
<p>ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಪ್ರಾಂಶುಪಾಲರು, ಸುಮಾರು 70 ಗೋಧಿ ಮೂಟೆಗಳನ್ನು ಶಾಲಾ ಆವರಣದಲ್ಲಿ 10 ಅಡಿ ಆಳದಲ್ಲಿ ಹೂತಿಟ್ಟ ಪ್ರಕರಣ ಬೆಳಕಿಗೆ ಬಂದಿದೆ. ಸಾರ್ವಜನಿಕರ ದೂರಿನ ಮೇರೆಗೆ ಜೆಸಿಬಿ ಮೂಲಕ ಭೂಮಿ ಅಗೆದಾಗ ಮೂಟೆಗಳು ಸಿಕ್ಕಿವೆ.</p><img><p>ವಸತಿ ಶಾಲೆಯ ಪ್ರಾಂಶುಪಾಲರೊಬ್ಬರು 10 ಅಡಿ ಆಳದಲ್ಲಿ ಸುಮಾರು ಗೋಧಿಯ 70 ಮೂಟೆ ಹೂತಿಟ್ಟ ಪ್ರಕರಣ ಬೆಳಕಿಗೆ ಬಂದಿದೆ. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಆವರಣದಲ್ಲಿ ಗೋಧಿ ಮೂಟೆಗಳನ್ನು ಹೂಳಲಾಗಿದೆ.</p><img><p>ಇಂದು ಜೆಸಿಬಿ ಮೂಲಕ ಕಾರ್ಯಾಚರಣೆ ನಡೆಸಿದಾಗ 10 ಅಡಿ ಆಳದಲ್ಲಿ ಗೋಧಿ ಮೂಟೆಗಳು ಪತ್ತೆಯಾಗಿವೆ. ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಹರೀಶ್ ಎಂಬವರ ವಿರುದ್ಧ ಈ ಗಂಭೀರ ಆರೋಪ ಕೇಳಿ ಬಂದಿದೆ. ಒಂದು ವರ್ಷದ ಹಿಂದೆ ಗೋಧಿ ಮೂಟೆಗಳನ್ನು ಹೂಳಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.</p><img><p>ಪ್ರಾಂಶುಪಾಲ ಹರೀಶ್ ಯಾಕೆ ಗೋಧಿ ಮೂಟೆಗಳನ್ನು ಹೂತರು ಎಂಬುದಕ್ಕೆ ನಿಖರ ಉತ್ತರ ಲಭ್ಯವಾಗಿಲ್ಲ. ರಹಸ್ಯವಾಗಿ ಸಂಗ್ರಹಿಸಿದ್ದ ಗೋಧಿ ಮೂಟೆ ಮಾರಾಟವಾಗದ ಹಿನ್ನೆಲೆ ಅಂತಿಮವಾಗಿ ಹೂತಿರಬಹುದು ಎಂಬ ಅನುಮಾನಗಳು ಮೂಡಿವೆ.</p><img><p>ವಸತಿ ಶಾಲೆಯ ಸಿಬ್ಬಂದಿ ಗೋಧಿ ಹಾಳಾಗಿದ್ದರಿಂದ ಹೂಳಲಾಗಿದೆ ಎಂಬ ಹಾರಿಕೆ ಉತ್ತರ ನೀಡುತ್ತಿದ್ದಾರೆ. ಒಂದು ವೇಳೆ ಗೋಧಿ ಹಾಳಾಗಿದ್ರೆ ಸರ್ಕಾರಕ್ಕೆ ಹಿಂದಿರುಗಿಸಬೇಕಿತ್ತು. ಸೇವನೆಗೆ ಯೋಗ್ಯವಲ್ಲದ ಗೋಧಿ ಆಗಿದ್ರೆ ಆಹಾರ ಇಲಾಖೆ ಸಿಬ್ಬಂದಿ ಗಮನಕ್ಕೆ ತರಬೇಕಿತ್ತು. ಆದ್ರೆ ಈ ಯಾವ ಪ್ರಕ್ರಿಯೆ ನಡೆಯದೇ ಗೋಧಿ ಹೂತಿರೋದು ಹಲವು ಅನುಮಾನಗಳಿಗೆ ಕಾರಣವಾಗಿದೆ.</p><p><strong>ಇದನ್ನೂ ಓದಿ: </strong><strong>ಬಕೆಟ್ ನೀರಲ್ಲಿ ಮುಳುಗಿ ಸತ್ತ 11 ತಿಂಗಳ ಮಗು; ಪತ್ರ ಬರೆದಿಟ್ಟು ನೇಣಿಗೆ ಶರಣಾದ ಟೆಕ್ಕಿ ತಾಯಿ</strong></p><img><p>ಸಾರ್ವಜನಿಕರ ದೂರಿನಡಿ ಅಧಿಕಾರಿಗಳು ಭೂಮಿ ಅಗೆದಾಗ ಅಪಾರ ಪ್ರಮಾಣದ ಗೋಧಿ ಮೂಟೆಗಳು ಪತ್ತೆಯಾಗಿವೆ. 2025ರ ಬೇಸಿಗೆ ಸಂದರ್ಭದಲ್ಲಿ ಗೋಧಿ ಹೂತಿರುವ ಅನುಮಾನ ಮೂಡಿದ್ದು, ವಸತಿ ಶಾಲೆಯ ಮಕ್ಕಳಿಗೆ ಸರಿಯಾಗಿ ಆಹಾರ ವಿತರಣೆ ಮಾಡಿಲ್ಲವಾ ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ. ಈ ಸಂಬಂಧ ತನಿಖೆ ನಡೆಯಬೇಕು ಎಂಬ ಆಗ್ರಹ ಕೇಳಿ ಬಂದಿವೆ.</p><p><strong>ಇದನ್ನೂ ಓದಿ: </strong><strong>ಖರ್ಚಿಗೆ ಒಂದಿಷ್ಟು ಕೊಡಿ? ನಾಚಿಕೆ ಬಿಟ್ಟು ರೈತನ ಬಳಿ ಲಂಚ ಕೇಳಿದ ಅರಣ್ಯ ಇಲಾಖೆ ಸಿಬ್ಬಂದಿ</strong></p>
Source link
10 ಅಡಿ ಆಳದಲ್ಲಿ ಗೋಧಿಯ 70 ಮೂಟೆ ಹೂತಿಟ್ಟ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಪ್ರಿನ್ಸಿಪಾಲ್