
ಗುಜರಾತ್ ಟೈಟಾನ್ಸ್ (ಜಿಟಿ) ವಿರುದ್ಧ ಪಂದ್ಯದ ವೇಳೆ ಪಂಜಾಬ್ ಕಿಂಗ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ತೊಂದರೆಯಾಗಿದ್ದರು. ಹೀಗೆ ಸಂಭವಿಸಿದ್ದು ಪಂಜಾಬ್ ಕಿಂಗ್ ಬ್ಯಾಟರ್ ನಿಂದ. ಅಂದರೆ ಕೂಪರ್ ಕೊನೊಲಿ ಬಾರಿಸಿದ ಚೆಂಡು ಶ್ರೇಯಸ್ ಅಯ್ಯರ್ ಅವರ ಕೈಗೆ ಬಲವಾಗಿ ಬಡಿದಿದೆ.
ಇನ್ನಿಂಗ್ಸ್ನ 12ನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡುವ ಕೂಪರ್ ಕೊನೊಲಿ ಹೊಡೆದ ವೇಗದ ‘ಸ್ಟ್ರೈಟ್ ಡ್ರೈವ್’ ಚೆಂಡು ನಾನ್-ಸ್ಟ್ರೈಕರ್ ಎಂಡ್ನಲ್ಲಿದ್ದ ಶ್ರೇಯಸ್ ಅಯ್ಯರ್ ಅವರ ಮಣಿಕಟ್ಟಿಗೆ ನೇರವಾಗಿ ಬಡಿಯಿತು. ತೀವ್ರ ನೋವಿನಿಂದ ಅಯ್ಯರ್ ಮೈದಾನದಲ್ಲೇ ಕುಸಿದು ಬಿದ್ದ ಅಯ್ಯರ್ ತಕ್ಷಣವೇ ಫಿಸಿಯೋ ಅವರಿಂದ ಚಿಕಿತ್ಸೆ ಪಡೆದರು. ಇದಾದ ಬಳಿಕ ಎದುರಿಸಿದ ಔಟಾಗಿ ಹೊರ ನಡೆದರು.
ಇನ್ನು ಪಂದ್ಯ ಮುಗಿದ ನಂತರ ಮೈದಾನದಲ್ಲಿ ಕಾಣಿಸಿಕೊಂಡಿದ್ದ ಶ್ರೇಯಸ್ ಅಯ್ಯರ್ ಅವರ ಕೈಗೆ ದಪ್ಪವಾಗಿ ಪಟ್ಟಿ (ಟ್ಯಾಪಿಂಗ್) ಕಟ್ಟಲಾಗಿದೆ. ಹೀಗಾಗಿಯೇ ಅವರು ಮುಂದಿನ ಪಂದ್ಯಕ್ಕೆ ಲಭ್ಯರಿರಲಿದ್ದಾರೆಯೇ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.
ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದ ಬಳಿಕ ಮಾತನಾಡಿದ ಶ್ರೇಯಸ್ ಅಯ್ಯರ್, ನೋವು ಕಡಿಮೆ, ಇದಾಗ್ಯೂ ನಾನು ಯಾವುದನ್ನೂ ಈಗಲೇ ಖಚಿತಪಡಿಸಿ ಹೇಳಲು ಇಷ್ಟಪಡುವುದಿಲ್ಲ.
ಹೀಗಾಗಿ ಶ್ರೇಯಸ್ ಅಯ್ಯರ್ ಅವರ ಗಾಯದ ಮೇಲೆ ಪಂಜಾಬ್ ಕಿಂಗ್ಸ್ ತಂಡದ ವೈದ್ಯಕೀಯ ಸಿಬ್ಬಂದಿ ನಿಗಾ ಇಟ್ಟಿದ್ದಾರೆ. ಅಲ್ಲಿ ನಡೆಯುವ ಅಭ್ಯಾಸದ ಅವಧಿಯ ನಂತರವಷ್ಟೇ ಅವರು ಕಣಕ್ಕಿಳಿಯುತ್ತಾರೆ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸುತ್ತಾರೆ.
ಅಂದಹಾಗೆ ಶ್ರೇಯಸ್ ಅಯ್ಯರ್ ಅವರು ದೀರ್ಘಕಾಲದ ಗಾಯದ ನಂತರ ಇತ್ತೀಚೆಗಷ್ಟೇ ಕಮ್ ಬ್ಯಾಕ್ ಮಾಡಿದ್ದರು. ಇದೀಗ ಮತ್ತೊಮ್ಮೆ ಎದುರಾಗಿರುವುದು ಹೊಸ ಚಿಂತೆಗೆ ಕಾರಣವಾಗಿದೆ.