
ಟಿವಿ9 ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಧರ್ಮ ಮತ್ತು ಅಧರ್ಮ ಯಾವುದಕ್ಕೆ ಹೆಚ್ಚು ಪ್ರಾಶಸ್ತ್ಯ ಎಂದು ಡಾ. ಬಸವರಾಜ ಗುರೂಜಿ ವಿವರಿಸಿದ್ದಾರೆ. ಇಂದು ಅನೇಕರಲ್ಲಿ ಧರ್ಮ ಮತ್ತು ಅಧರ್ಮಗಳಲ್ಲಿ ಯಾವುದಕ್ಕೆ ಹೆಚ್ಚು ಪ್ರಾಶಸ್ತ್ಯ ಎಂಬ ಪ್ರಶ್ನೆ ಕಾಡುತ್ತದೆ. ಶಾರ್ಟ್ಕಟ್ಗಳ ಮೂಲಕ ಯಶಸ್ಸು ಸಾಧಿಸುವ ಅಧರ್ಮದ ಮಾರ್ಗಗಳು ತಾತ್ಕಾಲಿಕವಾಗಿ ಜಯವನ್ನು ತಂದುಕೊಟ್ಟಂತೆ ಕಂಡರೂ, ಧರ್ಮದ ಹಾದಿಯಲ್ಲಿನ ಕಷ್ಟಗಳು ಖಂಡಿತವಾಗಿಯೂ ಕಾಣುತ್ತವೆ. ಸನಾತನ ಧರ್ಮದ ಇತಿಹಾಸವು ಶ್ರೀರಾಮಚಂದ್ರ, ಸತ್ಯ ಹರಿಶ್ಚಂದ್ರ ಮತ್ತು ಧರ್ಮರಾಯರಂತಹ ಮಹನೀಯರು ಧರ್ಮ ಮಾರ್ಗದಲ್ಲಿ ಅನುಭವಿಸಿದ ಕಷ್ಟಗಳನ್ನು ನೆನಪಿಸುತ್ತದೆ. ಆದರೂ, ಅಂತಿಮವಾಗಿ ಧರ್ಮ ಜಯ ಅವರ ಜೀವನ ಚರಿತ್ರೆಗಳು ಸಾಬೀತುಪಡಿಸುತ್ತವೆ. ಅಂತಿಮ ಜಯ ಧರ್ಮಕ್ಕೇ ಎಂದು ಡಾ.ಬಸವರಾಜ ಗುರೂಜಿ ಹೇಳಿದ್ದಾರೆ.