
ಬೆಂಗಳೂರು, ಮಾ.26: ದೇಶದ ಮೊದಲ ಹವಾನಿಯಂತ್ರಿತ (AC) ಟರ್ಮಿನಲ್ ಎಂಬ ಹೆಗ್ಗಳಿಕೆಯ ಉದ್ಘಾಟನೆಗೊಂಡ ಬೆಂಗಳೂರಿನ ಬೈಯಪ್ಪನ SMVT ನಿಲ್ದಾಣ, ಇಂದು ತನ್ನ ಗತವೈಭವವನ್ನು ಕಳೆದುಕೊಳ್ಳುತ್ತಿದೆ. ವಿಮಾನ ನಿಲ್ದಾಣದ ಮಾದರಿಯ ವಿನ್ಯಾಸ, ಮತ್ತು ಅತ್ಯಾಧುನಿಕ ಸೌಲಭ್ಯಗಳಿಗೆ ಮಾದರಿ ಈ ನಿಲ್ದಾಣ, ಪ್ರಸ್ತುತ ನಿರ್ವಹಣೆಯ ಕೊರತೆ ಮತ್ತು ಕಸದ ರಾಶಿಯಿಂದಾಗಿ ಸುದ್ದಿಯಲ್ಲಿದೆ. ವಿಶ್ವದರ್ಜೆಯ ಸೌಲಭ್ಯಗಳನ್ನು ಕಲ್ಪಿಸುವುದು ಎಷ್ಟು ಮುಖ್ಯವೋ, ಅದನ್ನು ದಿನನಿತ್ಯ ನಿರ್ವಹಿಸುವುದು ಅಷ್ಟೇ ಮುಖ್ಯ. ಕಸದ ವಿಲೇವಾರಿ, ತಡೆ ಮತ್ತು ನಿರಂತರ ಮೇಲ್ವಿಚಾರಣೆಯಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂಬ ಪ್ರಶ್ನೆ ಎದ್ದಿದೆ. ಆದರೆ ಇದರ ಜೊತೆಗೆ ಜನರ ಜವಾಬ್ದಾರಿ ಕೂಡ ಮರೆಯಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಕೇವಲ ವ್ಯವಸ್ಥೆ ದೂಷಿಸಿದರೆ ಸಾಲದು. ಸಾರ್ವಜನಿಕ ಆಸ್ತಿಯನ್ನು ತಮ್ಮ ಸ್ವಂತ ಆಸ್ತಿಯಂತೆ ಕಾಣುವ ಜನರಲ್ಲಿ ಕಾಣಿಸುತ್ತಿಲ್ಲ. ಎಲ್ಲೆಂದರಲ್ಲಿ ಕಸ ಹಾಕುವುದು, ಉಗುಳುವುದು ಮತ್ತು ಉಳಿಸಿಕೊಳ್ಳುವುದನ್ನು ಕಾಪಾಡುವುದು ಈ ಅವನತಿಗೆ ಪ್ರಮುಖ ಕಾರಣ. “ನಮಗೆ ವಿಶ್ವದರ್ಜೆಯ ಸೌಲಭ್ಯಗಳು ಬೇಕು, ಆದರೆ ಅದನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮದಲ್ಲ” ಎಂಬ ಮನೋಭಾವವು ಅತ್ಯುತ್ತಮ ಮೂಲಸೌಕರ್ಯಗಳನ್ನು ಹಾಳುಮಾಡುತ್ತಿದೆ. ಈ ವಿಡಿಯೋವನ್ನು @Karnataka Portfolio ಎಂಬ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಕ್ಯಾಮರಾ ಹಿಡಿದ ಮಹಿಳೆ ಮೇಲೆ ಕೋಪಗೊಂಡ ದೈವ! ಮೈ ಜುಮ್ ಎನ್ನಿಸುವ ದೃಶ್ಯ
ವಿಡಿಯೋ ಇಲ್ಲಿದೆ ನೋಡಿ:
ಆಧುನಿಕ ಮೂಲಸೌಕರ್ಯ, ಮಧ್ಯಕಾಲೀನ ಮನಸ್ಸು: SMVT ನಿಲ್ದಾಣವನ್ನು ಯಾರು ಹಾಳುಮಾಡಿದರು?
ಇದು ಬೆಂಗಳೂರಿನ SMVT ರೈಲು ನಿಲ್ದಾಣ. ಇದನ್ನು ಉದ್ಘಾಟಿಸಿದಾಗ, ಅದರ ಆಧುನಿಕ ವಿನ್ಯಾಸ, ಶುಚಿತ್ವ ಮತ್ತು ಉತ್ತಮ ಗುಣಮಟ್ಟದ ಸೌಲಭ್ಯಗಳ ದೃಷ್ಟಿಯಿಂದ ಇದು ಭಾರತದ ಅತ್ಯುತ್ತಮ ರೈಲು ನಿಲ್ದಾಣಗಳಲ್ಲಿ ಒಂದಾಗಿದೆ. ಅದು ನಿಂತಿತು … pic.twitter.com/EihXv7rlCL
— ಕರ್ನಾಟಕ ಪೋರ್ಟ್ಫೋಲಿಯೋ (@karnatakaportf) ಮಾರ್ಚ್ 25, 2026
ಕಡ್ಡಾಯ ಕಠಿಣ ನಿಯಮಗಳನ್ನು ಜಾರಿಗೆ ತರಬೇಕು ಮತ್ತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು. ದಂಡ ವಿಧಿಸುವುದು ಮತ್ತು ನಿರಂತರ ಸಿಸಿಟಿವಿ ಕಣ್ಗಾವಲು ಈ ನಿಲ್ದಾಣವನ್ನು ಮತ್ತೆ ಹಳೆಯ ಸ್ಥಿತಿಗೆ ತರಲು ಸಹಕರಿಸಬಹುದು. ಇದು ಕೇವಲ ಸರ್ಕಾರ ಹೊಣೆಯಾಗಿದೆ, ಜನರು ಕೂಡ ಇದಕ್ಕೆ ಜವಾಬ್ದಾರರಾಗಿರುತ್ತಾರೆ. ಕಸ ಹಾಕಲು ಇಟ್ಟಿರುವ ಬಾಕ್ಸ್ ನಲ್ಲೇ ಕಸ ಹಾಕಿದ್ರೆ ಇಂತಹ ಪರಿಸ್ಥಿತಿ ಬರುವುದಿಲ್ಲ. ಜನರು ಕೂಡ ಇದರ ಬಗ್ಗೆ ಕಾಳಜಿ ವಹಿಸಿದ್ರೆ ಈ ಕೆಲಸ ಖಂಡಿತ ಯಶಸ್ವಿಯಾಗುತ್ತದೆ ಎಂದು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹೇಳಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.