Headlines

Dhurandhar 2: ಪತ್ನಿ ದೀಪಿಕಾ ಪಡುಕೋಣೆಗಾಗಿ ಸೇಡು ತೀರಿಸಿಕೊಂಡ ರಣವೀರ್? ವೈರಲ್ ಆಯ್ತು ಆ ಫೈರ್ ಸೀನ್! | Dhurandhar 2 Climax Scene Sparks Om Shanti Om Revenge Memes For Ranveer And Deepika Gvd

Dhurandhar 2: ಪತ್ನಿ ದೀಪಿಕಾ ಪಡುಕೋಣೆಗಾಗಿ ಸೇಡು ತೀರಿಸಿಕೊಂಡ ರಣವೀರ್? ವೈರಲ್ ಆಯ್ತು ಆ ಫೈರ್ ಸೀನ್! | Dhurandhar 2 Climax Scene Sparks Om Shanti Om Revenge Memes For Ranveer And Deepika Gvd



Dhurandhar 2: ಪತ್ನಿ ದೀಪಿಕಾ ಪಡುಕೋಣೆಗಾಗಿ ಸೇಡು ತೀರಿಸಿಕೊಂಡ ರಣವೀರ್? ವೈರಲ್ ಆಯ್ತು ಆ ಫೈರ್ ಸೀನ್! | Dhurandhar 2 Climax Scene Sparks Om Shanti Om Revenge Memes For Ranveer And Deepika Gvd

ಬಾಕ್ಸಾಫೀಸ್‌ನಲ್ಲಿ ‘ಧುರಂಧರ್ 2’ (Dhurandhar 2) ಚಿತ್ರದ ಅಬ್ಬರ ಮುಂದುವರೆದಿದೆ. ರಣವೀರ್ ಸಿಂಗ್, ಅರ್ಜುನ್ ರಾಂಪಾಲ್ ಮತ್ತು ಸಂಜಯ್ ದತ್ ಅವರಂತಹ ಸ್ಟಾರ್ ನಟರಿರುವ ಈ ಚಿತ್ರಕ್ಕೆ ಭರ್ಜರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ರಣವೀರ್ ಸಿಂಗ್ ಅಭಿನಯದ ‘ಧುರಂಧರ್ 2’ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ಇದರ ಕ್ಲೈಮ್ಯಾಕ್ಸ್ ಸೀನ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇದನ್ನು ದೀಪಿಕಾ ಪಡುಕೋಣೆಯ ‘ಓಂ ಶಾಂತಿ ಓಂ’ ಚಿತ್ರಕ್ಕೆ ಹೋಲಿಸಲಾಗುತ್ತಿದೆ. ಪತ್ನಿಗಾಗಿ ರಣವೀರ್ ಸೇಡು ತೀರಿಸಿಕೊಂಡಿದ್ದಾರೆ ಎಂದು ನೆಟ್ಟಿಗರು ಹೊಗಳುತ್ತಿದ್ದಾರೆ.

ಬಾಕ್ಸಾಫೀಸ್‌ನಲ್ಲಿ ‘ಧುರಂಧರ್ 2’ (Dhurandhar 2) ಚಿತ್ರದ ಅಬ್ಬರ ಮುಂದುವರೆದಿದೆ. ರಣವೀರ್ ಸಿಂಗ್, ಅರ್ಜುನ್ ರಾಂಪಾಲ್ ಮತ್ತು ಸಂಜಯ್ ದತ್ ಅವರಂತಹ ಸ್ಟಾರ್ ನಟರಿರುವ ಈ ಚಿತ್ರಕ್ಕೆ ಭರ್ಜರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ಸಿನಿಮಾದ ದೃಶ್ಯಗಳು ಸಿಕ್ಕಾಪಟ್ಟೆ ವೈರಲ್ ಆಗ್ತಿವೆ. ಅಂದಹಾಗೆ, ಥಿಯೇಟರ್ ಒಳಗೆ ವಿಡಿಯೋ ಮಾಡಬೇಡಿ ಅಂತ ಚಿತ್ರತಂಡ ಮನವಿ ಮಾಡ್ತಿದೆ, ಆದ್ರೆ ಪ್ರೇಕ್ಷಕರು ಕೇಳೋ ಹಾಗೆ ಕಾಣ್ತಿಲ್ಲ.

ಇದೇ ವೇಳೆ, ಕೆಲವು ಕ್ರಿಯೇಟಿವ್ ನೆಟ್ಟಿಗರು ‘ಧುರಂಧರ್ 2’ ಚಿತ್ರವನ್ನು 19 ವರ್ಷಗಳ ಹಿಂದಿನ ‘ಓಂ ಶಾಂತಿ ಓಂ’ ಸಿನಿಮಾಗೆ ಲಿಂಕ್ ಮಾಡಿದ್ದಾರೆ. ಸಿನಿಮಾದಲ್ಲಿ ಅರ್ಜುನ್ ರಾಂಪಾಲ್ ಅವರನ್ನು ರಣವೀರ್ ಸಿಂಗ್ ಥಳಿಸುವುದು, ಪತ್ನಿ ದೀಪಿಕಾ ಪಡುಕೋಣೆ (deepika padukone) ಅವರಿಗಾಗಿ ತೆಗೆದುಕೊಂಡ ‘ಸೇಡು’ ಎಂದು ಹೇಳುತ್ತಿದ್ದಾರೆ. ಈ ಬಗ್ಗೆ ‘ಓಂ ಶಾಂತಿ ಓಂ’ ಮತ್ತು ‘ಧುರಂಧರ್ 2’ ಕ್ಲೈಮ್ಯಾಕ್ಸ್ ದೃಶ್ಯಗಳನ್ನು ಸೇರಿಸಿ ಮಜವಾದ ಮೀಮ್‌ಗಳನ್ನು ಕೂಡ ಮಾಡಿದ್ದಾರೆ.

‘ಓಂ ಶಾಂತಿ ಓಂ’ ಜೊತೆಗಿನ ನಂಟು

2007ರಲ್ಲಿ ‘ಓಂ ಶಾಂತಿ ಓಂ’ ಸಿನಿಮಾ ರಿಲೀಸ್ ಆಗಿತ್ತು. ಈ ಚಿತ್ರದಲ್ಲಿ ಅರ್ಜುನ್ ರಾಂಪಾಲ್ ಮತ್ತು ದೀಪಿಕಾ ಪಡುಕೋಣೆ ನಟಿಸಿದ್ದರು. ಸಿನಿಮಾದ ಒಂದು ದೃಶ್ಯದಲ್ಲಿ ಮುಕೇಶ್ ಮೆಹ್ರಾ (ಅರ್ಜುನ್ ರಾಂಪಾಲ್) ತನ್ನ ಪತ್ನಿ ಶಾಂತಿಯನ್ನು (ದೀಪಿಕಾ ಪಡುಕೋಣೆ) ಬೆಂಕಿ ಹಚ್ಚಿ ಸಾಯಿಸುತ್ತಾನೆ. ಬೆಂಕಿ ಹೊತ್ತಿಕೊಂಡ ಸೆಟ್‌ನಲ್ಲಿ ಶಾಂತಿಯನ್ನು ಬಿಟ್ಟು ಮುಕೇಶ್ ಹೊರಟು ಹೋಗುತ್ತಾನೆ. ಆ ಬೆಂಕಿಯಲ್ಲಿ ಸಿಲುಕಿ ಶಾಂತಿ ಪ್ರಾಣ ಬಿಡುತ್ತಾಳೆ.

‘ಧುರಂಧರ್ 2’ ಕ್ಲೈಮ್ಯಾಕ್ಸ್ ಹೀಗಿದೆ

‘ಧುರಂಧರ್ 2’ ಸಿನಿಮಾದ ಕ್ಲೈಮ್ಯಾಕ್ಸ್‌ನಲ್ಲಿ, ಹಮ್ಜಾ ಅಲಿ ಮಜಾರಿ (ರಣವೀರ್ ಸಿಂಗ್) ಪಾತ್ರವು ಐಎಸ್‌ಐ ಮೇಜರ್ ಇಕ್ಬಾಲ್ (ಅರ್ಜುನ್ ರಾಂಪಾಲ್) ಪಾತ್ರವನ್ನು ಬೆಂಕಿ ಹಚ್ಚಿ ಕೊಲ್ಲುತ್ತದೆ. ಈ ದೃಶ್ಯವನ್ನು ಚಿತ್ರೀಕರಿಸಿದ ರೀತಿ ನೋಡಿದ ಜನ, ಆದಿತ್ಯ ಧರ್ ನಿರ್ದೇಶನದ ಈ ಸಿನಿಮಾದಲ್ಲಿ ರಣವೀರ್ ಆ ಹಳೆಯ ದೃಶ್ಯದ ಸೇಡು ತೀರಿಸಿಕೊಂಡಿದ್ದಾರೆ ಎನ್ನುತ್ತಿದ್ದಾರೆ. ಅಷ್ಟೇ ಅಲ್ಲ, ರಣವೀರ್‌ಗೆ ‘ಅತ್ಯುತ್ತಮ ಪತಿ’ ಪ್ರಶಸ್ತಿ ಕೂಡ ಕೊಡುತ್ತಿದ್ದಾರೆ. ಈ ವಿಡಿಯೋ ಮಾಡಿದವರ ಯೋಚನೆಗೂ ನೆಟ್ಟಿಗರು ಸಲಾಂ ಎಂದಿದ್ದಾರೆ.

‘ಧುರಂಧರ್ 2’ ಬಾಕ್ಸ್ ಆಫೀಸ್ ಕಲೆಕ್ಷನ್

‘ಧುರಂಧರ್ 2’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದೆ. ಈ ಸಿನಿಮಾ ವಿಶ್ವಾದ್ಯಂತ 1100 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಭಾರತದಲ್ಲಿ ಮೊದಲ ವಾರದಲ್ಲೇ 624.47 ಕೋಟಿ ರೂಪಾಯಿ ಗಳಿಸಿದೆ. ವೀಕೆಂಡ್‌ನಲ್ಲಿ ಇದರ ಗಳಿಕೆ ಮತ್ತಷ್ಟು ಹೆಚ್ಚಾಗಲಿದ್ದು, ಶನಿವಾರ ಮತ್ತು ಭಾನುವಾರದ ಕಲೆಕ್ಷನ್ ಸೇರಿ ವೀಕೆಂಡ್‌ನಲ್ಲಿ ಸುಮಾರು 13 ಕೋಟಿ ರೂಪಾಯಿ ಗಳಿಸುವ ನಿರೀಕ್ಷೆ ಇದೆ.



Source link

Leave a Reply

Your email address will not be published. Required fields are marked *