
<p>ಚೆನ್ನೈನಲ್ಲಿ ನಡೆದ ಅಸ್ಮಿತಾ ಖೇಲೋ ಇಂಡಿಯಾ ಕಿಕ್ಬಾಕ್ಸಿಂಗ್ ರಾಷ್ಟ್ರೀಯ ಪಂದ್ಯಾವಳಿಯಲ್ಲಿ ಬೆಂಗಳೂರಿನ ಪ್ರತಿಭೆ ದಾನ್ವಿ ಸುರೇಶ್ ಗೌಡ ಬೆಳ್ಳಿ ಪದಕ ಲಭಿಸಿದೆ. ಎಂಟನೇ ತರಗತಿಯ ಈ ವಿದ್ಯಾರ್ಥಿನಿ ಬೆಳ್ಳಿ ಪದಕ ಗಳಿಸಿದ್ದಾರೆ.</p><img><p><strong>ಬೆಂಗಳೂರು (ಮಾ.31): </strong>ಚೆನ್ನೈನಲ್ಲಿ ನಡೆದ ಅಸ್ಮಿತಾ ಖೇಲೋ ಇಂಡಿಯಾ ಕಿಕ್ಬಾಕ್ಸಿಂಗ್ ರಾಷ್ಟ್ರೀಯ ಪಂದ್ಯಾವಳಿಯಲ್ಲಿ ಬೆಂಗಳೂರಿನ ಪ್ರತಿಭೆ ದಾನ್ವಿ ಸುರೇಶ್ ಗೌಡ ಬೆಳ್ಳಿ ಪದಕ ಲಭಿಸಿದೆ. ಎಂಟನೇ ತರಗತಿಯ ಈ ವಿದ್ಯಾರ್ಥಿನಿ ಬೆಳ್ಳಿ ಪದಕ ಗೆಲ್ಲುವ ಮೂಲಕ ರಾಜ್ಯ ಮತ್ತು ಶಾಲೆಯ ಕೀರ್ತಿಯನ್ನು ರಾಷ್ಟ್ರಮಟ್ಟದಲ್ಲಿ ಹೆಚ್ಚಿಸಿದ್ದಾರೆ.</p><img><p>ಕಠಿಣ ಪರಿಶ್ರಮ ಮತ್ತು ಛಲವಿದ್ದರೆ ಸಾಧನೆ ಸುಲಭ ಅನ್ನೋದನ್ನ ದಾನ್ವಿ ಸುರೇಶ್ ಗೌಡ ಸಾಬೀತುಪಡಿಸಿದ್ದಾಳೆ. ಮಾರ್ಚ್ 26 ರಿಂದ 29 ರವರೆಗೆ ಚೆನ್ನೈನಲ್ಲಿ ಆಯೋಜಿಸಲಾಗಿದ್ದ ‘ಅಸ್ಮಿತಾ ಖೇಲೋ ಇಂಡಿಯಾ ಕಿಕ್ಬಾಕ್ಸಿಂಗ್ ರಾಷ್ಟ್ರೀಯ ಪಂದ್ಯಾವಳಿ 2025-26’ರಲ್ಲಿ ದಾನ್ವಿ ಬೆಳ್ಳಿ ಪದಕವನ್ನು ಮುಡಿಗೇರಿಸಿಕೊಂಡಿದ್ದಾಳೆ.</p><img><p>ದಕ್ಷಿಣ ವಲಯವನ್ನು ಪ್ರತಿನಿಧಿಸಿದ್ದ ದಾನ್ವಿ, ರಾಷ್ಟ್ರೀಯ ವೇದಿಕೆಯಲ್ಲಿ ಅಸಾಧಾರಣ ಕೌಶಲ್ಯ ಪ್ರದರ್ಶಿಸಿ ಎದುರಾಳಿಗಳಿಗೆ ಪ್ರಬಲ ಪೈಪೋಟಿ ನೀಡಿದ್ದಳು. ಈ ಯಶಸ್ಸಿನ ಹಿಂದೆ ಸನ್ ಮಾರ್ಷಲ್ ಆರ್ಟ್ಸ್ನ ವಾಕೋ ಇಂಡಿಯಾ ತರಬೇತುದಾರರಾದ ದತ್ತು, ಸಂತೋಷ್ ಹಾಗೂ ರಾಜು ಅವರ ಕಠಿಣ ಮಾರ್ಗದರ್ಶನವಿದೆ.</p><img><p>ಈ ಸಾಧನೆಯು ಎಸ್ಬಿಎಸ್ ಶಿಕ್ಷಣ ಸಂಸ್ಥೆ ಮತ್ತು ಸನ್ ಮಾರ್ಷಲ್ ಅಕಾಡೆಮಿಗೆ ಅಪಾರ ಹೆಮ್ಮೆ ತಂದಿದೆ ಟ್ರೈನರ್ನ ಮಾರ್ಗದರ್ಶನ ಮತ್ತು ನಿರಂತರ ಅಭ್ಯಾಸದಿಂದ ಈ ಪದಕ ಗೆಲ್ಲಲು ಸಾಧ್ಯವಾಯಿತು. ಮುಂದಿನ ದಿನಗಳಲ್ಲಿ ಚಿನ್ನದ ಪದಕ ಗೆಲ್ಲುವ ಗುರಿ ಇದೆ. ಎಂದು ದಾನ್ವಿ ಹೇಳಿಕೊಂಡಿದ್ದಾಳೆ.</p><img><p>ಇದೇ ವೇಳೆ ಕರ್ನಾಟಕ ಕಿಕ್ ಬಾಕ್ಸಿಂಗ್ ಅಸೋಸಿಯೇಷನ್ ಕಾರ್ಯದರ್ಶಿ ಹಾಗೂ ವಾಕೋ ಅಂತರಾಷ್ಟ್ರೀಯ ರೆಫ್ರಿ ಶ್ರೀ ರವಿ ಅವರ ಬೆಂಬಲವನ್ನು ಸ್ಮರಿಸಲಾಗಿದ್ದು, ಅವರಿಗೆ ವಿಶೇಷ ಅಭಿನಂದನೆ ಸಲ್ಲಿಸಲಾಗಿದೆ. ಒಟ್ಟಿನಲ್ಲಿ ಕ್ರೀಡಾ ಲೋಕದ ಈ ಉದಯೋನ್ಮುಖ ಪ್ರತಿಭೆಗೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗುತ್ತಿದೆ.</p>
Source link
ಖೇಲೋ ಇಂಡಿಯಾ ಕಿಕ್ ಬಾಕ್ಸಿಂಗ್: ಕನ್ನಡ ಕುವರಿ ದಾನ್ವಿ ಸುರೇಶ್ ಗೌಡಗೆ ಬೆಳ್ಳಿ ಪದಕ