
<p>’ಅಮೃತಧಾರೆ’ ಸೀರಿಯಲ್ ಖ್ಯಾತಿಯ ರಾಣವ್ ಗೌಡ ಮತ್ತು ‘ಭಾರ್ಗವಿ ಎಲ್ಎಲ್ಬಿ’ ನಟಿ ರಾಧಾ ಭಗವತಿ ಶೀಘ್ರದಲ್ಲೇ ವಿವಾಹವಾಗಲಿದ್ದಾರೆ. ಸೀರಿಯಲ್ ಸೆಟ್ನಲ್ಲಿ ಪ್ರೀತಿಸಿ, ಕುಟುಂಬದ ಒಪ್ಪಿಗೆಯೊಂದಿಗೆ ಒಂದಾಗುತ್ತಿರುವ ಈ ಜೋಡಿಯ ವಿಶೇಷವೆಂದರೆ, ಪತಿ ರಾಣವ್ಗಾಗಿ ರಾಧಾ ಅವರು ನಾನ್ವೆಜ್ ಅಡುಗೆ ಕಲಿಯುತ್ತಿದ್ದಾರೆ</p><img><p>ಭಾರ್ಗವಿ ಎಲ್ಎಲ್ಬಿ ನಟಿ ರಾಧಾ ಭಗವತಿ ಅವರು ಅಮೃತಧಾರೆ ಸೀರಿಯಲ್ ಜೈದೇವ್ ರಾಣವ್ ಗೌಡ ಅವರ ಜೊತೆ ಮದುವೆಯಾಗ್ತಿರೋದು ಎಲ್ಲರಿಗೂ ಗೊತ್ತೇ ಇದೆ. ಶೀಘ್ರದಲ್ಲಿಯೇ ಇವರ ಮದುವೆ ನೆರವೇರಲಿದ್ದು, ಡೇಟ್ ಇನ್ನೂ ಫಿಕ್ಸ್ ಆಗಬೇಕಿದೆ.</p><img><p>ಅಮೃತಧಾರೆ ಸೀರಿಯಲ್ನಲ್ಲಿ ಮಲ್ಲಿ ಪಾತ್ರ ಮಾಡುತ್ತಿದ್ದ ವೇಳೆ ವಿಲನ್ ಜೈದೇವ್ ಜೊತೆ ಪ್ರೇಮಾಂಕುರವಾಗಿತ್ತು ಮಲ್ಲಿಗೆ. ಸೀರಿಯಲ್ನಲ್ಲಿ ಅಲ್ಲದೇ ರಿಯಲ್ ಆಗಿಯೂ ಲವ್ ಮಾಡೋಕೆ ಶುರು ಮಾಡಿದ್ರು. ಅದೇ ರೀತಿ, ರಾಧಾ ಅವರ ಒಳ್ಳೆಯತನ ರಾಣವ್ಗೂ ಇಷ್ಟವಾಗಿತ್ತು.</p><img><p>ಪರಸ್ಪರ ಬಾಯಿ ಬಿಟ್ಟಿರಲಿಲ್ಲ ಇಬ್ಬರೂ. ಆದರೆ ರಾಣವ್ ಪ್ರೀತಿಯ ವಿಷಯವನ್ನು ಅವರ ಅಮ್ಮನಬಳಿ ಹೇಳಿ, ಅವರ ಅಮ್ಮನೇ ರಾಧಾ ಅವರ ಜಾತಕ ನೋಡಿ ಮ್ಯಾಚ್ ಆದ ಬಳಿಕ ನೇರವಾಗಿ ಕಾಲ್ ಮಾಡಿ ಮದುವೆಯಾಗ್ತಿಯಾ ಎಂದು ಕೇಳಿರುವುದಾಗಿ ಸಂದರ್ಶನದಲ್ಲಿ ರಾಧಾ ಹೇಳಿಕೊಂಡಿದ್ದರು.</p><img><p>ಇದೀಗ ಭಾವಿ ಪತಿ ರಾಣವ್ಗಾಗಿ ತಾವು ಚಿಕನ್ ರೆಸಿಪಿ ಕಲಿತಿರುವುದಾಗಿ ರಾಧಾ ಹೇಳಿದ್ದಾರೆ. ನಾನು ವೆಜ್ಜು. ಆದರೆ, ನಾನ್ವೆಜ್ ತಿಂತೀನಿ. ಆದರೆ ಮಾಡಲು ಬರ್ತಿರಲಿಲ್ಲ. ರಾಣವ್ ಅವರಿಗೆ ನಾನ್ವೆಜ್ ಇಷ್ಟ ಎಂದು ಎರಡು ಅಡುಗೆ ಕಲಿತಿದ್ದೇನೆ ಎಂದಿದ್ದಾರೆ.</p><img><p>ಅವರಿಗೆ ನಾನು ಏನು ಮಾಡಿದ್ರೂ ಇಷ್ಟವಾಗುತ್ತೆ ಎನ್ನುವುದು ಗೊತ್ತಿದೆ. ಸದ್ಯ ಎರಡೇ ನಾನ್ವೆಜ್ ರೆಸಿಪಿ ಕಲಿತಿದ್ದೇನೆ. ವೆಜ್ ಅಡುಗೆ ಎಲ್ಲಾ ಚೆನ್ನಾಗಿ ಮಾಡ್ತೇನೆ. ನಾನ್ವೆಜ್ ಇನ್ನೂ ಹೆಚ್ಚಿನದ್ದು ಕಲಿಯುತ್ತೇನೆ ಎಂದಿದ್ದಾರೆ.</p>
Source link
Amruthadhaare ಜೈದೇವ್ಗಾಗಿ ನಾನ್ವೆಜ್ ಮಾಡೋದ ಕಲಿತೆ: ನಾಚುತ್ತಲೇ ನಟಿ ರಾಧಾ ಭಗವತಿ ಹೇಳಿದ್ದೇನು?