
90 ರ ಪ್ರಸ್ತುತದಲ್ಲಿ ಬಾಲಿವುಡ್ ಕಾಡ (ಬಾಲಿವುಡ್) ಅಂದರೆ ಭೂಗತ ಜಗತ್ತು ಇನ್ನಿಲ್ಲದಂತೆ ಇತ್ತು. ಹಲವಾರು ಸಿನಿಮಾ ನಟ, ನಿರ್ದೇಶಕ, ನಿರ್ಮಾಪಕ, ನಟಿಯರಿಗೆ ಭೂಗತ ಲೋಕದ ದುರುಳರಿಂದ ಬೆದರಿಕೆ ಕರೆಗಳು ಬರುತ್ತಿದ್ದವು. ಟಿ-ಸೀರೀಸ್ ಮಾಲೀಕನ ಕೊಲೆಯನ್ನೂ ಈ ಭೂಗತ ಲೋಕದ ಮಂದಿ ಹೊಂದಿದ್ದರು. ಕೆಲವು ನಟರು, ಭಯಗೊಂಡು ಭೂಗತ ಲೋಕದವರ ಪಾರ್ಟಿಗಳಲ್ಲಿ ಸಹ ಕಾಣಿಸಿಕೊಂಡಿದ್ದರು. ಆದರೂ ಮಾತ್ರ ಧೈರ್ಯವನ್ನು ಅದೆಲ್ಲವನ್ನೂ ಎದುರಿಸಿದ್ದರು. ಇದೀಗ ನಟ ವರುಣ್ ಧವನ್, ತಮ್ಮ ಮನೆಗೆ ಭೂಗತ ಲೋಕದ ಕರೆ ಬಂದಿದ್ದ ಘಟನೆಯನ್ನು ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.
ವರುಣ್ ಧವನ್ ತಂದೆ, ಖ್ಯಾತ ನಿರ್ದೇಶಕ ಡೇವಿಡ್ ಧವನ್ ಅವರಿಗೂ ಭೂಗತ ಲೋಕದ ಇಂತಹ ಕರೆಗಳು ಬರುತ್ತಿದ್ದವು. ಈ ಬಗ್ಗೆ ಮಾತನಾಡುವ ವರುಣ್, ನಮ್ಮ ಮನೆಗೆ ಕರೆಗಳು ಬರುತ್ತಿದ್ದವು, ಆದರೆ ಮನೆಯಲ್ಲಿದ್ದ ಕೆಲಸದ ಸಿಬ್ಬಂದಿಗೆ ಅದು ಅಂಡರ್ವರ್ಲ್ಡ್ ಕರೆ ಎಂದು ತಿಳಿದಿರಲಿಲ್ಲ. ಕರೆ ಮಾಡಿದವರ ಜೊತೆ ಸಿಬ್ಬಂದಿ ವಾಗ್ವಾದ ನಡೆಸುತ್ತಿದ್ದರು. ಇದರಿಂದ ನಾವು ತೊಂದರೆಗೆ ಸಿಲುಕಿಕೊಳ್ಳುತ್ತೇವೆ’ ಎಂದು ಅವರು ಹೇಳಿದರು.
ವರುಣ್ ಹೇಳುವಂತೆ, ‘ಒಮ್ಮೆ ಅಂಡರ್ವಾಲ್ಡ್ ನವರು ಫೋನ್ ಮಾಡಿ ಅವರ ಮನೆಯ ಸಿಬ್ಬಂದಿ ಫೋನ್ ರಿಸೀವ್ ಮಾಡಿ ಕರೆ ಮಾಡಿದ ವ್ಯಕ್ತಿಯ ಜೊತೆಗೆ ಜಗಳ ಆಡಿದ್ದರಂತೆ. ಅಷ್ಟೇ ಅಲ್ಲದೆ, ಅವರಿಗೆ ವರುಣ್ ಧವನ್ ಮನೆಯ ಪೂರ್ಣ ವಿಳಾಸ ನೀಡಿ, ‘ಧೈರ್ಯವಿದ್ದರೆ ಪಕ್ಕದ ಗಾರ್ಡನ್ಗೆ ಬಾ, ನಿನಗೆ ಅಲ್ಲೇ ಸರಿಯಾಗಿ ಹೊಡೆಯುತ್ತೇನೆ’ ಎಂದು ಸವಾಲು ಹಾಕಿದ್ದರಂತೆ. ಬಳಿಕ ಚಿತ್ರರಂಗದ ಮತ್ತೊಬ್ಬ ನಟರು ಡೇವಿಡ್ ಧವನ್ ಅವರಿಗೆ ಕರೆ ಮಾಡಿ ಎಚ್ಚರಿಸಿದರು. ಕರೆ ಮಾಡಿದ ವ್ಯಕ್ತಿ ಆಯುಧದೊಂದಿಗೆ ಮನೆಗೆ ಬರುವುದಾಗಿ ಮತ್ತು ನಿಮ್ಮ (ಡೇವಿಡ್ ಧವನ್) ಆಫೀಸ್ ಸಮಯದ ವಿವರಗಳನ್ನು ಕೇಳುತ್ತಿದ್ದಾನೆ ಎಂದು ತಿಳಿಸಿ. ವಿಷಯದ ಗಂಭೀರತೆ ಅರಿತ ಧವನ್ ಕುಟುಂಬ, ಸುರಕ್ಷತೆಯ ದೃಷ್ಟಿಯಿಂದ ಅಂದು ರಾತ್ರಿಯೇ ತಮ್ಮ ಮನೆ ಬಿಟ್ಟು ಬೇರೆಡೆಗೆ ಹೋಗಿ ಉಳಿದುಕೊಳ್ಳಬೇಕಾಯಿತಂತೆ. ‘ಈಗ ಇದನ್ನು ನೆನೆಸಿಕೊಂಡರೆ ನಗು ಬರಬಹುದು, ಆದರೆ ಆ ಸಮಯದಲ್ಲಿ ಅದು ನಿಜಕ್ಕೂ ಭಯಾನಕವಾಗಿತ್ತು’ ಎಂದ ವರುಣ್.
ವರುಣ್ ಧವನ್ ಇತ್ತೀಚೆಗೆ ‘ಬಾರ್ಡರ್ 2’ ಚಿತ್ರದಲ್ಲಿ ನಟಿಸಿದ್ದಾರೆ. ಇದು ಬಾಕ್ಸ್ ಆಫೀಸ್ನಲ್ಲಿ ದೊಡ್ಡ ಯಶಸ್ಸು ಕಂಡಿದೆ. ಸದ್ಯ ಅವರ ತಂದೆ ಡೇವಿಡ್ ಧವನ್ ನಿರ್ದೇಶನದ ‘ಹೈ ಜವಾನಿ ತೋ ಇಷ್ಕ್ ಹೋನಾ ಹೈ’ ಚಿತ್ರದ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಇದರಲ್ಲಿ ಪೂಜಾ ಹೆಗ್ಡೆ ಮತ್ತು ಮೃಣಾಲ್ ಠಾಕೂರ್ ನಾಯಕಿಯರಾಗಿ ನಟಿಸಿದ್ದಾರೆ. ಈ ಚಿತ್ರವು ಜೂನ್ 04 ರಂದು ಬಿಡುಗಡೆಯಾಗಬೇಕಿತ್ತು, ಆದರೆ ಅದೇ ದಿನ ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಬಿಡುಗಡೆ ಆಗುತ್ತಿರುವುದರಿಂದ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ