚೆ ಮಾಡಿದೆ. ‘ನೀನು ತಾಯಿ. ಒಳ್ಳೆಯ ತಾಯಿ ಆಗುವುದರ ಕಡೆಗೆ ಮಾತ್ರ ಗಮನ ಹರಿಸು. ತಂದೆ ಆಗಲು ಪ್ರಯತ್ನಿಸಬೇಡ. ಅದರ ಅವಶ್ಯಕತೆ ಕೂಡ ಇಲ್ಲ’ ಅಂತ ಆಕೆ ನನಗೆ ಸಲಹೆ ನೀಡಿದರು. ನಾನು ಆ ಸಲಹೆಯನ್ನು ಸರಿಯಾಗಿ ತೆಗೆದುಕೊಂಡೆ. ಅದರಿಂದ ನನಗೆ ಬಹಳ ಅನುಕೂಲವಾಯಿತು. ಕೆಲವು ದಿನ ನನಗೆ ಕಷ್ಟವಾಗುತ್ತದೆ. ಆಗ ರಾಯನ್ ಜೀವನದಲ್ಲಿ ಫಾದರ್ ಫಿಗರ್ ಆಗಬೇಕು’ ಎಂದು ಮೇಘನಾ ರಾಜ್ ಹೇಳಿದ್ದಾರೆ.
Instagram ನಲ್ಲಿ ಈ ಪೋಸ್ಟ್ ಅನ್ನು ವೀಕ್ಷಿಸಿ
‘ನನ್ನನ್ನು ಅರ್ಥ ಮಾಡಿಕೊಳ್ಳುವ ಸ್ನೇಹಿತರು ಇದ್ದಾರೆ. ಅವರ ಜೊತೆ ಮಾತನಾಡಿ ಎಲ್ಲವನ್ನೂ ಹೇಳಿಕೊಳ್ಳುವುದು ಸುಲಭ. ಮಾನಸಿಕವಾಗಿ ನನ್ನ ಮೇಲೆ ಇರುವ ಭಾರ ಹೆಚ್ಚು. ರಾಯನ್ಗೆ ಸೂಕ್ತವಾದ ಶಾಲೆಯನ್ನು ಹುಡುಕುವುದು, ಯಾವುದು ಬೇಕು-ಬೇಡ ಎಂದು ನಿರ್ಧರಿಸುವುದು ತುಂಬಾ ಕಷ್ಟ. ಎಲ್ಲವನ್ನೂ ಚರ್ಚಿಸಿ ನಿರ್ಧರಿಸಲು ನನಗೆ ಪಾರ್ಟ್ನರ್ ಇಲ್ಲ. ರಾಯನ ಎಲ್ಲ ಕೆಲಸಗಳನ್ನು ನಾನೇ ಮಾಡಬೇಕು. ಪಾರ್ಟ್ನರ್ ಇದ್ದರೆ ಇದನ್ನೆಲ್ಲ ಅವರು ಕೂಡ ಆರಂಭ. ಈಗ ನನ್ನ ತಂದೆ-ತಾಯಿಗೆ ವಯಸ್ಸಾಗುತ್ತಿದೆ. ಅವರಿಗೂ ಮಿತಿಗಳಿವೆ. ಅವರಿಗೆ ವಿಶ್ರಾಂತಿ ಬೇಕು. ನಾನು ಎಲ್ಲವನ್ನೂ ನಿಭಾಯಿಸಲೇಬೇಕು. ಅದೇ ಜೀವನ’ ಎಂದು ಮೇಘನಾ ರಾಜ್ ಹೇಳಿದ್ದಾರೆ.
ಇದನ್ನೂ ಓದಿ: ‘ರಾಯನ್ ಫ್ರೆಂಡ್ಸ್ ಗೆ ಬೈಸೆಪ್ಸ್ ತೋರಿಸ್ತಾನೆ’; ಎಲ್ಲಾ ಧ್ರುವ ಎಫೆಕ್ಟ್ ಎಂದ ಮೇಘನಾ ರಾಜ್
ಮಗನಿಗೆ ರಾಯನ್ ಎಂದು ಹೆಸರು ಇಟ್ಟಿದ್ದರ ಹಿಂದಿನ ಇಂಟರೆಸ್ಟಿಂಗ್ ವಿಷಯವನ್ನು ಮೇಘನಾ ರಾಜ್ ವಿವರಿಸಿದ್ದಾರೆ. ‘ಮಗನ ಹೆಸರು ಯಾವುದೇ ಧರ್ಮವನ್ನು ಸೂಚಿಸುವಂತೆ ಇರಬಾರದು. ಏಕೆಂದರೆ, ನಾನು ಆ ರೀತಿ ಬೆಳೆದಿಲ್ಲ. ಚಿರು ಆಲೋಚನೆ ಕೂಡ ಇರಲಿಲ್ಲ. ಭಾರತೀಯ ಹೆಸರು ಆಗಿರಬೇಕು. ಸಂಸ್ಕೃತದ ಪದವೇ ಆಗಿರಬೇಕು ಎಂಬುದು ನನ್ನ ಆಸೆಯಾಗಿದೆ. ಅದಕ್ಕಾಗಿ ಹುಡುಕಿದೆವು. ರಾಯನ್ ಎಂದರೆ ಎಲ್ಲ ಧರ್ಮದಲ್ಲೂ ರಾಜಕುಮಾರ ಎಂಬ ಅರ್ಥವಿದೆ. ಇದಕ್ಕಿಂತ ಉತ್ತಮ ಹೆಸರು ಬೇರೆ ಇಲ್ಲ ಅನಿಸಿತು’ ಎಂದು ಮೇಘನಾ ರಾಜ್ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.