
ಇಂದೋರ್, ಎಪ್ರಿಲ್ 03: ಇಂದೋರ್ನ ವಸತಿ ಪ್ರದೇಶದಲ್ಲಿ ನಡೆದ ಅಪಘಾತದ ಎದೆಯು ಝಲ್ಲೆನಿಸುವಂತಿದೆ. ಮನೆಯ ಹೊರಗೆ ಆಟವಾಡುತ್ತಿದ್ದ ಬಾಲಕನ ಮೇಲೆ ಕಾರೊಂದು ಹರಿದಿದೆ. ಆದರೆ ಕೆಲವೇ ಕ್ಷಣಗಳಲ್ಲಿ ಬಾಲಕ ಎದ್ದು ನಿಂತಿರುವುದು ಪವಾಡವೇ ಸರಿ. ಆರೋಪಿ ಚಾಲಕರನ್ನು ನಿಲ್ಲಿಸಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ, ಅಲ್ಲಿ ವೈದ್ಯರು ಪರೀಕ್ಷಿಸಿದ್ದಾರೆ. ಬಾಲಕನ ಕಾಲಿನಲ್ಲಿ ಮೂಳೆ ಮುರಿತವಾಗಿದೆ. ಈ ಮಂಗಳವಾರ ಮಧ್ಯಾಹ್ನ ಬಾಂಬೆ ಆಸ್ಪತ್ರೆಯ ಹಿಂಭಾಗದ ಐಷಾರಾಮಿ ಶಾಂತಿ ನಿಕೇತನ ಕಾಲೋನಿಯಲ್ಲಿ ಘಟನೆ ನಡೆದಿದೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ