Allu Arjun: ಮೆಗಾಸ್ಟಾರ್ ಚಿರಂಜೀವಿಗಾಗಿ ದಂತಕಥೆಗೆ ತಿರುಗೇಟು! ಅಲ್ಲು ಅರ್ಜುನ್ ಕೊಟ್ಟ ಆ ಕೌಂಟರ್ ಏನು ಗೊತ್ತಾ? | When Allu Arjun Defended Chiranjeevi Against A Legendary Director Gvd

Allu Arjun: ಮೆಗಾಸ್ಟಾರ್ ಚಿರಂಜೀವಿಗಾಗಿ ದಂತಕಥೆಗೆ ತಿರುಗೇಟು! ಅಲ್ಲು ಅರ್ಜುನ್ ಕೊಟ್ಟ ಆ ಕೌಂಟರ್ ಏನು ಗೊತ್ತಾ? | When Allu Arjun Defended Chiranjeevi Against A Legendary Director Gvd


ಮೆಗಾಸ್ಟಾರ್ ಚಿರಂಜೀವಿಗಾಗಿ ಐಕಾನ್ ಸ್ಟಾರ್ ಅಲ್ಲು ಅರ್ಜುನ್, ಖ್ಯಾತ ನಿರ್ದೇಶಕರೊಬ್ಬರಿಗೆ ನೇರವಾಗಿಯೇ ತಿರುಗೇಟು ನೀಡಿದ್ದರು. ಅಷ್ಟಕ್ಕೂ ಅಂದು ನಡೆದಿದ್ದೇನು? ಅಲ್ಲು ಅರ್ಜುನ್ ಕೊಟ್ಟ ಆ ಕೌಂಟರ್ ಯಾವುದು?

ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಸದ್ಯ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಮಿಂಚುತ್ತಿದ್ದಾರೆ. ‘ಪುಷ್ಪ 2’ ನಂತರ ಅಟ್ಲಿ ನಿರ್ದೇಶನದ ಪ್ಯಾನ್ ವರ್ಲ್ಡ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಆದರೆ, ಈ ಹಿಂದೆ ಚಿರಂಜೀವಿಗಾಗಿ ಅಲ್ಲು ಅರ್ಜುನ್ ನೀಡಿದ್ದ ಹೇಳಿಕೆಯೊಂದು ಈಗಲೂ ವೈರಲ್ ಆಗುತ್ತಿದೆ. ಕೆಲವು ವರ್ಷಗಳ ಹಿಂದಿನ ಘಟನೆ ಇದು. ಒಮ್ಮೆ ಅಲ್ಲು ಅರ್ಜುನ್ ಸಿನಿಮಾ ಕಾರ್ಯಕ್ರಮವೊಂದರಲ್ಲಿ, ದಂತಕಥೆಯಂತಿದ್ದ ನಿರ್ದೇಶಕ ದಾಸರಿ ನಾರಾಯಣ ರಾವ್ ಮಾತನಾಡುತ್ತಿದ್ದರು.

ತಮ್ಮದೇ ಆದ ವಿಶಿಷ್ಟ ಶೈಲಿ ಮತ್ತು ಅಭಿಮಾನಿಗಳನ್ನು ಸೃಷ್ಟಿಸಿಕೊಂಡ ನಟರ ಬಗ್ಗೆ ಹೇಳುವಾಗ ಎನ್‌ಟಿಆರ್, ನಾಗೇಶ್ವರ ರಾವ್ ಮತ್ತು ಪವನ್ ಕಲ್ಯಾಣ್ ಹೆಸರುಗಳನ್ನು ಪ್ರಸ್ತಾಪಿಸಿದರು. ಆದರೆ, ಚಿರಂಜೀವಿ ಹೆಸರನ್ನು ಅವರು ಕೈಬಿಟ್ಟಿದ್ದರು. ಬಳಿಕ ಅಲ್ಲು ಅರ್ಜುನ್ ಕೂಡ ಹೊಸ ಶೈಲಿಯೊಂದಿಗೆ ಮುನ್ನುಗ್ಗುತ್ತಿದ್ದಾರೆ ಎಂದು ದಾಸರಿ ಹೊಗಳಿದರು. ಆದರೆ ಚಿರಂಜೀವಿ ಪ್ರಸ್ತಾಪವನ್ನೇ ತರಲಿಲ್ಲ.

ಆ ಸಮಯದಲ್ಲಿ ದಾಸರಿ ಮತ್ತು ಚಿರಂಜೀವಿ ನಡುವೆ ಭಿನ್ನಾಭಿಪ್ರಾಯಗಳಿವೆ ಎಂಬ ವದಂತಿಗಳು ಹಬ್ಬಿದ್ದವು. ಈ ಘಟನೆಯ ನಂತರ ಅಲ್ಲು ಅರ್ಜುನ್, ದಾಸರಿಗೆ ಪರೋಕ್ಷವಾಗಿ ತಿರುಗೇಟು ನೀಡಿದರು. ನಂತರದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅಲ್ಲು ಅರ್ಜುನ್, ‘ನನಗೊಂದು ವೈಯಕ್ತಿಕ ಇತಿಹಾಸವಿದೆ. ಆ ಇತಿಹಾಸದ ಹೆಸರು ಮೆಗಾಸ್ಟಾರ್ ಚಿರಂಜೀವಿ. ಅವರು ಬಿಸಿಲಿನಲ್ಲಿ ಕಷ್ಟಪಟ್ಟರೆ, ಆ ನೆರಳಿನಲ್ಲಿ ನಾವೆಲ್ಲರೂ ಬೆಳೆದಿದ್ದೇವೆ.

ನಿರ್ದೇಶಕರಿಗೆ ತಿರುಗೇಟು

ಚಿತ್ರರಂಗದಲ್ಲಿ ಯಾರ ನಂತರ ಯಾರು ಎಂಬ ಚರ್ಚೆ ಬಂದಾಗ, ನನ್ನ ಪ್ರಕಾರ ಚಿರಂಜೀವಿ ಅವರ ನಂತರವೇ ಬೇರೆ ಯಾರಾದರೂ’ ಎಂದು ಖಡಕ್ ಉತ್ತರ ನೀಡಿದ್ದರು. ಈ ಮೂಲಕ ಅಲ್ಲು ಅರ್ಜುನ್, ಚಿಕ್ಕಪ್ಪ ಚಿರಂಜೀವಿಗಾಗಿ ಪರೋಕ್ಷವಾಗಿ ಆ ದಂತಕಥೆಯಂತಿದ್ದ ನಿರ್ದೇಶಕರಿಗೆ ತಿರುಗೇಟು ನೀಡಿದ್ದರು. ಅಂದು ಅಲ್ಲು ಅರ್ಜುನ್ ಅವರ ಈ ಮಾತುಗಳು ಸಿಕ್ಕಾಪಟ್ಟೆ ವೈರಲ್ ಆಗಿದ್ದವು.



Source link

Leave a Reply

Your email address will not be published. Required fields are marked *