
ಸಮಾಧಿ ಧ್ವಂಸ ಕುರಿತು ಸಂಕೇತ್ ಅಜ್ಜ ಪ್ರತಿಕ್ರಿಯಿಸಿದ್ದು, ದೇಶದಲ್ಲಿ ಎಲ್ಲಾದರೂ ಈ ರೀತಿ ಸಮಾಧಿ ಹೊಡೆಯುವುದು ಇದೆಯಾ? ಯಾಕೆ ಇಂಥ ದುಷ್ಕೃತ್ಯ ಮಾಡುತ್ತಾರೆ ಅವರಿಗೆ ಏನು ಮಾಡಿದ್ದೇವೆ? ಸಿಎಂ ಸಿದ್ದರಾಮಯ್ಯನವರೇ ನಮಗೆ ನ್ಯಾಯ ಕೊಡಿಸಿ ಎಂದು ಆಗ್ರಹಿಸಿದ್ದಾರೆ.ಸಂಜೆ ಸುಮಾರು ಆರು ಗಂಟೆ ವೇಳೆಗೆ ನಮಗೆ ಸಮಾಧಿ ಕೆಡವಿದ ವಿಚಾರ ತಿಳಿಯಿತು. ಈ ಭಾಗದಲ್ಲಿ ಗಾಂಜಾ ಮೊದಲಾದ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ. ನಮ್ಮ ಮೊಮ್ಮಗನಿಗೆ ಸತ್ತ ಮೇಲೆ ಸಮಾಧಿಯಲ್ಲಿ ನೆಮ್ಮದಿಯಾಗಿರಲು ಬಿಡುತ್ತಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ: ಸಂಕೇತ್ ಪ್ರಕರಣ: ಸುಳೆಬೈಲಿನ ಪ್ರದೇಶದಲ್ಲಿ ನಡೆಯವ ಕರಾಳ ಘಟನೆಗಳನ್ನು ಬಿಚ್ಚಿಟ್ಟ ಸ್ಥಳೀಯರು