
ಜನವರಿ, ಮಾರ್ಚ್ 30: ಇರಾನ್ ಯುದ್ಧ ನಿಲ್ಲದ ಜೊತೆಗೆ ರಸಗೊಬ್ಬರ, ಎಲ್ಪಿಜಿ, ಪೆಟ್ರೋಲ್, ಡೀಸಲ್, ಗ್ಯಾಸ್ ಪೂರೈಕೆ ಬಗ್ಗೆ ಜನರ ಆತಂಕ ಮುಂದುವರಿದಿದೆ. ಸರ್ಕಾರ ದಿನವೂ ಜನರಿಗೆ ಈ ಅಗತ್ಯ ವಸ್ತುಗಳ ಪೂರೈಕೆ ಸ್ಥಿತಿಯ ಬಗ್ಗೆ ಮಾಹಿತಿ ಒದಗಿಸಲಾಗುತ್ತಿದೆ. ಪೆಟ್ರೋಲಿಯಂ, ನೈಸರ್ಗಿಕ, ಬಂದರು, ಹಡಗು, ಜಲಮಾರ್ಗ ಸಚಿವಾಲಯದ ಅನಿಲ ಅಧಿಕಾರಿಗಳು ಇಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಯೂರಿಯಾ ಸಂಗ್ರಹ ಸಾಕಷ್ಟಿದೆ. ಬೇರೆ ಬೇರೆ ಮೂಲಗಳಿಂದ ರಸಗೊಬ್ಬರ ಪೂರೈಕೆಗೆ (ಯೂರಿಯಾ ಪೂರೈಕೆ) ಪ್ರಯತ್ನಿಸಲಾಗುತ್ತಿದೆ ಎಂದು ಸರ್ಕಾರ ಹೇಳಿದೆ.
ರಸಗೊಬ್ಬರ ಪೂರೈಕೆ ನಿಲ್ಲದಂತೆ ಸರ್ಕಾರದ ಅತೀವ ಯತ್ನ
ಭಾರತದ ಪೆಟ್ರೋಲ್, ಡೀಸಲ್ ಮತ್ತು ಗ್ಯಾಸ್ ಅವಶ್ಯಕತೆಗೆ ಆಮದು ಮೇಲೆ ಹೆಚ್ಚಿನ ಅವಲಂಬನೆ ಇದೆ. ಹಾಗೆಯೇ, ರಸಗೊಬ್ಬರಕ್ಕೂ ಭಾರತ ಆಮದು ಮೇಲೆ ಅವಲಂಬಿತವಾಗಿದೆ. ಹೆಚ್ಚಿನ ರಸಗೊಬ್ಬರ ಆಮದು ಗಲ್ಫ್ ನಿಂದ ಮಾಡಲಾಗುತ್ತಿದೆ. ಪೆಟ್ರೋಲಿಯಂ ಸಚಿವಾಲಯ ನೀಡಿರುವ ಮಾಹಿತಿ ಪ್ರಕಾರ ಶೇ. 20-30% ಯೂರಿಯ, ಶೇ. 30ರಷ್ಟು ಡಿಎಪಿಯನ್ನು ಗಲ್ಫ್ ನಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಭಾರತದಲ್ಲಿ ಯೂರಿಯಾ ಉತ್ಪಾದನೆಗೆ ಬೇಕಾದ ಎಲ್ಎನ್ಜಿ ಗಲ್ಫ್ನಿಂದ ಶೇ. 50ರಷ್ಟು ಪೂರೈಕೆಯಾಗುತ್ತಿದೆ. ರಸಗೊಬ್ಬರ ತಯಾರಿಕೆಗೆ ಅಗತ್ಯವಾಗಿರುವ ಕಚ್ಛಾ ಸಾಮಗ್ರಿಗಳಾದ ಅಮ್ಮೋನಿಯಾ, ಸಲ್ಫರ್ ಇತ್ಯಾದಿಗಳು ಕೂಡ ಆಮದು ಮೇಲೆ ಮಾರಾಟವಾಗುವಂಥವೇ. ದೇಶದೊಳಗಿನ ಯೂರಿಯಾ ಉತ್ಪಾದನೆಯ ಮೇಲೆ ಪರಿಣಾಮ ಬೀರಿದೆ ಎಂದು ಸರ್ಕಾರ ಹೇಳಿದೆ.
ಇದನ್ನೂ ಓದಿ: ಬೇಗ ಡೀಲ್ ಆಗದಿದ್ದರೆ ಇರಾನ್ ಇಂಧನ ಘಟಕಗಳು, ಖರ್ಗ್ ದ್ವೀಪವನ್ನು ಉದಯಿಸುತ್ತೇವೆ: ಡೊನಾಲ್ಡ್ ಟ್ರಂಪ್ ಕಟ್ಟೆಚ್ಚರಿಕೆ
ಸದ್ಯ ರಸಗೊಬ್ಬರ ದಾಸ್ತಾನು ಸಾಕಷ್ಟಿದೆ. ಕಳೆದ ವರ್ಷ ಈ ಅವಧಿಯಲ್ಲಿ 147 ಲಕ್ಷ ಟನ್ ಯೂರಿಯಾ ಇತ್ತು. ಈಗ ಅದು 180 ಲಕ್ಷ ಟನ್ಗಳಷ್ಟಿದೆ. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಬೇಸಾಯ ಹೆಚ್ಚು ಇರುವುದಿಲ್ಲ. ಹೀಗಾಗಿ, ಮುಂಗಾರು ಬೆಳೆ ಸೀಸನ್ಗೆ ಯೂರಿಯಾ ದಾಸ್ತಾನು ಮಾಡಲು ಅವಕಾಶವಿದೆ ಎಂದು ಸರ್ಕಾರವಾಗಿದೆ.
ಯೂರಿಯಾ ಉತ್ಪಾದನೆಗೆ ಸರ್ಕಾರ ಕ್ರಮ ಕೈಗೊಂಡಿದೆ. ಯೂರಿಯಾ ಘಟಕಗಳಿಗೆ ಎಲ್ಎನ್ಜಿ ಪೂರೈಕೆಯನ್ನು ಹೆಚ್ಚಿಸಲಾಗಿದೆ. ಇದರಿಂದ ಯೂರಿಯಾ ಉತ್ಪಾದನೆ ದಿನಕ್ಕೆ 12,000-15,000 ಟನ್ ಹೆಚ್ಚಿದೆ ಎಂದು ಪೆಟ್ರೋಲಿಯಂ ಸಚಿವಾಲಯದ ಅಧಿಕಾರಿಗಳು ಹೇಳಿದ್ದಾರೆ.
ಇದನ್ನೂ ಓದಿ: ಇರಾನ್ ಖರ್ಗ್ ದ್ವೀಪದ ಮೇಲೆ ಟ್ರಂಪ್ಗೆ ಕಣ್ಣು? ಅಂಥದ್ದೇನಿದೆ ಅಲ್ಲಿ?
ಜಾಗತಿಕವಾಗಿ ಯೂರಿಯಾ ಲಭ್ಯತೆ ಶೋಧಿಸಿ, ಗುರುತಿಸಲು ಟ್ಯಾಸ್ಕ್ ಗ್ರೂಪ್ ರಚಿಸಲಾಗುತ್ತಿದೆ. 13.07 ಲಕ್ಷ ಟನ್ಗಳಷ್ಟು ಯೂರಿಯಾ ಖರೀದಿಗಾಗಿ ಜಾಗತಿಕ ಟೆಂಡರ್ ಕರೆಯಲಾಗಿದೆ. ರಷ್ಯಾ, ಸೌದಿ ಅರೇಬಿಯಾ, ಓಮನ್, ಮೊರಾಕ್ಕೊ, ಆಸ್ಟ್ರೇಲಿಯಾ, ಇಂಡೋನೇಷ್ಯಾ, ಮಲೇಷ್ಯಾ, ಜೋರ್ಡಾನ್, ಕೆನಡಾ, ಈಜಿಪ್ಟ್, ಆಲ್ಜೀರಿಯಾ, ಫಿನ್ಲ್ಯಾಂಡ್, ಟೋಬೋ ಮೊದಲಾದ ದೇಶಗಳಿಂದ ಯೂರಿಯಾ ಪೂರೈಕೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಜಾಗತಿಕವಾಗಿ ವಿವಿಧೆಡೆ 16 ಭಾರತೀಯ ಮಿಷನ್ಗಳ ಮೂಲಕ ಪರ್ಯಾಯ ಪೂರೈಕೆ ಮೂಲಗಳನ್ನು ಅನ್ವೇಷಿಸಲಾಗುತ್ತಿದೆ ಎಂದು ಅಧಿಕಾರಿಗಳು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ